ಹೊಸದಿಲ್ಲಿ: ಇದೇ ಮೇ 3 ಭಾನುವಾರದಂದು ದೇಶದ ಸಶಸ್ತ್ರ ಪಡೆಗಳು ದೇಶದ್ಯಂತ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದೇವೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿಎನ್ ರಾವತ್ ಹೇಳಿಕೆ ನೀಡಿದ್ದರು. ಇದೀಗ ದೇಶದ ಸಶಸ್ತ್ರ ಪಡೆಯ ನಿರ್ಣಯವನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಾಯ್ನಾಡನ್ನು ರಕ್ಷಿಸುವ ಮಹತ್ವ ಸಶಸ್ತ್ರ ಪಡೆಗಳಿಗಿಂತ ಇನ್ಯಾರು ಅರ್ಥಮಾಡಿಕೊಳ್ಳಬಲ್ಲರು ಎಂದು ಹೇಳಿದ್ದಾರೆ.
"ಸಶಸ್ತ್ರ ಪಡೆಗಳ ನಿರ್ಧಾರವು ನಮ್ಮ ವೈದ್ಯರು, ಆರೋಗ್ಯ ಕಾರ್ಯಕರ್ತರು, ಶುಚಿತ್ವ ಸಿಬ್ಬಂದಿಗಳು, ಭದ್ರತೆ ಹಾಗೂ ಮಾಧ್ಯಮ ಕಾರ್ಯಕರ್ತರ ಮನೋಸ್ಥೈರ್ಯ ಹಾಗೂ ವಿಶ್ವಾಸವನ್ನು ಹೆಚ್ಚಿಸುವ ಬಗ್ಗೆ ನನಗೆ ನಂಬಿಕೆಯಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕೊರೊನಾ ಯೋಧರಿಗೆ ಧನ್ಯವಾದ ಹೇಳಲು ನಾವೊಂದು ರಾಷ್ಟ್ರವಾಗಿ ಒಗ್ಗಟ್ಟಾಗಿದ್ದೇವೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಅವಕಾಶವನ್ನು ಭಾರತ ಸದುಪಯೋಗಪಡಿಸಬೇಕು: ಪ್ರಕಾಶ್ ಜಾವಡೇಕರ್
ಕೊರೊನಾ ವಾರಿಯರ್ಸ್ಗೆ ಧನ್ಯವಾದಗಳನ್ನು ಸೂಚಿಸುವ ನಿಟ್ಟಿನಲ್ಲಿ ಭಾರತೀಯ ಸಶಸ್ತ್ರ ಪಡೆಯು ಭಾನುವಾರದಂದು ವೈಮಾನಿಕ ಪ್ರದರ್ಶನ, ಸಾರದಲ್ಲಿ ಹಡಗಿನಲ್ಲಿ ದೀಪ ಬೆಳಗಿಸುವುದು, ಮಿಲಿಟರಿ ಬ್ಯಾಂಡ್ ಪ್ರದರ್ಶನ ಮತ್ತು ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಫ ವೃಷ್ಟಿಯನ್ನು ಮಾಡಲಿದೆ. ಈ ಮೂಲಕ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಪೊಲೀಸರು ಸೇರಿದಂತೆ ದೇಶದ ಸಾವಿರಾರು ಕೊರೊನಾ ಯೋಧರಿಗೆ ಕೃತಜ್ಞತೆಯನ್ನು ಸಲ್ಲಿಸಲಿದೆ.
"ನಮ್ಮ ಸಶಸ್ತ್ರ ಪಡೆಗಳಿಂದ ನಮ್ಮ ತಾಯ್ನಾಡನ್ನು ಸುರಕ್ಷಿತವಾಗಿಡುವ ಮಹತ್ವವನ್ನು ಬೇರೆ ಯಾರು ಅರ್ಥಮಾಡಿಕೊಳ್ಳುವರು. ಕೋವಿಂಡ್ 19 ಭೀತಿಯಿಂದ ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡಲು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಧನ್ಯವಾದ ಹೇಳುವ ನಿರ್ಧಾರಕ್ಕಾಗಿ ಸಶಸ್ತ್ರ ಪಡೆಯ ನಿರ್ಧಾರವನ್ನು ಶ್ಲಾಘಿಸುತ್ತೇನೆ" ಎಂದು ಅಮಿತ್ ಶಾ ಉಲ್ಲೇಖ ಮಾಡಿದರು.
ಲಾಕ್ಡೌನ್ ವಿಸ್ತರಣೆ: ಮೇ 4ರ ನಂತರ ಅನ್ವಯಗೊಳ್ಳುವ ಪರಿಷ್ಕೃತ ನಿಯಮಗಳ ಪಟ್ಟಿ ಇಲ್ಲಿದೆ
ಇದಕ್ಕೂ ಮೊದಲು ಸರಣಿ ಟ್ವೀಟ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೊನಾ ಯೋಧರ ಹೋರಾಟವನ್ನು ಶ್ಲಾಘಿಸಿದ್ದರು. ಅಲ್ಲದೆ ಸಶಸ್ತ್ರ ಪಡೆಯ ಸೇವೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ವಿಪತ್ತಿನ ಸಮಯದಲ್ಲೂ ದೇಶದ ಜನರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಭಾನುವಾರದಂದು ಭೂಸೇನೆಯ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳ ಮೂಲಕ ಹೂವಿನ ವರ್ಷಧಾರೆಯನ್ನು ಆಸ್ಪತ್ರೆಗಳ ಮೇಲೆ ಸುರಿಸಲಿದೆ. ಹಾಗೆಯೇ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಮುಂಭಾಗದಲ್ಲಿ ಆರ್ಮಿ ಬ್ಯಾಂಡ್ ಬಾರಿಸಲಿದೆ. ದೇಶದೆಲ್ಲೆಡೆ ವೈಶಿಷ್ಟ ಪೂರ್ಣ ಫ್ಲೈ ಪಾಸ್ಟ್ಗಳ ಪ್ರದರ್ಶನ ನೀಡಲಿದೆ. ಕಡಲ ತೀರದಲ್ಲಿರುವ ನೌಕಾಪಡೆಯ ಹಡಗುಗಳು ದೀಪ ಹಾಗೂ ಬೆಳಕನ್ನು ಬೆಳಗಲಿದೆ.
ಕೊರೊನಾ ಲೈವ್ ಅಪ್ಡೇಟ್ಸ್; ದೆಹಲಿಯ 122 ಸಿಆರ್ಪಿಎಫ್ ಯೋಧರಿಗೆ ಸೋಂಕಿದ ವೈರಸ್!
"ಸಶಸ್ತ್ರ ಪಡೆಗಳ ನಿರ್ಧಾರವು ನಮ್ಮ ವೈದ್ಯರು, ಆರೋಗ್ಯ ಕಾರ್ಯಕರ್ತರು, ಶುಚಿತ್ವ ಸಿಬ್ಬಂದಿಗಳು, ಭದ್ರತೆ ಹಾಗೂ ಮಾಧ್ಯಮ ಕಾರ್ಯಕರ್ತರ ಮನೋಸ್ಥೈರ್ಯ ಹಾಗೂ ವಿಶ್ವಾಸವನ್ನು ಹೆಚ್ಚಿಸುವ ಬಗ್ಗೆ ನನಗೆ ನಂಬಿಕೆಯಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕೊರೊನಾ ಯೋಧರಿಗೆ ಧನ್ಯವಾದ ಹೇಳಲು ನಾವೊಂದು ರಾಷ್ಟ್ರವಾಗಿ ಒಗ್ಗಟ್ಟಾಗಿದ್ದೇವೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಅವಕಾಶವನ್ನು ಭಾರತ ಸದುಪಯೋಗಪಡಿಸಬೇಕು: ಪ್ರಕಾಶ್ ಜಾವಡೇಕರ್
ಕೊರೊನಾ ವಾರಿಯರ್ಸ್ಗೆ ಧನ್ಯವಾದಗಳನ್ನು ಸೂಚಿಸುವ ನಿಟ್ಟಿನಲ್ಲಿ ಭಾರತೀಯ ಸಶಸ್ತ್ರ ಪಡೆಯು ಭಾನುವಾರದಂದು ವೈಮಾನಿಕ ಪ್ರದರ್ಶನ, ಸಾರದಲ್ಲಿ ಹಡಗಿನಲ್ಲಿ ದೀಪ ಬೆಳಗಿಸುವುದು, ಮಿಲಿಟರಿ ಬ್ಯಾಂಡ್ ಪ್ರದರ್ಶನ ಮತ್ತು ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಫ ವೃಷ್ಟಿಯನ್ನು ಮಾಡಲಿದೆ. ಈ ಮೂಲಕ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಪೊಲೀಸರು ಸೇರಿದಂತೆ ದೇಶದ ಸಾವಿರಾರು ಕೊರೊನಾ ಯೋಧರಿಗೆ ಕೃತಜ್ಞತೆಯನ್ನು ಸಲ್ಲಿಸಲಿದೆ.
"ನಮ್ಮ ಸಶಸ್ತ್ರ ಪಡೆಗಳಿಂದ ನಮ್ಮ ತಾಯ್ನಾಡನ್ನು ಸುರಕ್ಷಿತವಾಗಿಡುವ ಮಹತ್ವವನ್ನು ಬೇರೆ ಯಾರು ಅರ್ಥಮಾಡಿಕೊಳ್ಳುವರು. ಕೋವಿಂಡ್ 19 ಭೀತಿಯಿಂದ ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡಲು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಧನ್ಯವಾದ ಹೇಳುವ ನಿರ್ಧಾರಕ್ಕಾಗಿ ಸಶಸ್ತ್ರ ಪಡೆಯ ನಿರ್ಧಾರವನ್ನು ಶ್ಲಾಘಿಸುತ್ತೇನೆ" ಎಂದು ಅಮಿತ್ ಶಾ ಉಲ್ಲೇಖ ಮಾಡಿದರು.
ಲಾಕ್ಡೌನ್ ವಿಸ್ತರಣೆ: ಮೇ 4ರ ನಂತರ ಅನ್ವಯಗೊಳ್ಳುವ ಪರಿಷ್ಕೃತ ನಿಯಮಗಳ ಪಟ್ಟಿ ಇಲ್ಲಿದೆ
ಇದಕ್ಕೂ ಮೊದಲು ಸರಣಿ ಟ್ವೀಟ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೊನಾ ಯೋಧರ ಹೋರಾಟವನ್ನು ಶ್ಲಾಘಿಸಿದ್ದರು. ಅಲ್ಲದೆ ಸಶಸ್ತ್ರ ಪಡೆಯ ಸೇವೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ವಿಪತ್ತಿನ ಸಮಯದಲ್ಲೂ ದೇಶದ ಜನರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಭಾನುವಾರದಂದು ಭೂಸೇನೆಯ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳ ಮೂಲಕ ಹೂವಿನ ವರ್ಷಧಾರೆಯನ್ನು ಆಸ್ಪತ್ರೆಗಳ ಮೇಲೆ ಸುರಿಸಲಿದೆ. ಹಾಗೆಯೇ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಮುಂಭಾಗದಲ್ಲಿ ಆರ್ಮಿ ಬ್ಯಾಂಡ್ ಬಾರಿಸಲಿದೆ. ದೇಶದೆಲ್ಲೆಡೆ ವೈಶಿಷ್ಟ ಪೂರ್ಣ ಫ್ಲೈ ಪಾಸ್ಟ್ಗಳ ಪ್ರದರ್ಶನ ನೀಡಲಿದೆ. ಕಡಲ ತೀರದಲ್ಲಿರುವ ನೌಕಾಪಡೆಯ ಹಡಗುಗಳು ದೀಪ ಹಾಗೂ ಬೆಳಕನ್ನು ಬೆಳಗಲಿದೆ.
ಕೊರೊನಾ ಲೈವ್ ಅಪ್ಡೇಟ್ಸ್; ದೆಹಲಿಯ 122 ಸಿಆರ್ಪಿಎಫ್ ಯೋಧರಿಗೆ ಸೋಂಕಿದ ವೈರಸ್!