ಆ್ಯಪ್ನಗರ

ದಿಗ್ಗಜರ ಅಖಾಡವಾದ ನಂದಿಗ್ರಾಮದಲ್ಲಿ ಟಿಎಂಸಿ, ಬಿಜೆಪಿಗೆ ಪ್ರತ್ಯೇಕ ಹೆಲಿಪ್ಯಾಡ್‌

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಮತ್ತು ಒಂದು ಕಾಲದಲ್ಲಿಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ ನಂದಿಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತ್ಯೇಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಿವೆ.

Vijaya Karnataka Web 9 Mar 2021, 2:01 pm
ಕೋಲ್ಕೊತಾ: ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಮತ್ತು ಒಂದು ಕಾಲದಲ್ಲಿಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ ನಂದಿಗ್ರಾಮದಲ್ಲಿತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತ್ಯೇಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಿವೆ.
Vijaya Karnataka Web Mamata Banerjee


ಪ್ರಭಾವಿಗಳಿಬ್ಬರ ಪೈಪೋಟಿಗೆ ಅಖಾಡವಾಗಿರುವ ಈ ಕ್ಷೇತ್ರಕ್ಕೆ ಪ್ರಚಾರ ನಿಮಿತ್ತ ದಿಗ್ಗಜರ ದಂಡು ಹರಿದು ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ದಿಗ್ಗಜರು ಸುವೇಂದು ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ ಅವರು ಏಪ್ರಿಲ್‌ 1ಕ್ಕೆ ಮೊದಲು ಹಲವು ರಾರ‍ಯಲಿಗಳನ್ನು ನಡೆಸಲು ಸಜ್ಜಾಗಿದ್ದಾರೆ. ವಿವಿಧ ತಾರೆಯರ ದಂಡು ಕೂಡ ಮಮತಾ ಪರ ಪ್ರಚಾರ ನಡೆಸಲು ರೆಡಿಯಾಗಿದೆ. ಇವರೆಲ್ಲರ ಪ್ರಯಾಣ ಅನುಕೂಲಕ್ಕಾಗಿ ಹೆಲಿಕಾಪ್ಟರ್‌ಗಳೂ ಸಿದ್ಧಗೊಂಡಿದ್ದು, ಅದಕ್ಕಾಗಿ ನಂದಿಗ್ರಾಮದಲ್ಲಿಎರಡು ಪ್ರತ್ಯೇಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಟಿಎಂಸಿ ನಿರ್ಮಿಸಿರುವ ಹೆಲಿಪ್ಯಾಡ್‌ ಭಾನುವಾರ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಬಿಜೆಪಿಯು ತೆಂಗುವಾದಲ್ಲಿ ಹೆಲಿಪ್ಯಾಡ್‌ ನಿರ್ಮಿಸಿದೆ.

ಪೂರ್ವ ಮಿಡ್ನಾಪುರ ಜಿಲ್ಲೆಯ ಈ ವಿಧಾನಸಭೆ ಕ್ಷೇತ್ರಕ್ಕೆ ಏಪ್ರಿಲ್‌ 1ರಂದು ಚುನಾವಣೆ ನಡೆಯಲಿದ್ದು, ಪ್ರಚಾರ ಭರಾಟೆ ಪರಾಕಾಷ್ಠೆ ತಲುಪಿದೆ. ಮಾಜಿ ಟಿಎಂಸಿ ಮುಖಂಡ ಹಾಗೂ ಮಮತಾ ಬ್ಯಾನರ್ಜಿ ಅವರ ಒಂದು ಕಾಲದ ಬಲಗೈ ಬಂಟ ಎನ್ನಿಸಿದ್ದ ಸುವೇಂದು ಅಧಿಕಾರಿ ಈ ಬಾರಿ ಬಿಜೆಪಿಯಿಂದ ಇಲ್ಲಿಸ್ಪರ್ಧಿಸಿದ್ದಾರೆ. ಸುವೇಂದು ಅಧಿಕಾರಿ ತಮಗೆ ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಆಕ್ರೋಶಗೊಂಡಿರುವ ಮಮತಾ ಬ್ಯಾನರ್ಜಿ, ಅವರನ್ನು ಮಣಿಸುವ ಶಪಥ ಮಾಡಿ ನಂದಿಗ್ರಾಮದಿಂದಲೇ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ ನಂದಿಗ್ರಾಮವು ಮದಗಜಗಳಿಬ್ಬರ ಸಂಘರ್ಷಕ್ಕೆ ವೇದಿಕೆಯಾಗಿದ್ದು, ದೇಶದ ಗಮನ ಸೆಳೆದಿದೆ.

ಕೋರ್ಟ್‌, ಹೆಲಿಪ್ಯಾಡ್‌ ಸಂಪರ್ಕ ರಸ್ತೆಗೆ ಚಾಲನೆ

ಮಮತಾ ಬ್ಯಾನರ್ಜಿ ಮಾರ್ಚ್ 10ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಇದರ ಮರುದಿನ ಅಥವಾ ಮಾರ್ಚ್ 12ರಂದು ಅಧಿಕಾರಿ ಕೂಡ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ತಮ್ಮ ಮಾಜಿ ಬಾಸ್‌ ವಿರುದ್ಧ ಸ್ಪರ್ಧಿಸಿರುವ ಸುವೇಂದು ಹುಮ್ಮಸ್ಸು ಇಮ್ಮಡಿಗೊಂಡಿದೆ. ಕನಿಷ್ಠ ಪಕ್ಷ 50,000 ಮತಗಳಿಂದ ಮಮತಾ ಅವರನ್ನು ಸೋಲಿಸುವುದಾಗಿ ಅಧಿಕಾರಿ ಗುಡುಗಿದ್ದಾರೆ.

ಒಡಿಶಾಗೆ ಪ್ರಧಾನಿ ಮೋದಿ: ಹೆಲಿಪ್ಯಾಡ್‌ಗೆ ಸಾವಿರ ಮರಕ್ಕೆ ಕೊಡಲಿ?

''ಸುವೇಂದು ಬರೀ ಬೊಗಳೆ ಮಾತಾಡಿ ಕಾಲ ಕಳೆಯುವ ಬದಲು ಅಖಾಡಕ್ಕೆ ಇಳಿದು ಕೆಲಸ ಮಾಡುವುದು ವಾಸಿ,'' ಎಂದು ಟಿಎಂಸಿ ಸವಾಲು ಹಾಕಿದೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾರ್ಚ್ 27ರಿಂದ ಎಂಟು ಹಂತಗಳಲ್ಲಿಮತದಾನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ