ಆ್ಯಪ್ನಗರ

Kanakadurga: ಅಯ್ಯಪ್ಪ ದೇಗುಲ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗಾ ಯಾರು? ಅವರ ಹಿನ್ನೆಲೆಯೇನು?

ಶಬರಿಮಲೆ ಭಕ್ತರ ತೀವ್ರ ಪ್ರತಿಭಟನೆ ನಡುವೆ ರಾತ್ರೋರಾತ್ರಿ ಮುಸುಕು ಧರಿಸಿ, ಯಾರಿಗೂ ಗೊತ್ತಿಲ್ಲದಂತೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವ ಮೂಲಕ ಸಂಚಲನ ಸೃಷ್ಟಿಸಿರುವ ಬಿಂದು ಮತ್ತು ಕನಕದುರ್ಗಾ.

Vijaya Karnataka Web 3 Jan 2019, 9:08 pm

ಹೈಲೈಟ್ಸ್‌:

  • ಆರಂಭದಲ್ಲಿ ಕಮ್ಯುನಿಸ್ಟ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಂದು, ಮೂಲತಃ ದಲಿತಹಕ್ಕು ಹೋರಾಟಗಾರ್ತಿ.
  • ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಕನಕದುರ್ಗಾ ಅವರು ಅಪ್ಪಟ ಅಯ್ಯಪ್ಪ ಭಕ್ತೆ.
  • ಬಿಂದು ಅವರಿಗೆ 42 ವರ್ಷ ಮತ್ತು ಕನಕದುರ್ಗಾ ಅವರಿಗೆ 44 ವರ್ಷ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ತಿರುವನಂತಪುರ: ಅಯ್ಯಪ್ಪ ಭಕ್ತರದ ತೀವ್ರ ವಿರೋಧದ ನಡುವೆ ರಾತ್ರೋರಾತ್ರಿ ಮುಸುಕು ಧರಿಸಿ ಅಯ್ಯಪ್ಪ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೇರಳದಲ್ಲಿ ಹಲವೆಡೆ ಪ್ರತಿಭಟನೆ, ರಸ್ತೆ ತಡೆ ನಡೆಯುತ್ತಿದೆ.
ಅಯ್ಯಪ್ಪ ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರ ಹೆಸರು ಬಿಂದು ಮತ್ತು ಕನಕದುರ್ಗಾ. ಮೂಲತಃ ದಲಿತ ಹಕ್ಕು ಹೋರಾಟಗಾರ್ತಿಯಾಗಿರುವ ಬಿಂದು, ಕೇರಳದ ಕೊಯಿಕ್ಕೋಡ್‌ ಮೂಲದವರು. ಕಣ್ಣೂರು ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಲೀಗಲ್‌ ಸ್ಟಡೀಸ್‌ನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಮಾಡುತ್ತಿದ್ದಾರೆ. ಆರಂಭದಲ್ಲಿ ಕಮ್ಯುನಿಸ್ಟ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಂದು ಭಿನ್ನಾಭಿಪ್ರಾಯದ ಹಿನ್ನೆಲೆ 2010ರಲ್ಲಿ ರಾಜಕೀಯ ಪಕ್ಷ ತೊರೆದಿದ್ದರು. ಇವರಿಗೆ 42 ವರ್ಷ ವಯಸ್ಸಾಗಿದೆ.

ಮಲಪ್ಪುರಂ ನಿವಾಸಿ ಕನಕದುರ್ಗಾ ಅಪ್ಪಟ ಅಯ್ಯಪ್ಪನ ಭಕ್ತೆ ಎನ್ನಲಾಗಿದೆ. ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇವರು ಇದುವರೆಗೂ ಯಾವುದೇ ಹೋರಾಟದಲ್ಲಿ ಗುರುತಿಸಿಕೊಂಡಿರುವ ಉದಾಹರಣೆಗಳಿಲ್ಲ. ಆದರೆ ಅಯ್ಯಪ್ಪನ ದರ್ಶನ ಪಡೆಯಬೇಕೆಂಬ ಮಹದಾಸೆಗೆ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕೇರಳ ಸರಕಾರದ ನಾಗರಿಕ ಮತ್ತು ಪೂರೈಕೆ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 44 ವರ್ಷ ವಯಸ್ಸಾಗಿದೆ.


ಇಬ್ಬರು ಮಹಿಳೆಯರಿಂದ ಶಬರಿಮಲೆ ಪ್ರವೇಶ: ಏಳು ದಿನಗಳ ಪ್ಲಾನ್ಡ್‌ ಎಂಟ್ರಿಯಿದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ