ಆ್ಯಪ್ನಗರ

ಹೆಚ್ಚುತ್ತಿದೆ ವೈದ್ಯರ ಮೇಲೆ ಹಲ್ಲೆ: ಉಪವೃತ್ತಿಯಾಗಿ ಬ್ಯೂಟಿಪಾರ್ಲರ್ ತೆರೆದ ಸರ್ಜನ್

ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದಕ್ಕೂ ಉದ್ಯೋಗ ಭದ್ರತೆಯೊಂದಿರಲಿ ಎಂದುಕೊಂಡ ಸರ್ಜನ್ ಒಬ್ಬರು ಪ್ರವೃತ್ತಿಯಾಗಿ ಪಶ್ಚಿಮ ಬಂಗಾಳದಲ್ಲಿ ಬ್ಯೂಟಿ ಪಾರ್ಲರ್ ತೆರೆದಿದ್ದಾರೆ.

EiSamay.Com 14 Sep 2018, 8:45 pm
ಕೋಲ್ಕತಾ: ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದಕ್ಕೂ ಉದ್ಯೋಗ ಭದ್ರತೆಯೊಂದಿರಲಿ ಎಂದುಕೊಂಡ ಸರ್ಜನ್ ಒಬ್ಬರು ಪ್ರವೃತ್ತಿಯಾಗಿ ಪಶ್ಚಿಮ ಬಂಗಾಳದಲ್ಲಿ ಬ್ಯೂಟಿ ಪಾರ್ಲರ್ ತೆರೆದಿದ್ದಾರೆ.
Vijaya Karnataka Web doctor-back-141022_1470474643


ಬರಾಸತ್‌ ಪಟ್ಟಣದಲ್ಲಿ ಡಾ. ನೀಲಾದ್ರಿ ಬಿಸ್ವಾಸ್ ಎಂಬ ಮೂಳೆ ಸರ್ಜನ್ ಪುರುಷರು ಮತ್ತು ಮಹಿಳೆಯರ ಸೆಲೂನ್ ಮತ್ತು ಬ್ಯೂಟಿ ಪಾರ್ಲರ್ ತೆರೆದಿದ್ದಾರೆ. ಕೆಲದಿನಗಳ ಹಿಂದೆ ಅವರು ಪಶ್ಚಿಮ ಬಂಗಾಳ ಡಾಕ್ಟರ್ಸ್‌ ಫೋರಂನ ಫೇಸ್‌ಬುಕ್‌ ಪೇಜ್‌ನಲ್ಲೂ ತಮ್ಮ ಉದ್ದೇಶವನ್ನು ಬರೆದುಕೊಂಡಿದ್ದು, ವೈದ್ಯರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಸೂಕ್ತ ವ್ಯವಸ್ಥೆ ಮತ್ತು ಉದ್ಯೋಗ ಭದ್ರತೆಗೆ ಅನುಕೂಲಕ್ಕಾಗಿ ಮಳಿಗೆ ತೆರೆದಿದ್ದಾಗಿ ಹೇಳಿಕೊಂಡಿದ್ದಾರೆ.

ವೈದ್ಯರು ಆರಂಭಿಸಿದ ಸೆಲೂನ್‌ನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವವರ ಕುಟುಂಬದವರಿಗಾಗಿ ವಿಶೇಷ ಕೊಡುಗೆ ಇದ್ದು, ಶೇ. 30 ಡಿಸ್ಕೌಂಟ್ ಕೂಡ ಇದೆ. ವೈದ್ಯರ ಈ ನಡೆ ಬಗ್ಗೆ ಜನರಯ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವೈದ್ಯರ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವರಿಗಾಗಿ ಪಶ್ಚಿಮ ಬಂಗಾಳ ಆರ್ಥೋಪೆಡಿಕ್ ಅಸೋಶಿಯೇಶನ್ ಬಿಸ್ವಾಸ್ ಅವರ ಎಂಬಿಬಿಎಸ್‌ ಪದವಿ ಮತ್ತು ಎಂಎಸ್‌ ಪದವಿ ಕುರಿತು ದೃಢಪಡಿಸಿದೆ.

ಯುವ ಮೂಳೆ ತಜ್ಞ ಮತ್ತು ಸರ್ಜನ್ ಆಗಿದ್ದುಕೊಂಡು ಬಿಸ್ವಾಸ್ ಸಾವಿರಾರು ರೋಗಿಗಳನ್ನು ಉಪಚರಿಸಿದ್ದಾರೆ. ಯಶಸ್ವಿ ವೈದ್ಯ ಎಂದು ಕೂಡ ಅನ್ನಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಯಾವುದೇ ತೊಂದರೆ ಎದುರಿಸಿಲ್ಲ, ಹೀಗಿದ್ದರೂ ಅವರ ಉಪವೃತ್ತಿ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ವೃತ್ತಿ ಸದ್ಯಕ್ಕೆ ಉತ್ತಮವಾಗಿ ನಡೆಯುತ್ತಿದೆ, ಆದರೆ ಮುಂದೇನು ಎಂದು ಯೋಚಿಸಿಲ್ಲ. ಬ್ಯೂಟಿ ಪಾರ್ಲರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಾದರೆ, ಸರ್ಜನ್ ವೃತ್ತಿ ತೊರೆದು ಅದನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿ ಮುಂದುವರಿಸುವ ಆಲೋಚನೆಯಿದೆ ಎಂದು ಬಿಸ್ವಾಸ್ ಹೇಳಿದ್ದಾರೆ.
ಮೂಲ ವರದಿ: ಈ ಸಮಯ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ