ಆ್ಯಪ್ನಗರ

ಮಸೀದಿ ದಾರಿಗೆ ಭೂಮಿ ನೀಡಿದ ಹಿಂದೂಗಳು

ಸಂತ ಕಬೀರ್‌ ನಗರ ಜಿಲ್ಲೆಯಲ್ಲಿ ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆಂದು ಹಿಂದೂಗಳು ಭೂಮಿ ಬಿಟ್ಟು ಕೊಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Vijaya Karnataka Web 1 Mar 2018, 1:52 pm
ಫೈಜಾಬಾದ್‌: ಉತ್ತರಪ್ರದೇಶದ ಸಂತ ಕಬೀರ್‌ ನಗರ ಜಿಲ್ಲೆಯಲ್ಲಿ ಮಸೀದಿಗೆ ಹೋಗಲು ದಾರಿ ನಿರ್ಮಾಣಕ್ಕೆಂದು ಹಿಂದೂಗಳು ಭೂಮಿ ಬಿಟ್ಟು ಕೊಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
Vijaya Karnataka Web when faith bridges gaps in kabirs land hindus give land to make way for masjid
ಮಸೀದಿ ದಾರಿಗೆ ಭೂಮಿ ನೀಡಿದ ಹಿಂದೂಗಳು


ಹಿಂದೂಗಳ ಈ ಕಾರ್ಯದಿಂದಾಗಿ ಮುಸ್ಲಿಮರು ನಮಾಜ್‌ಗೆಂದು ಮಸೀದಿಗೆ ಹೋಗುವುದು ಸುಲಭವಾಗಲಿದೆ. ತವೈಪರ್‌ನಲ್ಲಿ ಮುಸ್ಲಿಮರು ನಮಾಜ್‌ಗೆ ಹೋಗುತ್ತಿದ್ದ ಮಸೀದಿಯ ಪಕ್ಕ ಯಾವಾಗಲೂ ಕೊಳಚೆ ನೀರು ತುಂಬಿಕೊಂಡಿರುತ್ತದೆ. 1963 ರಲ್ಲಿ ನಿರ್ಮಾಣಗೊಂಡ ಮಸೀದಿ ಸುತ್ತ ಪ್ರದೇಶದಲ್ಲಿ ಜನ ಸಂಖ್ಯೆ ಹೆಚ್ಚಿದ್ದು ಮಸೀದಿಗೆ ಹೋಗುವ ಸಮೀಪದ ದಾರಿ ಬಂದ್‌ ಆಗಿ ಸಮಸ್ಯೆಯಾಗಿತ್ತು ಎಂದು ಸ್ಥಳೀಯ ಶಿಕ್ಷಕರೊಬ್ಬರು ಹೇಳಿದ್ದಾರೆ.

ಮುಸ್ಲಿಮರು ಎದುರಿಸುತ್ತಿದ್ದ ಈ ಸಮಸ್ಯೆ ಪರಿಹರಿಸಲು ನಾಚು ಸೂಕ್ತ ಕ್ರಮ ಕೈಗೊಳ್ಳಲು ಮುಂದಾದೆವು. ಗ್ರಾಮದ ರಾಜೇಂದ್ರ ಸಿಂಗ್‌, ಕಪಿಲ್‌ ಸಿಂಗ್‌, ಮಹೇಂದ್ರ ಸಿಂಗ್‌ ಮತ್ತು ನಕ್ಚೆಂದ್‌ ಸಿಂಗ್‌ ಅವರು ಮಸೀದಿ ನಿರ್ಮಿಸುವ ಜಾಗಕ್ಕೆ ಹೋಗಲು ದಾರಿಗಾಗಿ ನೂರು ಮೀಟರ್‌ ಜಾಗ ದಾನ ಮಾಡಿದ್ದಾರೆ ಎಂದು ಗ್ರಾಮದ ಪ್ರಧಾನರಾಗಿರುವ ಊರ್ಮಿಳಾ ದೇವಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ