ಆ್ಯಪ್ನಗರ

ಆರೂವರೆ ದಶಕಗಳ ಖಾಸ ಗೆಳೆಯನ ಬಗ್ಗೆ ಅಡ್ವಾಣಿ ಹೇಳಿದ್ದಿಷ್ಟು..

ದೇಶದ ಮಹಾನ್‌ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾದ ವಾಜಪೇಯಿ ಅವರನ್ನು ಕಳೆದುಕೊಂಡ ಈ ಕ್ಷಣ ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ದಗಳೂ ಸಿಗುತ್ತಿಲ್ಲ. ಅಟಲ್‌ಜೀ ಕೇವಲ ನನ್ನ ಹಿರಿಯ ಸಹೋದ್ಯೋಗಿಯಷ್ಟೇ ಅಲ್ಲ, 65ಕ್ಕೂ ಹೆಚ್ಚು ವರ್ಷ ಕಾಲ ನನ್ನ ಆತ್ಮೀಯ ಗೆಳೆಯರಾಗಿದ್ದರು ಎಂದು ಮಾಜಿ ಉಪ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ ಅವರ ಆರು ದಶಕಗಳ ಗೆಳೆಯ ಎಲ್‌.ಕೆ. ಆಡ್ವಾಣಿ ಕಣ್ಣೀರು ಸುರಿಸಿದ್ದಾರೆ.

Vijaya Karnataka Web 16 Aug 2018, 10:34 pm
ಹೊಸದಿಲ್ಲಿ: ದೇಶದ ಮಹಾನ್‌ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾದ ವಾಜಪೇಯಿ ಅವರನ್ನು ಕಳೆದುಕೊಂಡ ಈ ಕ್ಷಣ ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ದಗಳೂ ಸಿಗುತ್ತಿಲ್ಲ. ಅಟಲ್‌ಜೀ ಕೇವಲ ನನ್ನ ಹಿರಿಯ ಸಹೋದ್ಯೋಗಿಯಷ್ಟೇ ಅಲ್ಲ, 65ಕ್ಕೂ ಹೆಚ್ಚು ವರ್ಷ ಕಾಲ ನನ್ನ ಆತ್ಮೀಯ ಗೆಳೆಯರಾಗಿದ್ದರು ಎಂದು ಮಾಜಿ ಉಪ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ ಅವರ ಆರೂವರೆ ದಶಕಗಳ ಗೆಳೆಯ ಎಲ್‌.ಕೆ. ಆಡ್ವಾಣಿ ಕಣ್ಣೀರು ಸುರಿಸಿದ್ದಾರೆ.
Vijaya Karnataka Web advani



ಆರ್‌ಎಸ್‌ಎಸ್‌ನ ಪ್ರಚಾರಕ್ ಆಗಿ ನಾವು ಜತೆಯಾದ ದಿನದಂದಿನಿಂದ, ಭಾರತೀಯ ಜನ ಸಂಘದ ಚಟುವಟಿಕೆಗಳು ಮತ್ತು 1980ರಲ್ಲಿ ಭಾರತೀಯ ಜನತಾ ಪಾರ್ಟಿ ಸ್ಥಾಪನೆ ಹಾಗು ನಂತರದ ಎಲ್ಲ ನೆನಪುಗಳು ನನ್ನಲ್ಲಿ ಭದ್ರವಾಗಿವೆ. ಪಕ್ಷ ಕಟ್ಟಲು ಶ್ರಮಿಸಿದ ದಿನಗಳ ಕ್ಷಣಗಳು ಹಸಿರಾಗಿವೆ. ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಹೊರತಾದ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ಆರು ವರ್ಷ ನಡೆಸಿದ ಖ್ಯಾತಿ ಅಟಲ್‌ಜಿ ಅವರಿಗಿದೆ.

ನನ್ನ ಹಿರಿಯರಾಗಿದ್ದರೂ, ಎಲ್ಲ ರೀತಿಯಲ್ಲೂ ಅಟಲ್ ಸಹಕಾರ ನೀಡುತ್ತಿದ್ದರು. ಅವರ ನಾಯಕತ್ವ ಗುಣ, ದೇಶಪ್ರೇಮ, ಮಾನವೀಯ ಗುಣಗಳು ಎಲ್ಲವೂ ನನ್ನಲ್ಲಿ ಪ್ರಭಾವ ಬೀರಿತ್ತು. ಓರ್ವ ಸಮರ್ಥ ರಾಜಕಾರಣಿಗೆ ಇರಬೇಕಾದ ಎಲ್ಲ ಗುಣಗಳು ಅವರಿಗಿದ್ದವು. ನಾನು ಅಟಲ್ ಜೀ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಅಡ್ವಾಣಿ ಹೇಳಿದ್ದಾರೆ.

ಆಡ್ವಾಣಿ ಅವರು ಭಾವುಕ ಪತ್ರದ ಮೂಲಕ ಕಂಬನಿ ಮಿಡಿದ್ದಾರೆ.

''ನಿಮ್ಮ ಅಗಲಿಕೆ ನನಗೆ ತಂದಿರುವ ನೋವನ್ನು ಹೇಳಲು ನನ್ನಲ್ಲಿ ಪದಗಳೇ ಇಲ್ಲ. ನೀವು ನನ್ನ ಹಿರಿಯ ರಾಜಕೀಯ ಸಹೋದ್ಯೋಗಿ ಮಾತ್ರವಾಗಿರಲಿಲ್ಲ, ನನ್ನ 65 ವರ್ಷದ ಆತ್ಮೀಯ ಗೆಳೆಯ. ನಾವಿಬ್ಬರೂ ಆರೆಸ್ಸೆಸ್‌ ಪ್ರಚಾರಕರಾಗಿ ಬೆಳೆದು ರಾಜಕೀಯ ಪ್ರವೇಶಿಸಿದೆವು. ಭಾರತೀಯ ಜನಸಂಘ ಸೇರ್ಪಡೆ, ಆ ನಂತರ ಕಷ್ಟದ ದಿನಗಳು, ತುರ್ತು ಪರಿಸ್ಥಿತಿ, ಜನತಾ ಪಾರ್ಟಿ ಸ್ಥಾಪನೆ, ನಂತರ 1980ರಲ್ಲಿ ಬಿಜೆಪಿ ಸ್ಥಾಪನೆ... ಹೀಗೆ ಎಲ್ಲ ಕಾಲದಲ್ಲೂ ಜತೆಗಿದ್ದೆವು. ಎದುರಾಳಿಗಳನ್ನು ನಗುವಿನಿಂದ ಗೆಲ್ಲುವ ಚತುರತೆ, ನಾಯಕತ್ವದ ಗುಣಗಳು, ಸಮ್ಮೋಹನ ಗೊಳಿಸುವ ಭಾಷಣ, ಅಪ್ರತಿಮ ದೇಶಭಕ್ತಿ ಮತ್ತು ಎಲ್ಲದಕ್ಕಿಂತಲೂ ಹೆಚ್ಚಾಗಿ ಸಹಾನುಭೂತಿ, ನಮ್ರತೆ, ಮಾನವೀಯತೆ ನಿಮ್ಮನ್ನು ನಿಶ್ಕಲ್ಮಶ ರಾಜಕಾರಣಿಯಾಗಿಸಿತ್ತು,'' ಎಂದು ಆಡ್ವಾಣಿ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.


ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಆಡ್ವಾಣಿ ಮತ್ತು ಭೈರೋನ್‌ ಸಿಂಗ್ ಶೇಖಾವತ್‌ ಐದು ದಶಕಗಳಿಗೂ ಹೆಚ್ಚು ಕಾಲ ಆತ್ಮೀಯರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ