ಆ್ಯಪ್ನಗರ

ತಿಹಾರ್‌ ಜೈಲಿಂದ ಡಿಕೆಶಿ ಹೊರಬರೋದು ಹೇಗೆ? ‘ಬಂಡೆ’ ಮುಂದಿರೋ ಆಯ್ಕೆಗಳೇನು?

ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಬಲೆಗೆ ಸಿಲುಕಿರುವ ಕನಕಪುರ ಬಂಡೆ, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ತಿಹಾರ್ ಜೈಲಿನಿಂದ ಹೊರಬರಲು ಹರಸಾಹಸವನ್ನೇ ನಡೆಸ್ತಿದ್ದಾರೆ. ಅಕ್ಟೋಬರ್‌ 1ರವರೆಗೂ ಜೈಲಲ್ಲೇ ಇರಿ ಎಂದು ಕೋರ್ಟ್ ಹೇಳಿದೆ. ಹಾಗಾದ್ರೆ, ಡಿಕೆಶಿ ಮುಂದಿನ ಆಯ್ಕೆ ಏನು?

Vijaya Karnataka Web 25 Sep 2019, 6:03 pm
ಹೊಸ ದಿಲ್ಲಿ: ಮಾಜಿ ಸಚಿವ ಡಿ. ಕೆ. ಶಿವಕುಮಾರ್‌ ಅವರಿಗೆ ಕಾನೂನು ಹೋರಾಟದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಾಲಯ, ಡಿಕೆಶಿ ಅವರ ಜಾಮೀನು ಅರ್ಜಿಯನ್ನು ಮತ್ತೆ ವಜಾಗೊಳಿಸಿದೆ. ಅಕ್ಟೋಬರ್ 1ರವರೆಗೆ ತಿಹಾರ್ ಜೈಲಿನಲ್ಲೇ ಇರುವಂತೆ ಆದೇಶಿಸಿದೆ. ಹಾಗಾದ್ರೆ, ಡಿಕೆಶಿ ಜೈಲಿನಿಂದ ಹೊರಬರೋದು ಹೇಗೆ?
Vijaya Karnataka Web dks angry


ಡಿಕೆ ಶಿವಕುಮಾರ್‌ಗೆ ಜಾಮೀನು ನಿರಾಕರಣೆ: ಇನ್ನೂ ಒಂದು ವಾರ ತಿಹಾರ್‌ ಜೈಲೇ ಗತಿ

ಡಿಕೆಶಿ ಮುಂದಿರುವ ಆಯ್ಕೆಗಳೇನು?

1 - ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ: ಇಡಿ ನ್ಯಾಯಾಲಯ ಡಿಕೆಶಿ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಲು ಡಿಕೆಶಿ ಪರ ವಕೀಲರು ಸಿದ್ದತೆ ನಡೆಸಿದ್ದಾರೆ. ನಾಳೆ ಡಿಕೆಶಿ ಪರ ವಕೀಲರು ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

2 - ಡಿಕೆಶಿ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಮನವಿ?: ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಡಿಕೆಶಿ ಬಳಲುತ್ತಿದ್ದಾರೆ. ಹೀಗಾಗಿ, ಹೈಕೋರ್ಟ್ ಜಾಮೀನು ಅರ್ಜಿಯನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡುವವರೆಗೂ ತಿಹಾರ್ ಜೈಲಿನ ಬದಲಿಗೆ ಆಸ್ಪತ್ರೆಯಲ್ಲಿ ಇರಿಸಲು ಡಿಕೆಶಿ ಪರ ವಕೀಲರು ಮನವಿ ಮಾಡಿಕೊಳ್ಳಬಹುದು.

3 - ಹೈಕೋರ್ಟ್ ಒಪ್ಪದಿದ್ದರೆ ಸುಪ್ರೀಂ ಅಂಗಳಕ್ಕೆ: ಒಂದು ವೇಳೆ ಇಡಿ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದರೆ, ಡಿಕೆಶಿಗೆ ಜಾಮೀನು ಕೊಡದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅವಕಾಶವೂ ಇದೆ.

4 - ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ?: ಜಾರಿ ನಿರ್ದೇಶನಾಲಯ ಡಿಕೆಶಿಗೆ ಸಮನ್ಸ್‌ ನೀಡಿದ್ದ ವೇಳೆ, ಅದನ್ನು ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಡಿಕೆಶಿ ಮನವಿ ಸಲ್ಲಿದ್ದರು. ಆದರೆ ಹೈಕೋರ್ಟ್‌ ಡಿಕೆಶಿ ಅರ್ಜಿಯನ್ನ ತಿರಸ್ಕರಿಸಿತ್ತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಲು ಡಿಕೆಶಿ ಪರ ವಕೀಲರು ನಿರ್ಧರಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯ ಈಗಾಗಲೇ ಡಿಕೆಶಿಯವರನ್ನು ಬಂಧಿಸಿರುವ ಕಾರಣ, ಈ ಆಯ್ಕೆಯ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

5 - ಇಡಿ ತನಿಖೆಯಿಂದ ಮುಕ್ತಿ ಕೊಡಲು ಸುಪ್ರೀಂಗೆ ಮನವಿ?: ಈ ಎಲ್ಲಾ ಆಯ್ಕೆಗಳ ನಡುವೆ ಮತ್ತೊಂದು ಕಾನೂನು ಅಸ್ತ್ರವನ್ನೂ ಪ್ರಯೋಗಿಸಲು ಡಿಕೆಶಿ ಪರ ವಕೀಲರು ಚಿಂತನೆ ನಡೆಸಿದ್ದಾರೆ. ಇಡಿ ತನಿಖೆಯಿಂದಲೇ ಮುಕ್ತಿ ಕೊಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ಧಾರೆ.

ಒಟ್ಟಿನಲ್ಲಿ ಡಿಕೆಶಿ ಎದುರು ಕಾನೂನಾತ್ಮಕ ಆಯ್ಕೆಗಳು ಬಹಳಷ್ಟಿವೆ. ಸದ್ಯದ ಮಟ್ಟಿಗೆ ಡಿಕೆಶಿ ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸೋದು ಮೊದಲ ಆದ್ಯತೆ ಆಗಲಿದೆ. ಅದೇನೇ ಇರಲಿ, ಮುಂಬರುವ ಉಪಚುನಾವಣೆ ಒಳಗೆ ಡಿಕೆಶಿ ಅವರಿಗೆ ಮುಕ್ತಿ ಸಿಗಲಿ ಎಂದು ಕಾಂಗ್ರೆಸ್ ನಾಯಕರು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬಿಜೆಪಿಗೆ ಕಾಡ್ತಿದೆ ಬೈ ಎಲೆಕ್ಷನ್ ಭೂತ!: 'ಅನರ್ಹ'ರಿಗೆ ಪಾಠ ಕಲಿಸುತ್ತಾ ಕಾಂಗ್ರೆಸ್-ಜೆಡಿಎಸ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ