ಆ್ಯಪ್ನಗರ

ರಾಜ್ಯದಲ್ಲಿನ ಬಂಗಾಳಿ ಕಾರ್ಮಿಕರಿಗೆ ರೈಲಿನಲ್ಲಿ ಥಳಿತ

ಬಂಗಾಳದ ದಕ್ಷಿಣ ದಿನಾಜ್‌ಪೊರ್ ಜಿಲ್ಲೆಯ ನೇಪಾಲ್ ಲೋಹರ್ ಮತ್ತು ಆತನ ಪುತ್ರ ಬೆಂಗಳೂರು-ನ್ಯೂ ತಿನ್‌ಸುಕಿಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಸಹಪ್ರಯಾಣಿಕರು ಇವರಿಬ್ಬರ ಮೇಲೆ ಮೊಬೈಲ್ ಮತ್ತು ಹಣ ಕಳ್ಳತನದ ಆರೋಪ ಹೊರಿಸಿದ್ದಾರೆ.

EiSamay.Com 5 Oct 2018, 9:07 pm
ಕೋಲ್ಕತ್ತಾ: ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಗೆ ರೈಲಿನಲ್ಲಿ ಮೊಬೈಲ್ ಕಳ್ಳರೆಂಬ ಹಣೆಪಟ್ಟಿ ಕಟ್ಟಿ ಹೊಡೆದು ಹಿಂಸಿಸಲಾಗಿದೆ.
Vijaya Karnataka Web The victim


ಬಂಗಾಳದ ದಕ್ಷಿಣ ದಿನಾಜ್‌ಪೊರ್ ಜಿಲ್ಲೆಯ ನೇಪಾಲ್ ಲೋಹರ್ ಮತ್ತು ಆತನ ಪುತ್ರ ಬೆಂಗಳೂರು-ನ್ಯೂ ತಿನ್‌ಸುಕಿಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಸಹಪ್ರಯಾಣಿಕರು ಇವರಿಬ್ಬರ ಮೇಲೆ ಮೊಬೈಲ್ ಮತ್ತು ಹಣ ಕಳ್ಳತನದ ಆರೋಪ ಹೊರಿಸಿದ್ದಾರೆ.

ಇಬ್ಬರನ್ನೂ ರೈಲಿನಲ್ಲಿ ಕಟ್ಟಿಹಾಕಿ ಸುಮಾರು 40 ಗಂಟೆ ಕಾಲ ಹೊಡೆದು ಹಿಂಸಿಸಿದ್ದಾರೆ. ಈ ಬಗ್ಗೆ ದಿನಾಜ್‌ಪುರದಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ.

ಲೋಹರ್ ಮತ್ತು ಆತನ ಪುತ್ರನ ಬಳಿಯಿದ್ದ 16 ಸಾವಿರ ರೂ. ಮತ್ತು ಮೊಬೈಲ್‌ಗಳನ್ನು ಹಲ್ಲೆಕೋರರು ದೋಚಿದ್ದಾರೆ. ತನ್ನ ಮೇಲೆ ಅಪವಾದ ಹೊರಿಸಿ ಹಲ್ಲೆ ನಡೆಸಲಾಗುತ್ತಿರುವ ಬಗ್ಗೆ ಲೋಹರ್ ಮನೆಯವರಿಗೆ ತಿಳಿಸಿದ್ದರು. ಲೋಹರ್ ಮನೆಯವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೊಡೆತ ತಿಂದು ಅಸ್ವಸ್ಥವಾಗಿದ್ದ ಲೋಹರ್ ಮತ್ತು ಪುತ್ರನನ್ನು ಮಾಲ್ಡಾ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲ ವರದಿ: ಈ ಸಮಯ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ