ಆ್ಯಪ್ನಗರ

ನಾವು ದೇಶದ ಶತ್ರುಗಳಲ್ಲ, ಬಿಜೆಪಿ ಶತ್ರುಗಳು: ಫಾರೂಕ್ ಅಬ್ದುಲ್ಲಾ ಗುಡುಗು!

ಗುಪ್ಕರ್ ಘೋಷಣೆಯ ಜಾರಿಗಾಗಿ ಹೋರಾಟ ನಡೆಸಿರುವ ನಮ್ಮ ಮೈತ್ರಿಕೂಟವನ್ನು ದೇಶದ ಶತ್ರುಗಳೆಂದು ಬಿಂಬಿಸಲಾಗುತ್ತಿದೆ. ಆದರೆ ನಾವು ದೇಶದ ಶತ್ರುಗಳಲ್ಲ ಬದಲಿಗೆ ಬಿಜೆಪಿ ಶತ್ರುಗಳು ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

Vijaya Karnataka Web 9 Nov 2020, 9:11 pm
ಶ್ರೀನಗರ: ಗುಪ್ಕರ್ ಘೋಷಣೆಯ ಜಾರಿಗಾಗಿ ಹೋರಾಟ ನಡೆಸಿರುವ ನಮ್ಮ ಮೈತ್ರಿಕೂಟವನ್ನು ದೇಶದ ಶತ್ರುಗಳೆಂದು ಬಿಂಬಿಸಲಾಗುತ್ತಿದೆ. ಆದರೆ ನಾವು ದೇಶದ ಶತ್ರುಗಳಲ್ಲ ಬದಲಿಗೆ ಬಿಜೆಪಿ ಶತ್ರುಗಳು ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
Vijaya Karnataka Web Farooq Abdullah
ಸಂಗ್ರಹ ಚಿತ್ರ


ಭಾರತದ ಜಾತ್ಯಾತೀತ ಸ್ವರೂಪವನ್ನು ಹಾಳು ಮಾಡಲು ಯತ್ನಿಸುತ್ತಿರುವ ಬಿಜೆಪಿಗೆ ನಾವು ಶತ್ರುಗಳು ಎಂದು ಫಾರೂಕ್ ಅಬ್ದುಲ್ಲಾ ಗುಡುಗಿದ್ದಾರೆ.

ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಭಾರತದ ಎಲ್ಲ ಜನಸಮುದಾಯಗಳ ನಡುವೆ ಒಡಕನ್ನುಂಟು ಮಾಡಿ ಅಧಿಕಾರ ನಡೆಸುವುದು ಬಿಜೆಪಿಯ ಹುನ್ನಾರವಾಗಿದ್ದು, ಅದರ ಈ ಯೋಜನೆಯನ್ನು ನಾವೆಲ್ಲಾ ಒಟ್ಟಾಗಿ ವಿಫಲಗೊಳಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.

ಪಾಕಿಸ್ತಾನಕ್ಕೆ ಹೋಗಬೇಕೆಂದಿದ್ದರೆ 1947ರಲ್ಲೇ ಹೋಗುತ್ತಿರಲಿಲ್ಲವೇ?: ಫಾರೂಕ್ ಅಬ್ದುಲ್ಲಾ ಪ್ರಶ್ನೆ!


ಗುಪ್ಕರ್ ಮೈತ್ರಿಕೂಟವನ್ನು ಗ್ಯಾಂಗ್ ಎಂದು ಕರೆಯಲಾಗುತ್ತಿದೆ. ನಮ್ಮದು ಯಾವುದೇ ಗ್ಯಾಂಗ್ ಅಲ್ಲ, ಬದಲಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಮೈತ್ರಿಕೂಟ. ಆದರೆ ನಮ್ಮನ್ನು ಗ್ಯಾಂಗ್‌ ಎಂದು ಕರೆಯುತ್ತಿರುವವರೇ ಈ ದೇಶದ ಅತ್ಯಂತ ದೊಡ್ಡ ಡಕಾಯಿತರು ಎಂದು ಫಾರೂಕ್ ಅಬ್ದುಲ್ಲಾ ಹರಿಹಾಯ್ದರು.

ನನ್ನನ್ನು ಗಲ್ಲಿಗೆ ಹಾಕಿದರೂ ಚಿಂತೆಯಿಲ್ಲ, ಸಂಕಲ್ಪ ಮಾತ್ರ ಬದಲಾಗುವುದಿಲ್ಲ: ಫಾರೂಕ್ ಅಬ್ದುಲ್ಲಾ!

ಇದೇ ವೇಳೆ ಗುಪ್ಕರ್ ಘೋಷಣೆಯಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಜಂಟಿಯಾಗಿ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದ ಫಾರೂಕ್ ಅಬ್ದುಲ್ಲಾ, ಒಂದೇ ಚಿಹ್ನೆ ಸಿಗುವುದು ಸಾಧ್ಯವಿಲ್ಲವಾದ್ದರಿಂದ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಗಳು ನಿರ್ದಿಷ್ಟ ಚಿಹ್ನೆಯಡಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ