ಆ್ಯಪ್ನಗರ

ಬಂಗಾಳ: ಈಶ್ವರಚಂದ್ರ ವಿದ್ಯಾಸಾಗರರ ನೂತನ ಪ್ರತಿಮೆ ಅನಾವರಣ

ವಿದ್ಯಾಸಾಗರ ಅವರ 8.5 ಅಡಿ ಎತ್ತರದ ಶುಭ್ರ ಶ್ವೇತವರ್ಣದ ಫೈಬರ್ ಗ್ಲಾಸ್ ಪ್ರತಿಮೆಯನ್ನು ಮಮತಾ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಮಮತಾ, ಚುನಾವಣೋತ್ತರ ಹಿಂಸಾಚಾರಗಳಲ್ಲಿ 10 ಮಂದಿ ಮೃತಪಟ್ಟಿದ್ದು, ಅವರ ಪೈಕಿ 8 ಮಂದಿ ತೃಣಮೂಲ ಕಾಂಗ್ರೆಸ್‌ನವರು; ಇಬ್ಬರು ಮಾತ್ರ ಬಿಜೆಪಿ ಬೆಂಬಲಿಗರು ಎಂದು ತಿಳಿಸಿದರು. 'ಪ್ರತಿ ಸಾವೂ ದುರದೃಷ್ಟಕರ. ಮೃತಪಟ್ಟವರ 10 ಕುಟುಂಬಗಳಿಗೆ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುತ್ತೇನೆ' ಎಂದು ಮಮತಾ ಬ್ಯಾನರ್ಜಿ ಹೇಳಿದರು.

PTI 11 Jun 2019, 10:32 pm
ಕೋಲ್ಕತ: ಕಳೆದ ತಿಂಗಳು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದುಷ್ಕರ್ಮಿಗಳು ಕೆಡವಿ ಹಾಕಿದ 19ನೇ ಶತಮಾನದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ನೂತನ ಪ್ರತಿಮೆಯನ್ನುಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಮರುಸ್ಥಾಪಿಸಿದರು.
Vijaya Karnataka Web Vidyasagar Statue


ವಿದ್ಯಾಸಾಗರ ಅವರ 8.5 ಅಡಿ ಎತ್ತರದ ಶುಭ್ರ ಶ್ವೇತವರ್ಣದ ಫೈಬರ್ ಗ್ಲಾಸ್ ಪ್ರತಿಮೆಯನ್ನು ಮಮತಾ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಮಮತಾ, ಚುನಾವಣೋತ್ತರ ಹಿಂಸಾಚಾರಗಳಲ್ಲಿ 10 ಮಂದಿ ಮೃತಪಟ್ಟಿದ್ದು, ಅವರ ಪೈಕಿ 8 ಮಂದಿ ತೃಣಮೂಲ ಕಾಂಗ್ರೆಸ್‌ನವರು; ಇಬ್ಬರು ಮಾತ್ರ ಬಿಜೆಪಿ ಬೆಂಬಲಿಗರು ಎಂದು ತಿಳಿಸಿದರು.

'ಪ್ರತಿ ಸಾವೂ ದುರದೃಷ್ಟಕರ. ಮೃತಪಟ್ಟವರ 10 ಕುಟುಂಬಗಳಿಗೆ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುತ್ತೇನೆ' ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು. ಚುನಾವಣೆ ಬಳಿಕವೂ ಮುಂದುವರಿದ ಹಿಂಸಾಚಾರಕ್ಕೆ 10 ಮಂದಿ ಬಲಿಯಾಗಿದ್ದರು.

ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಗಳಾದ 18 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

'ಬಿಜೆಪಿ ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಿದೆ. ನಾನು ಜೈಲಿಗೆ ಹೋಗಲೂ ಸಿದ್ಧ, ಆದರೆ ಬಿಜೆಪಿಯ ಯೋಜನೆ ಜಾರಿಗೆ ಬರಲು ಬಿಡಲಾರೆ' ಎಂದು ಮಮತಾ ದೂಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ