ಆ್ಯಪ್ನಗರ

ಮುಸ್ಲಿಮರಾಗಿದ್ದು ನಮ್ಮ ಆಯ್ಕೆ, ಬಲವಂತದಿಂದಲ್ಲ : ಅಸಾವುದ್ದೀನ್ ಓವೈಸಿ

ನಾವು ಯಾರೊಬ್ಬ ನಂಬಿಕೆಗಳ ವಿರುದ್ಧವಾಗಿಲ್ಲ. ನಾವು ಆಯ್ಕೆಯಿಂದ ಮುಸ್ಲಿಮರಾದ ಭಾರತೀಯರು. ನಮ್ಮನ್ನು ಯಾರೂ ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಲ್ಲ ಎಂದು ಓವೈಸಿ ಹೇಳಿದ್ದಾರೆ

TIMESOFINDIA.COM 10 Feb 2019, 10:04 am
ಹೈದರಾಬಾದ್: ನಾವು ನಮ್ಮದೇ ಆಯ್ಕೆಯಿಂದ ಮುಸ್ಲಿಮರಾಗಿದ್ದೇವೆ. ಈ ಧರ್ಮ ಸ್ವೀಕರಿಸುವಂತೆ ನಮ್ಮ ಪೂರ್ವಜರ ಮೇಲೆ ಯಾರೂ ಬಲವಂತ ಹೇರಿರಲಿಲ್ಲ ಎಂದು ಎಐಎಮ್ಐಎಮ್ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಯೋಗ ಗುರು ಬಾಬಾ ರಾಮದೇವ್‌ಗೆ ಟಾಂಗ್ ನೀಡಿದ್ದಾರೆ.
Vijaya Karnataka Web Owisi 1200


ನಾವು ಯಾರೊಬ್ಬ ನಂಬಿಕೆಗಳ ವಿರುದ್ಧವಾಗಿಲ್ಲ. ನಾವು ಆಯ್ಕೆಯಿಂದ ಮುಸ್ಲಿಮರಾದ ಭಾರತೀಯರು. ನಮ್ಮನ್ನು ಯಾರೂ ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಲ್ಲ. ನಮ್ಮ ಪೂರ್ವಜರು ಇಸ್ಲಾಂ ಧರ್ಮವನ್ನು ಸಂಪೂರ್ಣ ಪ್ರಜ್ಞೆಯಲ್ಲಿ ಒಪ್ಪಿಕೊಂಡಿದ್ದರು. ಇಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಯಾವ ರೀತಿಯ ಸಂದೇಶವನ್ನು ನೀಡಬೇಕೆಂದು ಬಯಸುತ್ತೀರಾ ಎಂದವರು ಸಂಘ ಪರಿವಾರ ಮತ್ತು ಯೋಗಗುರು ಬಾಬಾ ರಾಮದೇವ್ ಅವರನ್ನು ಪ್ರಶ್ನಿಸಿದ್ದಾರೆ.

ಬಾಬಾ ರಾಮದೇವ್ ತಮ್ಮ ನಂಬಿಕೆಗಳನ್ನು ತಾವೇ ಇಟ್ಟುಕೊಂಡಿರಬೇಕು, ಇತರರ ಮೇಲೆ ನಿಮ್ಮ (ಬಲಪಂಥೀಯ) ನಂಬಿಕೆಗಳನ್ನು ಹೊರಿಸುವುದು ತಪ್ಪು ಎಂದು ಓವೈಸಿ ಕಿಡಿಕಾರಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡುವಂತ ಹೇಳಿಕೆಗಳನ್ನು ನೀಡುತ್ತ ಸಂಘ ಪರಿವಾರ ಸದಾ ತಪ್ಪುಗಳ ಪುನರಾವರ್ತನೆ ಮಾಡುತ್ತಲೇ ಇರುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಗ ಗುರು ಬಾಬಾ ರಾಮದೇವ್ ಕೇವಲ ಹಿಂದೂಗಳಿಗಷ್ಟೇ ಅಲ್ಲ ಮುಸ್ಲಿಮರಿಗೂ ಶ್ರೀರಾಮ ಪೂರ್ವಜನಾಗಿದ್ದಾನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಓವೈಸಿ ಈ ಮಾತುಗಳನ್ನಾಡಿದ್ದಾರೆ.

ಗುಜರಾತಿನ ನಾಡಿಯಾಡ್‌ನಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಎಷ್ಟೇ ಅಡೆ ತಡೆ ಎದುರಾದರೂ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲೇ ಬೇಕು, ಅಯೋಧ್ಯೆಯಲ್ಲಿ ಮಂದಿರ ಕಟ್ಟಲಾಗದೆಂದಾದರೆ ಮತ್ತೆಲ್ಲಿ ಕಟ್ಟಬೇಕು ನಾವು? ಮೆಕ್ಕಾ, ಮದೀನಾ, ಅಥವಾ ವ್ಯಾಟಿಕನ್ ಸಿಟಿಯಲ್ಲಂತೂ ಕಟ್ಟಲಾಗಲ್ಲ. ಭಗವಂತ ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಎಂಬ ಸತ್ಯವನ್ನು ಯಾರೂ ಅಲ್ಲಗೆಳೆಯಲಾಗದು. ಆತ ನಮಗಷ್ಟೇ ಅಲ್ಲ. ಮುಸ್ಲಿಮರಿಗೂ ಪೂರ್ವಜನಾಗಿದ್ದಾನೆ. ರಾಮ ಮಂದಿರ ನಿರ್ಮಾಣ ದೇಶಕ್ಕೆ ಪ್ರತಿಷ್ಠೆಯ ವಿಷಯ. ಮತ ಬ್ಯಾಂಕ್ ರಾಜಕಾರಣಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ