ಪಿಒಕೆಗಾಗಿ ಯುದ್ಧಕ್ಕೂ ಸೇನೆ ರೆಡಿ
ಭಾರತದ ವಿರುದ್ಧ ಸಾಂಪ್ರದಾಯಿಕವಾಗಿ ನೇರ ಯುದ್ಧ ಸಾರುವ ಧೈರ್ಯ ಪಾಕಿಸ್ತಾನಕ್ಕಿಲ್ಲ. ಅದಕ್ಕಾಗಿಯೇ ಅದು ಉಗ್ರರನ್ನು ಛೂ ಬಿಟ್ಟು ಛಾಯಾ ಸಮರ ನಡೆಸುತ್ತಿದೆ. ಇದು ಇನ್ನು ಹೆಚ್ಚು ದಿನ ನಡೆಯದುಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
PTI 24 Sep 2019, 5:00 am
ಹೊಸದಿಲ್ಲಿ: ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಿಚಾರದಲ್ಲಿಯುದ್ಧ ಸೇರಿದಂತೆ ಯಾವುದೇ ಕಾರ್ಯಾಚರಣೆಗೂ ಸಿದ್ಧವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ವಿಜಯ ಕರ್ನಾಟಕ ಸಹೋದರ ಪತ್ರಿಕೆ ಎಕನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿರಾವತ್ ಅವರು ಪಿಒಕೆ ಸಂಬಂಧ ಪಾಕ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ''ಭಾರತದ ವಿರುದ್ಧ ಸಾಂಪ್ರದಾಯಿಕವಾಗಿ ನೇರ ಯುದ್ಧ ಸಾರುವ ಧೈರ್ಯ ಪಾಕಿಸ್ತಾನಕ್ಕಿಲ್ಲ. ಅದಕ್ಕಾಗಿಯೇ ಅದು ಉಗ್ರರನ್ನು ಛೂ ಬಿಟ್ಟು ಛಾಯಾ ಸಮರ ನಡೆಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿಸ್ಥಳೀಯರ ಬೆಂಬಲ ಪಡೆದು ಉಗ್ರವಾದ ಪೋಷಿಸಿಕೊಂಡು ಬರುತ್ತಿದೆ. ಇದು ಇನ್ನು ಹೆಚ್ಚು ದಿನ ನಡೆಯದು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿತೊಡಗಿರುವ ನಮ್ಮ ಸೇನೆಯ 15ನೇ ಕಾಫ್ಸ್ರ್ಗೆ ಕಾಶ್ಮೀರದ ಜತೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ನುಗ್ಗಿ ಅದನ್ನು ನಮ್ಮದಾಗಿಸಿಕೊಳ್ಳುವ ತಾಕತ್ತಿದೆ. ಈ ನಿಟ್ಟಿನಲ್ಲಿನಮ್ಮ ಕಾರ್ಯತಂತ್ರಗಳು ಬದಲಾಗಿವೆ, ಯೋಜನೆಗಳೂ ಸಿದ್ಧಗೊಂಡಿವೆ. ಸರಕಾರದಿಂದ ಹಸಿರು ನಿಶಾನೆ ದೊರೆತಲ್ಲಿಪಿಒಕೆಗೂ ಸೇನೆ ನುಗ್ಗಲಿದೆ,'' ಎಂದು ಹೇಳಿದ್ದಾರೆ.
''370ನೇ ವಿಧಿ ರದ್ದತಿ ನಂತರ ಪಾಕ್ ಇನ್ನಷ್ಟು ಹತಾಶಗೊಂಡಿದೆ. ಕಾಶ್ಮೀರಿಗಳ ಬೆಂಬಲ ಪಡೆಯಲು ಹವಣಿಸುತ್ತಿದೆ. ಪಾಕ್ ಏನೇ ಸಂಚು ರೂಪಿಸಿದರೂ ಅದು ಫಲ ನೀಡದು,'' ಎಂದಿರುವ ರಾವತ್, ''ಜಮ್ಮು-ಕಾಶ್ಮೀರದ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಂತಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಿಒಕೆ, ಗಿಲ್ಗಿಟ್, ಬಲೂಚಿಸ್ತಾನದ ಸಮಸ್ಯೆಯತ್ತ ಗಮನ ಹರಿಸಬೇಕಿದೆ,'' ಎಂದಿದ್ದಾರೆ.
ಕೆಲವು ವಾರಗಳ ಹಿಂದಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ''ಕಾಶ್ಮೀರ ಕುರಿತು ಪಾಕಿಸ್ತಾನದ ಜತೆಗಿನ ಮಾತುಕತೆ ಮುಗಿದ ಅಧ್ಯಾಯ. ಇನ್ನೇನಿದ್ದರೂ ಮಾತುಕತೆ ನಡೆಯುವುದಿದ್ದರೆ ಅದು ಪಿಒಕೆ ಕುರಿತು ಮಾತ್ರ,'' ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದರು. ಅದೇ ರೀತಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೂಡ ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿ ಬಿಸಿ ಮುಟ್ಟಿಸಿದ್ದರು.
ವಿಜಯ ಕರ್ನಾಟಕ ಸಹೋದರ ಪತ್ರಿಕೆ ಎಕನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿರಾವತ್ ಅವರು ಪಿಒಕೆ ಸಂಬಂಧ ಪಾಕ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ''ಭಾರತದ ವಿರುದ್ಧ ಸಾಂಪ್ರದಾಯಿಕವಾಗಿ ನೇರ ಯುದ್ಧ ಸಾರುವ ಧೈರ್ಯ ಪಾಕಿಸ್ತಾನಕ್ಕಿಲ್ಲ. ಅದಕ್ಕಾಗಿಯೇ ಅದು ಉಗ್ರರನ್ನು ಛೂ ಬಿಟ್ಟು ಛಾಯಾ ಸಮರ ನಡೆಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿಸ್ಥಳೀಯರ ಬೆಂಬಲ ಪಡೆದು ಉಗ್ರವಾದ ಪೋಷಿಸಿಕೊಂಡು ಬರುತ್ತಿದೆ. ಇದು ಇನ್ನು ಹೆಚ್ಚು ದಿನ ನಡೆಯದು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿತೊಡಗಿರುವ ನಮ್ಮ ಸೇನೆಯ 15ನೇ ಕಾಫ್ಸ್ರ್ಗೆ ಕಾಶ್ಮೀರದ ಜತೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ನುಗ್ಗಿ ಅದನ್ನು ನಮ್ಮದಾಗಿಸಿಕೊಳ್ಳುವ ತಾಕತ್ತಿದೆ. ಈ ನಿಟ್ಟಿನಲ್ಲಿನಮ್ಮ ಕಾರ್ಯತಂತ್ರಗಳು ಬದಲಾಗಿವೆ, ಯೋಜನೆಗಳೂ ಸಿದ್ಧಗೊಂಡಿವೆ. ಸರಕಾರದಿಂದ ಹಸಿರು ನಿಶಾನೆ ದೊರೆತಲ್ಲಿಪಿಒಕೆಗೂ ಸೇನೆ ನುಗ್ಗಲಿದೆ,'' ಎಂದು ಹೇಳಿದ್ದಾರೆ.
''370ನೇ ವಿಧಿ ರದ್ದತಿ ನಂತರ ಪಾಕ್ ಇನ್ನಷ್ಟು ಹತಾಶಗೊಂಡಿದೆ. ಕಾಶ್ಮೀರಿಗಳ ಬೆಂಬಲ ಪಡೆಯಲು ಹವಣಿಸುತ್ತಿದೆ. ಪಾಕ್ ಏನೇ ಸಂಚು ರೂಪಿಸಿದರೂ ಅದು ಫಲ ನೀಡದು,'' ಎಂದಿರುವ ರಾವತ್, ''ಜಮ್ಮು-ಕಾಶ್ಮೀರದ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಂತಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಿಒಕೆ, ಗಿಲ್ಗಿಟ್, ಬಲೂಚಿಸ್ತಾನದ ಸಮಸ್ಯೆಯತ್ತ ಗಮನ ಹರಿಸಬೇಕಿದೆ,'' ಎಂದಿದ್ದಾರೆ.
ಕೆಲವು ವಾರಗಳ ಹಿಂದಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ''ಕಾಶ್ಮೀರ ಕುರಿತು ಪಾಕಿಸ್ತಾನದ ಜತೆಗಿನ ಮಾತುಕತೆ ಮುಗಿದ ಅಧ್ಯಾಯ. ಇನ್ನೇನಿದ್ದರೂ ಮಾತುಕತೆ ನಡೆಯುವುದಿದ್ದರೆ ಅದು ಪಿಒಕೆ ಕುರಿತು ಮಾತ್ರ,'' ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದರು. ಅದೇ ರೀತಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೂಡ ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿ ಬಿಸಿ ಮುಟ್ಟಿಸಿದ್ದರು.