ಆ್ಯಪ್ನಗರ

'ಭಾರತಕ್ಕೆ ಕಾಲಿಡುವ ಮುನ್ನ ಸ್ವಾತಂತ್ರ್ಯ ಪದದ ಅರ್ಥವೇ ತಿಳಿದಿರಲಿಲ್ಲ'

ಭಾರತದ ಮಣ್ಣಿಗೆ ಕಾಲಿಡುವ ತನಕವೂ ನಮಗೆ ಸ್ವಾತಂತ್ರ್ಯ ಪದದ ಅರ್ಥವೇ ತಿಳಿದಿರಲಿಲ್ಲ, ಬೌದ್ಧ ಧರ್ಮಿಗಳ ರಾಷ್ಟ್ರದಲ್ಲಿ ನಮ್ಮನ್ನು ಮನುಷ್ಯರೆಂದೇ ಪರಿಗಣಿಸುತ್ತಿರಲಿಲ್ಲ

Vijaya Karnataka Web 29 Nov 2017, 3:09 pm
ಹೊಸದಿಲ್ಲಿ: ' ಭಾರತದ ಮಣ್ಣಿಗೆ ಕಾಲಿಡುವ ತನಕವೂ ನಮಗೆ ಸ್ವಾತಂತ್ರ್ಯ ಪದದ ಅರ್ಥವೇ ತಿಳಿದಿರಲಿಲ್ಲ, ಬೌದ್ಧ ಧರ್ಮೀಯರ ರಾಷ್ಟ್ರದಲ್ಲಿ ನಮ್ಮನ್ನು ಮನುಷ್ಯರೆಂದೇ ಪರಿಗಣಿಸುತ್ತಿರಲಿಲ್ಲ' ಇವು ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದಾಳಿಯಲ್ಲಿ ಬಾಂಗ್ಲಾ ಗಡಿ ಮೂಲಕ ಭಾರತ ಪ್ರವೇಶಿಸಿದ ರೊಹಿಂಗ್ಯಾ ಮುಸ್ಲಿಮರ ಮಾತುಗಳು.
Vijaya Karnataka Web we never treated as muslims says rohingya muslims
'ಭಾರತಕ್ಕೆ ಕಾಲಿಡುವ ಮುನ್ನ ಸ್ವಾತಂತ್ರ್ಯ ಪದದ ಅರ್ಥವೇ ತಿಳಿದಿರಲಿಲ್ಲ'


ಹಲವು ವರ್ಷಗಳಿಂದ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಬೇಸತ್ತು ಸಹಸ್ರಾರು ಮಂದಿ ದೇಶ ಬಿಟ್ಟು ಬೇರೆ ಬೇರು ಊರುಗಳಿಗೆ, ದೇಶಗಳಿಗ ಪರಾರಿಯಾಗಿದ್ದಾರೆ. ಅಲ್ಲದೇ ಹಲವಾರು ಮಂದಿ ಭಾರತಕ್ಕೂ ಬಂದಿದ್ದಾರೆ, ಒಟ್ಟಾರೆ ಐದು ಲಕ್ಷಕ್ಕೂ ಅಧಿಕ ಮಂದಿ ಮ್ಯಾನ್ಮಾರ್‌ ಬಿಟ್ಟು ಬಂದಿದ್ದರು, ಇವರಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಭಾರತ ಸೇರಿಕೊಂಡಿದ್ದಾರೆ.

2012ರಲ್ಲಿ ಬಾಂಗ್ಲಾ ಗಡಿ ಮೂಲಕ ದಿಲ್ಲಿ ಪ್ರವಶಿಸಿದ ತಹಿರ್‌ ಹಾಗೂ ಕುಟುಂಬ ಡೈಲಿಮೈಲ್‌ಗೆ ನೀಡಿದ ಸಂದರ್ಶನದ ತಮ್ಮ ಮನದಾಳದ ಮಾತನ್ನು ಆಡಿದ್ದು, ಇಲ್ಲಿ ವಾಸಿಸಲು ಪುಣ್ಯ ಮಾಡಿದ್ದೇವೆ ಎಂದು ತಹೀರ್‌ ಕುಟುಂಬ ಹೇಳಿಕೊಂಡಿದೆ.

ಮ್ಯಾನ್ಮಾರ್‌ಗೆ ಮತ್ತೆ ತೆರಳುವ ಕುರಿತು ಕನಸಿನಲ್ಲೂ ಯೋಚಿಸಿಲ್ಲ, ಅಲ್ಲಿ ನಮ್ಮನ್ನು ಮನುಷ್ಯರಂತೇ ನೋಡುತ್ತಿರಲಿಲ್ಲ, ಹುಟ್ಟಿದಾಗಿನಿಂದಲೂ ಸ್ವಾತಂತ್ರ್ಯ ಪದದ ಅರ್ಥವೇ ನಮಗೆ ತಿಳಿದಿರಲಿಲ್ಲ, ಆದರೆ ಭಾರತದ ಮಣ್ಣನ್ನು ಪ್ರವೇಶಿಸಿದ ಬಳಿಕವಷ್ಟೇ ನಮಗೆ ಸ್ವಾತಂತ್ರ್ಯ ಪದದ ಅರ್ಥ ತಿಳಿದಿದ್ದು ಎಂದು ತಹೀರ್‌ ಭಾವನಾತ್ಮಕವಾಗಿ ನುಡಿದಿದ್ದಾರೆ.

ಇವರೆಲ್ಲರೂ ಹರಿಯಾಣದ ಸಿದ್ಧಿಖ್‌ ನಗರ್‌ನಲ್ಲಿರುವ ವಲಸಿಗರ ವಿಶೇಷ ಶಿಬಿರದಲ್ಲಿ ನೆಲೆಸಿದ್ದು, ಭಾರತ ಬಿಟ್ಟು ಬೇರೆಲ್ಲೂ ಹೋಗಲು ತಮ್ಮಿಂದ ಸಾಧ್ಯವಾಗದು ಎಂದು ಹೇಳಿಕೊಂಡಿದ್ದಾರೆ.

ಮ್ಯಾನ್ಮಾರಿನ ರಖಿನೆ ಎಂಬಲ್ಲಿ ಬದುಕುತ್ತಿರುವ ರೋಹಿಂಗ್ಯಾ ಎಂಬ ಭಾಷೆಯನ್ನು ಮಾತನಾಡುವ ಮುಸ್ಲಿಂ ಸಮುದಾಯದವರನ್ನು ರೋಹಿಂಗ್ಯಾ ಮುಸ್ಲಿಮರೆಂದೇ ಕರೆಯಲಾಗುತ್ತದೆ. ಕಳೆದ ಆಗಸ್ಟ್‌ನಲ್ಲಿ ಇವರ ಮೇಲೆ ಮಯಾನ್ಮಾರ್‌ ಮಿಲಿಟರಿ ದಾಳಿ ನಡೆದಿತ್ತು. ಹೀಗಾಗಿ ಲಕ್ಷ ಮಂದಿ ಮ್ಯಾನ್ಮಾರ್ ಬಿಟ್ಟು ಬಾಂಗ್ಲಾ ಸೇರಿದಂತೆ ಎಲ್ಲಡೆ ಪಲಾಯಾನ ಗೈದಿದ್ದರು.

ಭಾರತಕ್ಕೆ ಬಂದಿದ್ದ ರೊಹಿಂಗ್ಯಾಗಳನ್ನು ಗುರುತಿಸಿ ಗಡೀಪಾರು ಮಾಡಬೇಕು ಎಂದು ಕೇಂದ್ರ ಕೇಂದ್ರ ಸರಕಾರ ನಿರ್ಧಾರಿಸಿತ್ತು. ಆದರೆ ಇದರ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದಲ್ಲಿ ತ್ರಿಸದಸ್ಯ ಪೀಠವನ್ನು ರಚನೆ ಮಾಡಿತ್ತು. ಮುಂದಿನ ತಿಂಗಳು ಈ ಅರ್ಜಿಗಳ ವಿಚಾರಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ