ಹೊಸದಿಲ್ಲಿ: ಕೇಂದ್ರ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ, ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಬಾಬುಲ್ ಸುಪ್ರಿಯೋ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ತಾವು ರಾಜಕೀಯ ತ್ಯಜಿಸುವುದಾಗಿ ಶನಿವಾರ ಪ್ರಕಟಿಸಿದ್ದಾರೆ. 'ನಾನು ನಿರ್ಗಮಿಸುತ್ತಿದ್ದೇನೆ... ವಿದಾಯ' ಎಂದು ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಹಿನ್ನೆಲೆ ಗಾಯಕ ಹೇಮಂತ ಮುಖರ್ಜಿ ಅವರು ಹಾಡಿರುವ ಗೀತೆಯ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ.
'ಪ್ರತಿಯೊಬ್ಬರ ಅಭಿಪ್ರಾಯಗಳನ್ನೂ ಕೇಳಿದ್ದೇನೆ. ತಂದೆ, ತಾಯಿ, ಪತ್ನಿ, ಮಗಳು, ಇಬ್ಬರು ಆತ್ಮೀಯ ಗೆಳೆಯರು.. ಎಲ್ಲವನ್ನೂ ಆಲಿಸಿದ ಬಳಿಕ, ನಾನು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ- ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತೇನೆ. ನಾನು ಒಂದು ತಂಡದ ಆಟಗಾರ! ಯಾವಾಗಲೂ ಒಂದು ತಂಡವನ್ನು ಬೆಂಬಲಿಸುತ್ತಿದ್ದೆ, ಮೋಹನ್ ಬಗಾನ್.. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಮಾತ್ರ ಬೆಂಬಲಿಸಿದ್ದೆ. ಇಲ್ಲಿಗೆ ಮುಗಿಯಿತು.. ನಾನು ನಿರ್ಗಮಿಸುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ.
'ನೀವು ಸಮಾಜ ಸೇವೆ ಮಾಡಲು ಬಯಸಿದ್ದರೆ, ಅದನ್ನು ರಾಜಕೀಯದಲ್ಲಿ ಇಲ್ಲದೆಯೂ ಮಾಡಬಹುದು' ಎಂದಿರುವ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಾಗೂ ಒಂದು ತಿಂಗಳಲ್ಲಿ ಸರಕಾರಿ ನಿವಾಸವನ್ನು ತೊರೆಯುವುದಾಗಿ ಹೇಳಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಖಾತೆ ಕೇಂದ್ರ ಸಚಿವರಾಗಿದ್ದ ಸುಪ್ರಿಯೋ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಲಾಗಿತ್ತು. ಏಪ್ರಿಲ್ನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಾಲಿಗುಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 50,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು.
ತಮ್ಮ ನಿರ್ಗಮನದ ಕುರಿತು ಸುದೀರ್ಘ ಬರಹ ಬರೆದಿರುವ ಅವರು, ಕೇಂದ್ರ ಸಚಿವ ಸ್ಥಾನದಿಂದ ಕಿತ್ತುಹಾಕಿರುವ ಕ್ರಮದಿಂದ ಬೇಸರಗೊಂಡಿರುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಮೂಲತಃ ಗಾಯಕರಾಗಿದ್ದ ಸುಪ್ರಿಯೋ, 2014ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಸಾನ್ಸೊಲ್ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.
'ಪ್ರತಿಯೊಬ್ಬರ ಅಭಿಪ್ರಾಯಗಳನ್ನೂ ಕೇಳಿದ್ದೇನೆ. ತಂದೆ, ತಾಯಿ, ಪತ್ನಿ, ಮಗಳು, ಇಬ್ಬರು ಆತ್ಮೀಯ ಗೆಳೆಯರು.. ಎಲ್ಲವನ್ನೂ ಆಲಿಸಿದ ಬಳಿಕ, ನಾನು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ- ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತೇನೆ. ನಾನು ಒಂದು ತಂಡದ ಆಟಗಾರ! ಯಾವಾಗಲೂ ಒಂದು ತಂಡವನ್ನು ಬೆಂಬಲಿಸುತ್ತಿದ್ದೆ, ಮೋಹನ್ ಬಗಾನ್.. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಮಾತ್ರ ಬೆಂಬಲಿಸಿದ್ದೆ. ಇಲ್ಲಿಗೆ ಮುಗಿಯಿತು.. ನಾನು ನಿರ್ಗಮಿಸುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ.
'ನೀವು ಸಮಾಜ ಸೇವೆ ಮಾಡಲು ಬಯಸಿದ್ದರೆ, ಅದನ್ನು ರಾಜಕೀಯದಲ್ಲಿ ಇಲ್ಲದೆಯೂ ಮಾಡಬಹುದು' ಎಂದಿರುವ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಾಗೂ ಒಂದು ತಿಂಗಳಲ್ಲಿ ಸರಕಾರಿ ನಿವಾಸವನ್ನು ತೊರೆಯುವುದಾಗಿ ಹೇಳಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಖಾತೆ ಕೇಂದ್ರ ಸಚಿವರಾಗಿದ್ದ ಸುಪ್ರಿಯೋ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಲಾಗಿತ್ತು. ಏಪ್ರಿಲ್ನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಾಲಿಗುಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 50,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು.
ತಮ್ಮ ನಿರ್ಗಮನದ ಕುರಿತು ಸುದೀರ್ಘ ಬರಹ ಬರೆದಿರುವ ಅವರು, ಕೇಂದ್ರ ಸಚಿವ ಸ್ಥಾನದಿಂದ ಕಿತ್ತುಹಾಕಿರುವ ಕ್ರಮದಿಂದ ಬೇಸರಗೊಂಡಿರುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಮೂಲತಃ ಗಾಯಕರಾಗಿದ್ದ ಸುಪ್ರಿಯೋ, 2014ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಸಾನ್ಸೊಲ್ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.