ಆ್ಯಪ್ನಗರ

ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಗುಂಡಿನ ದಾಳಿ; ದೀದಿ ಸರಕಾರದ ವಿರುದ್ಧ ಕಮಲ ಪಡೆ ಆಕ್ರೋಶ

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಮರ ಮುಂದುವರೆದಿದ್ದು, ನಾಯಕರ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ರಾಧಾರಾಣಿ ನಾಸ್ಕರ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ನಾಸ್ಕರ್‌ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

Agencies 7 Sep 2020, 9:26 pm
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಮೇಲೆ ದಾಳಿ ಮುಂದುವರೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ರಾಧಾರಾಣಿ ನಾಸ್ಕರ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ನಾಸ್ಕರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಷ್ಣುಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ರಘುದೇಬ್‌ಪುರ ಗ್ರಾಮದಲ್ಲಿ ಹಾಡಹಗಲೇ ಘಟನೆ ನಡೆದಿದೆ.
Vijaya Karnataka Web west bengal bjp woman leader shot seriously injured by assailants
ಬಂಗಾಳದಲ್ಲಿ ಬಿಜೆಪಿ ನಾಯಕಿ ಮೇಲೆ ಗುಂಡಿನ ದಾಳಿ; ದೀದಿ ಸರಕಾರದ ವಿರುದ್ಧ ಕಮಲ ಪಡೆ ಆಕ್ರೋಶ


ರಾಧಾರಾಣಿ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಧಾರಾಣಿ ನಾಸ್ಕರ್ ಬಿಜೆಪಿಯ ಬೂತ್ ಸಮಿತಿಯ ಉಪಾಧ್ಯಕ್ಷೆ ಹಾಗೂ ಮಹಿಳಾ ಮೋರ್ಚಾ ಕ್ಯಾಷಿಯರ್ ಆಗಿದ್ದರು. ಅವರ ಪತಿ ಅರುಣ್ ನಾಸ್ಕರ್ ಬಿಷ್ಣುಪುರ್‌ನ ಬಿಜೆಪಿಯ ಸ್ಥಳೀಯ ಬೂತ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಮೂಲಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಎಂದು ಹೇಳಲಾದ ಸಶಸ್ತ್ರ ದುಷ್ಕರ್ಮಿಗಳ ಗುಂಪು ಅರುಣ್‌ ನಾಸ್ಕರ್‌ಗಾಗಿ ಅವರ ಮನೆಗೆ ನುಗ್ಗಿದ್ದಾರೆ. ಆದರೆ, ಅರುಣ್‌ ಇಲ್ಲದ ಕಾರಣ, ರಾಧಾರಾಣಿ ಮೇಲೆ ಹಲ್ಲೆ ಮಾಡಿ ಗುಂಡು ಹಾರಿಸಿದ್ದಾರೆ. ಸ್ಥಳೀಯರು ರಾಧಾರಾಣಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಮಧ್ಯಾಹ್ನ ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಅಗ್ನಿಮಿತ್ರ ಪಾಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರಾಧಾರಾಣಿಯವರ ಆರೋಗ್ಯ ವಿಚಾರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ಪೊಲೀಸರಿಂದಲೇ ಕೊಲೆ ಎಂದು ಕೇಸರಿ ಪಡೆ ಆರೋಪ

ತೃಣಮೂಲ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ಅವಳನ್ನು ರಾಧಾರಾಣಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಂಗಾಳದಾದ್ಯಂತ ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ. ಗೂಂಡಾಗಳು ಟಿಎಂಸಿ ಬೆಂಬಲಿಗರಾಗಿರುವವರೆಗೂ ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಎಂದಿಗೂ ಶಿಕ್ಷೆಯಾಗುವುದಿಲ್ಲ ಎಂದು ಅಪರಾಧಿಗಳು ತಿಳಿದಿದ್ದಾರೆ ಎಂದು ಪಾಲ್ ಆರೋಪಿಸಿದ್ದು, ರಾಧಾರಾಣಿ ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಕೋಮು ದ್ವೇಷದಿಂದ ದೇಗುಲಕ್ಕೆ ಬೆಂಕಿ ಇಟ್ಟು, ಕಾಳಿ ಮಾತೆ ವಿಗ್ರಹ ಸುಟ್ಟ ಸುದ್ದಿ ನಿಜವೇ..?

ರಾಧಾರಾಣಿ ಮೇಲಿನ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಗ್ರಾಮದಲ್ಲಿ ಧರಣಿ ನಡೆಸಿದರು. ವಿಶೇಷ ತಂಡ ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದೆ ಎಂದು ಬಿಷ್ಣುಪುರ ಪೊಲೀಸ್ ಠಾಣೆಯ ಮೈನಕ್ ಬಂಡೋಪಾಧ್ಯಾಯ ತಿಳಿಸಿದ್ದಾರೆ. ಇದುವರೆಗೂ ಯಾವುದೇ ಬಂಧನ ನಡೆದಿಲ್ಲ.

ಪ.ಬಂಗಾಳದಲ್ಲಿ ತೀವ್ರಗೊಂಡ ಗವರ್ನರ್‌, ದೀದಿ ಸಂಘರ್ಷ..! ರಾಜ್ಯಪಾಲರ ಮೇಲೆ ಸರಕಾರದ ಕಣ್ಗಾವಲು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ