ಆ್ಯಪ್ನಗರ

ಹರಿಯಾಣದಲ್ಲೂಎನ್‌ಆರ್‌ಸಿ ಜಾರಿಗೆ ಸಿಎಂ ಖಟ್ಟರ್‌ ಒಲವು

ಬಿಜೆಪಿಯ ಮಹಾ ಸಂಪರ್ಕ ಅಭಿಯಾನ ಭಾಗವಾಗಿ ಭಾನುವಾರ ಖಟ್ಟರ್‌ ಅವರು ನಿವೃತ್ತ ನ್ಯಾ. ಎಚ್‌.ಎಸ್‌. ಭಲ್ಲಾಮತ್ತು ಭಾರತೀಯ ನೌಕಾಪಡೆ ಮಾಜಿ ಮುಖ್ಯಸ್ಥ ಸುನಿಲ್‌ ಲಂಬಾ ಅವರನ್ನು ಭೇಟಿಯಾದರು.

PTI 16 Sep 2019, 5:00 am
ಚಂಡೀಗಢ: ಇನ್ನೆರಡು ತಿಂಗಳಲ್ಲಿವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಹರಿಯಾಣ ಸಹ ಎನ್‌ಆರ್‌ಸಿ ಜಾರಿಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿಶೀಘ್ರವೇ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಬಿಜೆಪಿಯ ಮಹಾ ಸಂಪರ್ಕ ಅಭಿಯಾನ ಭಾಗವಾಗಿ ಭಾನುವಾರ ಖಟ್ಟರ್‌ ಅವರು ನಿವೃತ್ತ ನ್ಯಾ. ಎಚ್‌.ಎಸ್‌. ಭಲ್ಲಾಮತ್ತು ಭಾರತೀಯ ನೌಕಾಪಡೆ ಮಾಜಿ ಮುಖ್ಯಸ್ಥ ಸುನಿಲ್‌ ಲಂಬಾ ಅವರನ್ನು ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್‌, ''ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿರುವ ಭಲ್ಲಾಅವರು ಸರಕಾರದ ಮನವಿ ಮೇರೆಗೆ ರಾಜ್ಯದಲ್ಲಿಎನ್‌ಆರ್‌ಸಿ ಜಾರಿಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಶೀಘ್ರವೇ ಅವರು ಈ ಸಂಬಂಧ ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ನ್ಯಾ. ಭಲ್ಲಾಅವರ ಸಲಹೆ ಹಾಗೂ ಸೂಚನೆ ಮೇರೆಗೆ ಹರಿಯಾಣದಲ್ಲಿಎನ್‌ಆರ್‌ಸಿ ಜಾರಿಗೆ ಬರಲಿದೆ ,'' ಎಂದಿದ್ದಾರೆ.
Vijaya Karnataka Web khattar

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ