ಭಯೋತ್ಪಾದನೆ ನಿಲ್ಲಿಸಿದ ಮರುಕ್ಷಣದಿಂದಲೇ ಶಾಂತಿ ಮಾತುಕತೆ: ಬಿಪಿನ್ ರಾವತ್
ಪಾಕ್ ಸೇನಾ ಮುಖ್ಯಸ್ಥ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ಸೇನಾ ಮುಖ್ಯಸ್ಥರ ಕರೆ
TNN 22 Dec 2017, 7:02 pm
ಜೈಪುರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ನೀಡುವ ಬೆಂಬಲ ಸ್ಥಗಿತಗೊಳಿಸಿದ ಮರುಕ್ಷಣದಿಂದಲೇ ಭಾರತ ಶಾಂತಿಯುತ ಮಾತುಕತೆ ನಡೆಸುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶುಕ್ರವಾರ ಹೇಳಿದ್ದಾರೆ.
ಥಾರ್ ಮರುಭೂಮಿಯ ಬಳಿಯ ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಸೇನಾಪಡೆಗಳು ಆಯೋಜಿಸಿದ್ದ 'ಹಮೇಶಾ ವಿಜಯೀ' ತಾಲೀಮು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್, ಈವರೆಗೆ ಪಾಕ್ ನಡೆಯನ್ನು ನಾವು ಗಮನಿಸಿದರೆ ಅದು ಶಾಂತಿಯನ್ನು ಬಯಸಿದಂತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಮಾತ್ರ ಪಾಕಿಸ್ತಾನದ ಜೊತೆಗೆ ಭಾರತ ಶಾಂತಿಯುತ ಮಾತುಕತೆ ನಡೆಸುತ್ತದೆ ಎಂದು ರಾವತ್ ನುಡಿದರು.
ನಮಗೂ ಪಾಕ್ನೊಂದಿಗೆ ಉತ್ತಮ ಭಾಂದವ್ಯ ಹೊಂದುವ ಆಸೆಯಿದೆ, ಆದರೆ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಪಾಕ್ ಮೊದಲು ನಿಲ್ಲಿಸಬೇಕು. ನಂತರವಷ್ಟೇ ಭಾರತ ಆ ದೇಶದೊಂದಿಗೆ ಶಾಂತಿಯುತ ಮಾತುಕತೆ ನಡೆಸಲಿದೆ. ಸೇನೆ, ಅರೆಸೇನಾ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾವತ್ ಹೇಳಿದರು.
ಥಾರ್ ಮರುಭೂಮಿಯ ಬಳಿಯ ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಸೇನಾಪಡೆಗಳು ಆಯೋಜಿಸಿದ್ದ 'ಹಮೇಶಾ ವಿಜಯೀ' ತಾಲೀಮು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್, ಈವರೆಗೆ ಪಾಕ್ ನಡೆಯನ್ನು ನಾವು ಗಮನಿಸಿದರೆ ಅದು ಶಾಂತಿಯನ್ನು ಬಯಸಿದಂತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಮಾತ್ರ ಪಾಕಿಸ್ತಾನದ ಜೊತೆಗೆ ಭಾರತ ಶಾಂತಿಯುತ ಮಾತುಕತೆ ನಡೆಸುತ್ತದೆ ಎಂದು ರಾವತ್ ನುಡಿದರು.
ನಮಗೂ ಪಾಕ್ನೊಂದಿಗೆ ಉತ್ತಮ ಭಾಂದವ್ಯ ಹೊಂದುವ ಆಸೆಯಿದೆ, ಆದರೆ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಪಾಕ್ ಮೊದಲು ನಿಲ್ಲಿಸಬೇಕು. ನಂತರವಷ್ಟೇ ಭಾರತ ಆ ದೇಶದೊಂದಿಗೆ ಶಾಂತಿಯುತ ಮಾತುಕತೆ ನಡೆಸಲಿದೆ. ಸೇನೆ, ಅರೆಸೇನಾ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾವತ್ ಹೇಳಿದರು.