ಆ್ಯಪ್ನಗರ

Hijab: ಹಿಜಾಬ್ ಧಾರಣೆ ಮೂಲಭೂತ ಹಕ್ಕಲ್ಲ, ನಿಯಮ ಧಿಕ್ಕರಿಸುವಂತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೋಕೇಟ್ ಜನರಲ್ ವಾದ

Hijab Hearing in Supreme Court: ಶಾಲೆಗಳ ಹೊರಗೆ ನಾವು ಹಿಜಾಬ್ ನಿಷೇಧಿಸಿಲ್ಲ. ಶಾಲೆಗೆ ಬರುವ ವಾಹನಗಳಲ್ಲಿ ಹಿಜಾಬ್ ಧರಿಸಿ ಬರಬಹುದು. ಶಾಲೆಯ ಆವರಣದಲ್ಲಿ ಕೂಡಾ ಹಿಜಾಬ್ ಧಾರಣೆಗೆ ನಿಷೇಧವಿಲ್ಲ. ಕೇವಲ ತರಗತಿಯಲ್ಲಿ ಮಾತ್ರ ಹಿಜಾಬ್ ಧರಿಸಬಾರದು ಎಂದು ಹೇಳಲಾಗಿದೆ. ಸಂವಿಧಾನದ ಆರ್ಟಿಕಲ್ 25ರ ಅಡಿ ಹಿಜಾಬ್ ಧಾರಣೆಯು ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ನಿರ್ಧಾರವು ಸಮಂಜಸವಾಗಿದೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ.

Authored byದಿಲೀಪ್ ಡಿ. ಆರ್. | Vijaya Karnataka Web 21 Sep 2022, 6:42 pm

ಹೈಲೈಟ್ಸ್‌:

  • ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನೇ ಪ್ರಸ್ತಾಪಿಸಿದ ಪ್ರಭುಲಿಂಗ ನಾವದಗಿ
  • ತ್ರಿವಳಿ ತಲಾಖ್ ಹಾಗೂ ಗೋ ಹತ್ಯೆಯನ್ನು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಿಲ್ಲ
  • ಹಿಜಾಬ್ ಧಾರಣೆಯು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದು ಸಾಬೀತು ಆಗಿಲ್ಲ: ಪ್ರಭುಲಿಂಗ ನಾವದಗಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web hijab
ಹಿಜಾಬ್ ಧಾರಣೆ ಮೂಲಭೂತ ಹಕ್ಕಲ್ಲ, ನಿಯಮ ಧಿಕ್ಕರಿಸುವಂತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೋಕೇಟ್ ಜನರಲ್ ವಾದ
ಹೊಸ ದಿಲ್ಲಿ: ಹಿಜಾಬ್ ಧಾರಣೆಯು ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಪರವಾಗಿ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ಶಾಲೆ - ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರು, ಹಿಜಾಬ್ ಧಾರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ಧಾರೆ. ವಿದ್ಯಾರ್ಥಿನಿಯರ ಪರ ವಕೀಲರ ವಾದ ಮಂಡನೆ ಈಗಾಗಲೇ ಮುಕ್ತಾಯವಾಗಿದ್ದು, ಸರ್ಕಾರದ ಪರ ವಕೀಲರು ತಮ್ಮ ವಾದ ಮಂಡನೆ ಆರಂಭಿಸಿದ್ದಾರೆ.
ಹಿಜಾಬ್ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ 9ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ತಮ್ಮ ವಾದ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಅವರು ಸಂವಿಧಾನದ ಆರ್ಟಿಕಲ್ 25ರ ಪ್ರಸ್ತಾಪ ಮಾಡಿದರು. ಸಂವಿಧಾನದ ಆರ್ಟಿಕಲ್‌ 25ರ ಅಡಿ ಯಾವುದೇ ಧರ್ಮದ ಎಲ್ಲಾ ಧಾರ್ಮಿಕ ಆಚರಣೆಗಳನ್ನೂ ಮೂಲಭೂತ ಹಕ್ಕು ಎಂದು ಪರಿಗಣನೆ ಮಾಡಿಲ್ಲ ಎಂದು ವಾದಿಸಿದ ನಾವದಗಿ ಅವರು, ಎಲ್ಲಾ ಆಚರಣೆಗಳಿಗೂ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದರು.

Hijab: ಹಿಜಾಬ್ ನಿಷೇಧದ ಬಳಿಕ ಎಷ್ಟು ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರ ಉಳಿದರು? ನಿಖರ ಲೆಕ್ಕ ಕೇಳಿದೆ ಸುಪ್ರೀಂ ಕೋರ್ಟ್
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನೇ ಪ್ರಸ್ತಾಪಿಸಿದ ಪ್ರಭುಲಿಂಗ ನಾವದಗಿ, ತ್ರಿವಳಿ ತಲಾಖ್ ಹಾಗೂ ಗೋ ಹತ್ಯೆಯನ್ನು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಿಲ್ಲ ಎಂದು ಹೇಳಿದರು. ಹೀಗಾಗಿ, ಇದೀಗ ಹಿಜಾಬ್ ಧಾರಣೆಯು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದು ಸಾಬೀತು ಮಾಡಬೇಕಿದೆ. ಆಗ ಮಾತ್ರ ಸಂವಿಧಾನದ ಆರ್ಟಿಕಲ್ 25ರ ಅಡಿ ಹಿಜಾಬ್ ಧಾರಣೆಗೆ ಸಾಂವಿಧಾನಿಕ ರಕ್ಷಣೆ ಲಭ್ಯವಾಗುತ್ತದೆ ಎಂದರು.

ಸಂವಿಧಾನದ ಆರ್ಟಿಕಲ್ 25ರ ಅಡಿ ಹಿಜಾಬ್ ಧಾರಣೆಯು ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ನಿರ್ಧಾರವು ಸಮಂಜಸವಾಗಿದೆ. ಇದನ್ನು ಕೋರ್ಟ್‌ ನಿರ್ಧರಿಸಬೇಕಿದೆ ಎಂದು ನಾವದಗಿ ಅವರು ವಾದಿಸಿದರು. ಹಿಜಾಬ್ ಮೂಲಭೂತ ಹಕ್ಕು ಅಲ್ಲವಾದ್ದರಿಂದ ಶಾಲೆ - ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಸರ್ಕಾರ ಹೊರಡಿಸುವ ಆದೇಶವನ್ನು ಧಿಕ್ಕರಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Hijab Row: ಪಿಎಫ್‌ಐ ಪ್ರಭಾವದಿಂದ ಹಿಜಾಬ್ ಗದ್ದಲ: ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರದ ಹೇಳಿಕೆ
ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಸಮವಸ್ತ್ರ ನೀತಿ ಜಾರಿಗೆ ತಂದಿದೆ. ಸಂವಿಧಾನದ ಆರ್ಟಿಕಲ್ 19ರ ಅಡಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳ ಹೊರಗೆ ನಾವು ಹಿಜಾಬ್ ನಿಷೇಧಿಸಿಲ್ಲ. ಶಾಲೆಗೆ ಬರುವ ವಾಹನಗಳಲ್ಲಿ ಹಿಜಾಬ್ ಧರಿಸಿ ಬರಬಹುದು. ಶಾಲೆಯ ಆವರಣದಲ್ಲಿ ಕೂಡಾ ಹಿಜಾಬ್ ಧಾರಣೆಗೆ ನಿಷೇಧವಿಲ್ಲ. ಕೇವಲ ತರಗತಿಯಲ್ಲಿ ಮಾತ್ರ ಹಿಜಾಬ್ ಧರಿಸಬಾರದು ಎಂದು ಹೇಳಲಾಗಿದೆ ಎಂದು ನಾವದಗಿ ಅವರು ವಿವರಿಸಿದರು.


ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರವು ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂಬ ಆರೋಪವನ್ನೂ ಪ್ರಭುಲಿಂಗ ನಾವದಗಿ ಅವರು ತಳ್ಳಿ ಹಾಕಿದರು. ಅಲ್ಪಸಂಖ್ಯಾತರಿಗಾಗಿ ಸರ್ಕಾರವು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ