ಆ್ಯಪ್ನಗರ

ನಿಮ್ಮಿಂದಾಗದಿದ್ದರೆ ಹೇಳಿ, ನಾವೇ ಹಿಡಿಯುತ್ತೇವೆ!: ಇಮ್ರಾನ್ ಖಾನ್‌ಗೆ ಪಂಜಾಬ್ ಸಿಎಂ

ಉಗ್ರರ ನಿರ್ಮೂಲನೆ ವಿಚಾರದಲ್ಲಿ ಕಪಟ ನಾಟಕವಾಡುವ ಪಾಕ್‌ ಜತೆಗೆ 'ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು' ಎನ್ನುವ ರೀತಿಯಲ್ಲಿ ಅತ್ಯಂತ ನಿಷ್ಠುರವಾಗಿ ವ್ಯವಹರಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

87654322 20 Feb 2019, 8:09 am
ಪಟಿಯಾಲ: ''ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾನದ ಭವಲ್ಪುರದಲ್ಲಿ ಅಡಗಿ ಕುಳಿತಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ನಿಮ್ಮಿಂದ ಇದು ಸಾಧ್ಯಗದಿದ್ದರೆ ಹೇಳಿ, ಭಾರತವೇ ಆತನನ್ನು ಸೆರೆ ಹಿಡಿದು ತಕ್ಕ ಶಾಸ್ತಿ ಮಾಡುತ್ತದೆ,'' ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಗುಡುಗಿದ್ದಾರೆ.
Vijaya Karnataka Web imran


''ಪುಲ್ವಾಮಾ ದಾಳಿಯಲ್ಲಿ ಜೈಷೆ ಉಗ್ರರ ಕೈವಾಡವಿಲ್ಲ ಎನ್ನುವ ನಿಮಗೆ ಇನ್ನೆಷ್ಟು ಪುರಾವೆಗಳು ಬೇಕು? ಹತ ಉಗ್ರರ ಮೃತ ದೇಹಗಳನ್ನು ಸಾಕ್ಷ್ಯವಾಗಿ ಕಳುಹಿಸಬೇಕೇ?,'' ಎಂದು ಇಮ್ರಾನ್‌ ಅವರನ್ನು ಟ್ವಿಟರ್‌ನಲ್ಲಿ ಕ್ಯಾಪ್ಟನ್‌ ಪ್ರಶ್ನಿಸಿದ್ದಾರೆ. ಉಗ್ರರ ನಿರ್ಮೂಲನೆ ವಿಚಾರದಲ್ಲಿ ಕಪಟ ನಾಟಕವಾಡುವ ಪಾಕ್‌ ಜತೆಗೆ 'ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು' ಎನ್ನುವ ರೀತಿಯಲ್ಲಿ ಅತ್ಯಂತ ನಿಷ್ಠುರವಾಗಿ ವ್ಯವಹರಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ