ಬೆಂಗಳೂರು: ಇಂದು ಹೆಸರಾಂತ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ 104ನೇ ಜನ್ಮದಿನಾಚರಣೆ. 1914ರ ಡಿಸೆಂಬರ್ 26ರಂದು (ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ) ಮಹಾರಾಷ್ಟ್ರದಲ್ಲಿ ಜನಿಸಿದ್ದ ಮುರಳೀಧರ ದೇವದಾಸ್ ಆಮ್ಟೆ ಬಾಬಾ ಆಮ್ಟೆ ಎಂದೇ ಖ್ಯಾತರು. ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ ಬಾಬಾ ಅವರನ್ನು ಚಿಕ್ಕಂದಿನಲ್ಲಿ ಬಾಬಾ ಎಂದು ಕರೆಯುತ್ತಿದ್ದರು. ಬಳಿಕ ಅವರದೇ ಹೆಸರಿಂದ ಪ್ರಸಿದ್ಧರಾದರು. ಬಾಬಾ ಆಮ್ಟೆಯವರು ದಲಿತರ ಕಲ್ಯಾಣಕ್ಕಾಗಿ ಮತ್ತು ಕುಷ್ಠರೋಗಿಗಳ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಕುಟುಂಬ, ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಕುಷ್ಠರೋಗಿಗಳಿಗೆ ಘನತೆಯ ಬದುಕು ಒದಗಿಸಿಕೊಂಡಬೇಕೆಂಬ ಧ್ಯೇಯದೊಂದಿಗೆ ಅಂತವರ ಪುನರ್ವಸತಿಗಾಗಿ 1949ರಲ್ಲಿ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ವರೋರಾ ಬಳಿ 'ಆನಂದವನ' ಎಂಬ ಆಶ್ರಮ ಸ್ಥಾಪಿಸಿದರು. ಪತ್ನಿ ಸಾಧನಾ, 2 ಮತ್ತು 1 ವರ್ಷದ ಇಬ್ಬರು ಪುತ್ರರು, ಒಂದು ಆಕಳು ಮತ್ತು ಏಳು ಕುಷ್ಠರೋಗಿಗಳೊಂದಿಗೆ ಈ ಗ್ರಾಮಕ್ಕೆ ಬಂದು ನೆಲೆಸಿದ ಅವರು ತಮ್ಮ ಸೇವಾಕಾರ್ಯವನ್ನು ಆರಂಭಿಸಿದ್ದರು. ಅವರ ಈ ಧ್ಯೇಯ ಫಲಿತವಾಗಿ ಹೆಮ್ಮರವಾಗಿ ಬೆಳೆದು, ಮುರಳೀಧರ ಆಮ್ಟೆ ‘ಬಾಬಾ ಆಮ್ಟೆ’ಯಾಗಿ ಮಾನವೀಯತೆಯ ಮಹಾಶಕ್ತಿಯಾಗಿ ಗುರುತಿಸಿಕೊಂಡರು.
ವಕೀಲಿ ಪದವಿ ಪಡೆದಿದ್ದ ಅವರು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದಿಂದ ಪ್ರಭಾವಿತರಾಗಿದ್ದು 1940 ರ ದಶಕದಲ್ಲಿ ಕಾನೂನು ವೃತ್ತಿಜೀವನವನ್ನು ಕೈಬಿಟ್ಟರು. ರೋಗಿಗಳ ಸೇವೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಕೋಲ್ಕತ್ತಾದ ಟ್ರೊಪಿಕಲ್ ಮೆಡಿಸಿನ್ನ ಆಪ್ ಸ್ಕೂಲ್ನಲ್ಲಿ ಕುಷ್ಠರೋಗದ ಬಗ್ಗೆ ಅಧ್ಯಯನ ನಡೆಸಿದರು.
ದೇಶದ ಏಕತೆಯಲ್ಲಿ ಬಲವಾದ ನಂಬಿಕೆಯಿಟ್ಟಿದ್ದ ಬಾಬಾ ಆಮ್ಟೆ, 1985ರಲ್ಲಿ ಮೊದಲ 'ನಿಟ್ ಇಂಡಿಯಾ ಮಾರ್ಚ್' (ಭಾರತ ಜೋಡಿಸಿ ಅಭಿಯಾನ) ಆರಂಭಿಸಿದರು. ಭಾರತದಲ್ಲಿ ಏಕತೆಯ ಭಾವನೆ ಮೂಡಿಸಲು ತಮ್ಮ 72ನೇ ವಯಸ್ಸಿನಲ್ಲಿ 1985ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಕಾಲ್ನಡಿಗೆ ಯಾತ್ರೆ ನಡೆಸಿದರು. ಮೂರು ವರ್ಷಗಳ ಬಳಿಕ ಬಾಬಾ ಆಮ್ಟೆ ಅವರು ಅಸ್ಸಾಂನಿಂದ ಗುಜರಾತ್ ವರೆಗೆ 1800 ಮೈಲುಗಳನ್ನು ಕ್ರಮಿಸಿದರು.
ಮಾನವೀಯತೆಯ ಸಾಕಾರಮೂರ್ತಿಯಾಗಿದ್ದ ಆಮ್ಟೆಯವರಿಗೆ ಅಂತರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. 1971ರಲ್ಲಿ ಬಾಬಾ ಆಮ್ಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1988ರಲ್ಲಿ ಮಾನವ ಹಕ್ಕುಗಳ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಶಸ್ತಿ ಹಾಗೂ 1999ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿಗಳು ಅವರನ್ನು ಅರಸಿ ಬಂದವು.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಮ್ಟೆ ಫೆಬ್ರವರಿ 9,2009ರಲ್ಲಿ ಆನಂದವನ ಆಶ್ರಮದಲ್ಲಿಯೇ ಕೊನೆಯುಸಿರೆಳೆದರು. ಎಲ್ಲ ಸರಕಾರಿ ಗೌರವಗಳೊಂದಿಗೆ ಮಹಾರಾಷ್ಟ್ರ ಸರಕಾರ ಅವರ ಅಂತಿಮ ಸಂಸ್ಕಾರ ನಡೆಸಿತು.
2008ರಲ್ಲಿ ಬಾಬಾ ಆಮ್ಟೆ ನಿಧನದ ನಂತರ ಅವರ ಪುತ್ರರಾದ ಡಾ.ವಿಕಾಸ್ ಆಮ್ಟೆ ಮತ್ತು ಡಾ.ಪ್ರಕಾಶ್ ಆಮ್ಟೆ ‘ಆನಂದವನ’ ಕುಟುಂಬದ ಸಂಪೂರ್ಣ ಹೊಣೆ ಹೊತ್ತಿದ್ದಾರೆ.
ಗೂಗಲ್ ಡೂಡಲ್ ಗೌರವ
ಬಾಬಾ ಆಮ್ಟೆ ಅವರ ಜನ್ಮದಿನದ ಪ್ರಯುಕ್ತ ಗೂಗಲ್ ಇಂದು ವಿಶೇಷ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ.
ವಕೀಲಿ ಪದವಿ ಪಡೆದಿದ್ದ ಅವರು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದಿಂದ ಪ್ರಭಾವಿತರಾಗಿದ್ದು 1940 ರ ದಶಕದಲ್ಲಿ ಕಾನೂನು ವೃತ್ತಿಜೀವನವನ್ನು ಕೈಬಿಟ್ಟರು. ರೋಗಿಗಳ ಸೇವೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಕೋಲ್ಕತ್ತಾದ ಟ್ರೊಪಿಕಲ್ ಮೆಡಿಸಿನ್ನ ಆಪ್ ಸ್ಕೂಲ್ನಲ್ಲಿ ಕುಷ್ಠರೋಗದ ಬಗ್ಗೆ ಅಧ್ಯಯನ ನಡೆಸಿದರು.
ದೇಶದ ಏಕತೆಯಲ್ಲಿ ಬಲವಾದ ನಂಬಿಕೆಯಿಟ್ಟಿದ್ದ ಬಾಬಾ ಆಮ್ಟೆ, 1985ರಲ್ಲಿ ಮೊದಲ 'ನಿಟ್ ಇಂಡಿಯಾ ಮಾರ್ಚ್' (ಭಾರತ ಜೋಡಿಸಿ ಅಭಿಯಾನ) ಆರಂಭಿಸಿದರು. ಭಾರತದಲ್ಲಿ ಏಕತೆಯ ಭಾವನೆ ಮೂಡಿಸಲು ತಮ್ಮ 72ನೇ ವಯಸ್ಸಿನಲ್ಲಿ 1985ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಕಾಲ್ನಡಿಗೆ ಯಾತ್ರೆ ನಡೆಸಿದರು. ಮೂರು ವರ್ಷಗಳ ಬಳಿಕ ಬಾಬಾ ಆಮ್ಟೆ ಅವರು ಅಸ್ಸಾಂನಿಂದ ಗುಜರಾತ್ ವರೆಗೆ 1800 ಮೈಲುಗಳನ್ನು ಕ್ರಮಿಸಿದರು.
ಮಾನವೀಯತೆಯ ಸಾಕಾರಮೂರ್ತಿಯಾಗಿದ್ದ ಆಮ್ಟೆಯವರಿಗೆ ಅಂತರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. 1971ರಲ್ಲಿ ಬಾಬಾ ಆಮ್ಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1988ರಲ್ಲಿ ಮಾನವ ಹಕ್ಕುಗಳ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಶಸ್ತಿ ಹಾಗೂ 1999ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿಗಳು ಅವರನ್ನು ಅರಸಿ ಬಂದವು.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಮ್ಟೆ ಫೆಬ್ರವರಿ 9,2009ರಲ್ಲಿ ಆನಂದವನ ಆಶ್ರಮದಲ್ಲಿಯೇ ಕೊನೆಯುಸಿರೆಳೆದರು. ಎಲ್ಲ ಸರಕಾರಿ ಗೌರವಗಳೊಂದಿಗೆ ಮಹಾರಾಷ್ಟ್ರ ಸರಕಾರ ಅವರ ಅಂತಿಮ ಸಂಸ್ಕಾರ ನಡೆಸಿತು.
2008ರಲ್ಲಿ ಬಾಬಾ ಆಮ್ಟೆ ನಿಧನದ ನಂತರ ಅವರ ಪುತ್ರರಾದ ಡಾ.ವಿಕಾಸ್ ಆಮ್ಟೆ ಮತ್ತು ಡಾ.ಪ್ರಕಾಶ್ ಆಮ್ಟೆ ‘ಆನಂದವನ’ ಕುಟುಂಬದ ಸಂಪೂರ್ಣ ಹೊಣೆ ಹೊತ್ತಿದ್ದಾರೆ.
ಗೂಗಲ್ ಡೂಡಲ್ ಗೌರವ
ಬಾಬಾ ಆಮ್ಟೆ ಅವರ ಜನ್ಮದಿನದ ಪ್ರಯುಕ್ತ ಗೂಗಲ್ ಇಂದು ವಿಶೇಷ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ.