ಆ್ಯಪ್ನಗರ

ಸ್ನೇಹಿತರ ಬೆದರಿಕೆ: ವಾಟ್ಸಪ್ ಅಡ್ಮಿನ್ ಆತ್ಮಹತ್ಯೆ

ವಾಟ್ಸಪ್ ಗುಂಪಿನಲ್ಲಿ ಸ್ನೇಹಿತರು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಗುಂಪಿನ ಅಡ್ಮಿನ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರ ಟೈಮ್ಸ್ 15 Mar 2017, 6:04 pm
ಯವತ್ಮಾಳ್: ವಾಟ್ಸಪ್ ಗುಂಪಿನಲ್ಲಿ ಸ್ನೇಹಿತರು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಗುಂಪಿನ ಅಡ್ಮಿನ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web whatsapp admin commits suicide in yavatmal
ಸ್ನೇಹಿತರ ಬೆದರಿಕೆ: ವಾಟ್ಸಪ್ ಅಡ್ಮಿನ್ ಆತ್ಮಹತ್ಯೆ


ನಿಖಿಲ್ ಗಾಡೆ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಕೆಲ ದಿನಗಳ ಹಿಂದೆ ನಿಖಿಲ್ ಗಾಡೆ ವಾಟ್ಸಪ್ ಗುಂಪೊಂದನ್ನು ರಚಿಸಿದ್ದ. ಈ ಗುಂಪಿನಲ್ಲಿ ಸೇಹಿತರೆಲ್ಲರೂ ಸೇರಿ ಸಮಾಜಕ್ಕೆ ಸಮಾಜ ಸುಧಾರಕರು ನೀಡಿರುವ ಕೊಡುಗೆ ಕುರಿತು ಚರ್ಚ ನಡೆಸುತ್ತಿದ್ದರು. ದುರದೃಷ್ಟವಶಾತ್ ಬಿಸಿ ಬಿಸಿ ಚರ್ಚೆ ವಿಕೋಪಕ್ಕೆ ತಿರುಗಿ ನಿಖಿಲ್ ಗಾಡೆಯ ಸ್ನೇಹಿತರು ಆತನಿಗೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

ವಾಟ್ಸಪ್‌ ಗುಂಪಿನಲ್ಲಿ ನಡೆದ ಘಟನೆಯಿಂದ ಭಯಭೀತನಾಗಿದ್ದ ನಿಖಿಲ್ ಗಾಡೆ ಮನೆ ಬಿಟ್ಟು ಓಡಿ ಹೋಗಿದ್ದ. ತದನಂತರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಪ್ರಕರಣ ಕೈಗೆತ್ತಿಕೊಂಡ ಪೊಲೀಸ್ ಅಧಿಕಾರಿಗಳು ವಾಟ್ಸಪ್ ಗುಂಪಿನ ನಾಲ್ವರು ಸದಸ್ಯರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ.

ಮೂಲವರದಿ: ಮಹಾರಾಷ್ಟ್ರ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ