ಆ್ಯಪ್ನಗರ

ಗೌರಿಗೆ ಭದ್ರತೆ ನೀಡಿಲ್ಲ ಏಕೆ?: ಸಿದ್ದರಾಮಯ್ಯ ಸರಕಾರಕ್ಕೆ ಕೇಂದ್ರ ಸಚಿವ ಪ್ರಸಾದ್‌ ಪ್ರಶ್ನೆ

ನಕ್ಸಲರ ಶರಣಾಗತಿ ವಿಚಾರದಲ್ಲಿ ಮುಂದಾಳತ್ವ ವಹಿಸಿದ್ದ ಗೌರಿ ಲಂಕೇಶ್‌ ಅವರಿಗೆ ರಾಜ್ಯ ಸರಕಾರ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಹಿರಿಯ ಮುಖಂಡ ರವಿಶಂಕರ್‌ ಪ್ರಸಾದ್‌ ಆರೋಪಿಸಿದ್ದಾರೆ.

TNN & Agencies 9 Sep 2017, 11:07 am

ಹೊಸದಿಲ್ಲಿ: ನಕ್ಸಲರ ಶರಣಾಗತಿ ವಿಚಾರದಲ್ಲಿ ಮುಂದಾಳತ್ವ ವಹಿಸಿದ್ದ ಗೌರಿ ಲಂಕೇಶ್‌ ಅವರಿಗೆ ರಾಜ್ಯ ಸರಕಾರ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಹಿರಿಯ ಮುಖಂಡ ರವಿಶಂಕರ್‌ ಪ್ರಸಾದ್‌ ಆರೋಪಿಸಿದ್ದಾರೆ.

Vijaya Karnataka Web why adequate secrity is not given to gauri lankesh ravi shanker prasad questions karnataka govt
ಗೌರಿಗೆ ಭದ್ರತೆ ನೀಡಿಲ್ಲ ಏಕೆ?: ಸಿದ್ದರಾಮಯ್ಯ ಸರಕಾರಕ್ಕೆ ಕೇಂದ್ರ ಸಚಿವ ಪ್ರಸಾದ್‌ ಪ್ರಶ್ನೆ


ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಗೌರಿ ಅವರು ನಕ್ಸಲರ ಶರಣಾಗತಿ ವಿಚಾರದಲ್ಲಿ ಸಕ್ರಿಯವಾಗಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಅವರು ಸರಕಾರದ ಅನುಮತಿ ಮೇರೆಗೆ ಈ ಕಾರ್ಯದಲ್ಲಿ ತೊಡಗಿದ್ದರೆ, ಅವರಿಗೆ ಸರಕಾರ ಭದ್ರತೆ ಏಕೆ ಒದಗಿಸಿಲ್ಲ. ಅದರಲ್ಲೂ ಗೌರಿ ಅವರ ನಡೆಯ ಕುರಿತು ಕೆಲ ನಕ್ಸಲರಿಗೆ ಅಸಮಾಧಾನವಿತ್ತು ಎನ್ನಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ತಿಳಿದಿದ್ದರೂ ಸೂಕ್ತ ಭದ್ರತೆಯನ್ನು ಏಕೆ ಒದಗಿಸಲಿಲ್ಲ?,'' ಎಂದು ಅವರು ಪ್ರಶ್ನಿಸಿದರು.

''ಪತ್ರಕರ್ತೆಯ ಹತ್ಯೆಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆರ್‌ಎಸ್‌ಎಸ್‌ ಅನ್ನು ದೂಷಿಸಿದ್ದಾರೆ. ಗೌರಿಯವರ ಭದ್ರತೆ ಕುರಿತಂತೆ ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರಕಾರವನ್ನು ಪ್ರಶ್ನೆ ಮಾಡಿಲ್ಲ, ಇಂತಹ ಕಾಂಗ್ರೆಸ್‌ ಸರಕಾರದಿಂದ ಪ್ರಾಮಾಣಿಕ ತನಿಖೆ ನಿರೀಕ್ಷಿಸುವುದಾದರೂ ಹೇಗೆ?,'' ಎಂದರು.

''ಪತ್ರಕರ್ತೆಯ ಹತ್ಯೆಯ ಕುರಿತು ಕಠಿಣವಾಗಿ ಮಾತನಾಡುತ್ತಿರುವ ಎಲ್ಲ ಪ್ರಗತಿಪರರು, ಕರ್ನಾಟಕ ಮತ್ತು ಕೇರಳದಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಯಾದಾಗ ಮೌನ ವಹಿಸಿದ್ದು ಏಕೆ,'' ಎಂದು ರವಿಶಂಕರ್‌ ಪ್ರಶ್ನೆ ಮಾಡಿದರು.

ಲಕ್ಷಾಂತರ ಗೌರಿಯರು ಹುಟ್ಟುತ್ತಾರೆ:

'ಒಬ್ಬ ಗೌರಿಯನ್ನು ಕೊಂದರೆ, ಲಕ್ಷಾಂತರ ಮಂದಿ ಹುಟ್ಟಿಕೊಳ್ಳುತ್ತಾರೆ. ಹಣೆಗೆ ಬುಲೆಟ್‌ ಹೊಡೆಯುವುದರಿಂದ ಲೇಖನಿ ಹಿಡಿದಿರುವ ಒಬ್ಬ ದಿಟ್ಟ ವ್ಯಕ್ತಿಯ ಅಭಿವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಅವರ ಹೃದಯದಲ್ಲಿರುವ ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯ ಕಿಚ್ಚನ್ನು ಆರಿಸಲು ಸಾಧ್ಯವಿಲ್ಲ'.
-ಪವನ್‌ ಕಲ್ಯಾಣ್‌, ನಟ, ರಾಜಕಾರಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ