ಚಂಡೀಗಢ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋತರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕಳೆದ ಏಪ್ರಿಲ್ನಲ್ಲಿ ಘೋಷಿಸಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಈಗ ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ವ್ಯಾಪಕವಾಗಿದೆ. ಚಂಡೀಗಢ ಸೇರಿದಂತೆ ಪಂಜಾಬ್ನ ಹಲವು ನಗರಗಳಲ್ಲಿ ಸಿಧು ಅವರ ಮಾತುಗಳನ್ನು ನೆನಪಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಮ್ಮ ಮಾತು ಉಳಿಸಿಕೊಳ್ಳುವಂತೆ ಒತ್ತಾಯಿಸುವ ಪೋಸ್ಟರ್ಗಳು ರಾರಾಜಿಸುತ್ತಿವೆ. ನಿಮ್ಮ ರಾಜೀನಾಮೆಗೆ ಕಾಯುತ್ತಿದ್ದೇವೆ ಎಂದೂ ಬರೆಯಲಾಗಿದೆ. ಇನ್ನೊಂದೆಡೆ ಬಿಹಾರದ ಮುಜಪ್ಫರ್ಪುರದ ಅನೇಕ ಕಡೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕುರಿತು ಮಾಹಿತಿ ನೀಡಿದವರಿಗೆ 5100 ರೂ. ಬಹುಮಾನ ನೀಡುವುದಾಗಿ ಪೋಸ್ಟರ್ಗಳನ್ನು ಹಾಕಲಾಗಿದೆ. ''ಮೆದುಳು ಜ್ವರದಿಂದ ಮಕ್ಕಳು ಸಾವೀಗೀಡಾಗುತ್ತಿದ್ದಾರೆ. ಎಲ್ಲ ಪಕ್ಷಗಳು ನಾಯಕರು ಜನರಿಗೆ ನೆರವಾಗುತ್ತಿದ್ದಾರೆ. ಆದರೆ ತೇಜಸ್ವಿ ಮಾತ್ರ ಪತ್ತೆಯೇ ಇಲ್ಲ,'' ಎಂದು ಆರೋಪಿಸಲಾಗಿದೆ.
ರಾಜೀನಾಮೆ ನೀಡುವ ಮಾತು ಮರೆತುಬಿಟ್ಟಿರಾ ಸಿಧು?
ಚಂಡೀಗಢ ಸೇರಿದಂತೆ ಪಂಜಾಬ್ನ ಹಲವು ನಗರಗಳಲ್ಲಿ ಸಿಧು ಅವರ ಮಾತುಗಳನ್ನು ನೆನಪಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಮ್ಮ ಮಾತು ಉಳಿಸಿಕೊಳ್ಳುವಂತೆ ಒತ್ತಾಯಿಸುವ ಪೋಸ್ಟರ್ಗಳು ರಾರಾಜಿಸುತ್ತಿವೆ.
PTI 22 Jun 2019, 5:00 am