ಆ್ಯಪ್ನಗರ

'ರಾಹುಲ್‌ ಬಾಬಾ, ಅಮೇಥಿಗಾಗಿ ಗಾಂಧಿ ಕುಟುಂಬ ಮಾಡಿದ್ದೇನು?': ಅಮಿತ್‌ ಶಾ ಪ್ರಶ್ನೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಪ್ರತಿಷ್ಠಿತ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಲು ಬಿಜೆಪಿ ಪಣತೊಟ್ಟಿದೆ.

TNN 10 Oct 2017, 3:17 pm
ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಪ್ರತಿಷ್ಠಿತ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಲು ಬಿಜೆಪಿ ಪಣತೊಟ್ಟಿದೆ.
Vijaya Karnataka Web what has gandhi family done for amethi rahul baba asks amit shah
'ರಾಹುಲ್‌ ಬಾಬಾ, ಅಮೇಥಿಗಾಗಿ ಗಾಂಧಿ ಕುಟುಂಬ ಮಾಡಿದ್ದೇನು?': ಅಮಿತ್‌ ಶಾ ಪ್ರಶ್ನೆ


ಪ್ರಸ್ತುತ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರೆಲ್ಲ ರಾಹುಲ್‌ ವಿರುದ್ಧ ತೊಡೆತಟ್ಟಿದ್ದಾರೆ.

'ರಾಹುಲ್‌ ಬಾಬಾ' ಈ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ತಮ್ಮ ಭಾಷಣದುದ್ದಕ್ಕೂ 'ರಾಹುಲ್‌ ಬಾಬಾ' ಎಂದೇ ಸಂಬೋಧಿಸಿದ ಶಾ, ಕಾಂಗ್ರೆಸ್‌ ನಾಯಕನನ್ನು ಮಾತಿನಲ್ಲೇ ತಿವಿದರು.

'70 ವರ್ಷಗಳ ಕಾಲ ಈ ಕ್ಷೇತ್ರದ ಜನತೆ ನಿಮ್ಮ ಕುಟುಂಬದ ಮೇಲೆ ನಂಬಿಕೆಯಿಟ್ಟರು. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಇಲ್ಲಿನ ಜನತೆ ಬಿಜೆಪಿ ಮತ್ತು ಮೋದಿ ಮೇಲೆ ಭರವಸೆ ಇಟ್ಟಿದ್ದಾರೆ' ಎಂದು ಬೃಹತ್‌ ರ‍್ಯಾಲಿ ಉದ್ದೇಶಿಸಿ ಅಮಿತ್‌ ಶಾ ನುಡಿದರು.

ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಅಮೇಥಿಯನ್ನು 2004ರಿಂದ ರಾಹುಲ್‌ ಪ್ರತಿನಿಧಿಸುತ್ತಿದ್ದಾರೆ.

'2019ರಲ್ಲಿ ನಾವು ಮತ್ತೆ ಇಲ್ಲಿಗೆ ಬಂದು ನಿಮ್ಮಿಂದ ಮತ ಕೇಳುತ್ತೇವೆ' ಎಂದು ಶಾ ಹೇಳಿದರು.

'ಆದರೆ ನಾವು ಬರುವಾಗ ನಮ್ಮ ರಿಪೋರ್ಟ್‌ ಕಾರ್ಡ್‌ ಹಿಡಿದುಕೊಂಡೇ ಬರುತ್ತೇವೆ. ನಾವು ನಿಮಗೆಲ್ಲ ವಿದ್ಯುತ್ ನೀಡಿದ್ದೇವೆ. ಪ್ರತಿಯೊಬ್ಬರಿಗೂ ಗ್ಯಾಸ್‌ ಸಂಪರ್ಕ, ಶೌಚಾಲಯ ಸೌಲಭ್ಯ ನೀಡಿದ್ದೇವೆ. ರಾಹುಲ್‌ ಬಾಬಾ, ನಿಮ್ಮ ಅಜ್ಜಿ, ನಿಮ್ಮ ತಂದೆ ಮತ್ತು ಈಗ ನೀವು ಅಮೇಥಿಗಾಗಿ ಏನು ಮಾಡಿದ್ದೀರಿ?' ಎಂದು ಬಿಜೆಪಿ ಅಧ್ಯಕ್ಷರು ಪ್ರಶ್ನಿಸಿದರು.

2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಮೃತಿ ಇರಾನಿ ಸೋತರೂ ರಾಹುಲ್‌ಗಿಂತ ಹೆಚ್ಚು ಕೊಡುಗೆಗಳನ್ನು ಅಮೇಥಿಗೆ ನೀಡಿದ್ದಾರೆ ಎಂದು ಶಾ ನುಡಿದರು. ಬಿಜೆಪಿ ಅಭ್ಯರ್ಥಿ 2014ರಲ್ಲಿ ಮಾತ್ರವಲ್ಲ, 2009ರಲ್ಲೂ ಈ ಕ್ಷೇತ್ರದಲ್ಲಿ ಸೋತಿದ್ದರು. ಆದರೆ 2019ರಲ್ಲಿ ಈ ಸೋಲು ಮರುಕಳಿಸದು ಎಂದು ಸವಾಲು ಹಾಕುವುದಾಗಿ ಅವರು ನುಡಿದರು.

'ಒಬ್ಬ ಸಂಸದ ತನ್ನ ಕ್ಷೇತ್ರವನ್ನು ಈ ಮಟ್ಟಿಗೆ ನಿರ್ಲಕ್ಷಿಸುವುದನ್ನು ನಾನೆಂದೂ ನೋಡಿಲ್ಲ. ಆದರೆ ನಮ್ಮ ಸ್ಮೃತಿ ಬೆಹನ್‌ ಇಲ್ಲಿ ಸೋತಿದ್ದರೂ ಅಮೇಥಿಯ ಜನರ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ' ಎಂದು ಶಾ ಪ್ರತಿಪಾದಿಸಿದರು.

ವೀಡಿಯೋ ನೋಡಿ: ಉತ್ತರ ಪ್ರದೇಶದ ಬಗ್ಗೆ ಗಾಂಧಿಗಳು ಯಾವತ್ತೂ ಕಾಳಜಿ ವಹಿಸಿಲ್ಲ ಎಂದ ಅಮಿತ್‌ ಶಾ

'Rahul baba, what have your grandmother, father or you done for Amethi', asks BJP's Amit Shah, as he launches 2019 campaign

NEW DELHI: With their eyes firmly on wresting away the high-profile Amethi seat from the Congress in 2019, BJP leaders today accused its vice president "Rahul baba" of ignoring development in his constituency and in Uttar Pradesh.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ