ಆ್ಯಪ್ನಗರ

ಗಾಂಧಿ ಕುಟುಂಬದ ಅತ್ಯಾಪ್ತ ಏಕಾಏಕಿ ಬಂಡಾಯವೆದ್ದಿದ್ದು ಏಕೆ? ನಿಬ್ಬೆರಗಾಗಿಸಿದ ಅಜಾದ್‌ ನಡೆ!

ಕಾಂಗ್ರೆಸ್‌ ಮೂಲಗಳ ಪ್ರಕಾರ ಆರ್ಟಿಕಲ್‌ 370 ಬಳಿಕ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ ಪ್ರಮುಖರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಆರ್ಟಿಕಲ್‌ ಜಾರಿಯಾದರು ಅದನ್ನ ಸಮರ್ಥವಾಗಿಎದುರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎನ್ನುವ ನೋವು ಇತ್ತಂತೆ. ಹೀಗಾಗಿ ಈ ವಿಚಾರ ಅಧ್ಯಕ್ಷರ ಬದಲಾವಣೆಗೆ ಬಂಡಾಯವಾಗಿ ಬಂದಿದೆ ಎನ್ನಲಾಗಿದೆ.

Vijaya Karnataka Web 26 Aug 2020, 3:54 pm
ಹೊಸದಿಲ್ಲಿ: ಗಾಂಧಿ ಕುಟುಂಬದ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಅವರ ಬಗ್ಗೆಯೇ ಈಗ ಪಕ್ಷ ಹಾಗೂ ಹೊರಗಡೆ ಭಾರೀ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಹೊರ ಬಂದ ಬಂಡಾಯ.ಅದು ಮಾತ್ರವಲ್ಲದೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿರುವ ಅವರೇ ಪಕ್ಷದ ಅಧ್ಯಕ್ಷರ ಬದಲಾವಣೆಗೆ ಪತ್ರ ಬರೆದರು ಎನ್ನುವುದು ಕೂಡ ಮತ್ತೊಂದು ಹೊಸ ವಿಚಾರ. ಈ ವಿಚಾರಗಳಲ್ಲೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೈ ಪಾಳಯದ ಅನೇಕರಿಗೆ ಇದು ಶಾಕಿಂಗ್‌ ಆಗಿದೆ. ಹಾಗಾದರೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್‌ ಅವರ ಬಂಡಾಯಕ್ಕೆ ಏನಾದರು ಕಾರಣವಿದ್ಯಾ? ಅಥವಾ ಬೇರೆ ಯಾರದರು ಅವರನ್ನ ಎತ್ತಿ ಕಟ್ಟಿದರ? ಇಲ್ಲಿದೆ ಈ ಬಗ್ಗೆ ಸಂಫೂರ್ಣ ಮಾಹಿತಿ.
Vijaya Karnataka Web why ghulam nabi azad become an unlikely rebel
ಗಾಂಧಿ ಕುಟುಂಬದ ಅತ್ಯಾಪ್ತ ಏಕಾಏಕಿ ಬಂಡಾಯವೆದ್ದಿದ್ದು ಏಕೆ? ನಿಬ್ಬೆರಗಾಗಿಸಿದ ಅಜಾದ್‌ ನಡೆ!


ಆರ್ಟಿಕಲ್‌ 370 ಬಗ್ಗೆ ಅಸಮಾಧಾನ?

ಕಾಂಗ್ರೆಸ್‌ ಮೂಲಗಳ ಪ್ರಕಾರ ಆರ್ಟಿಕಲ್‌ 370 ಬಳಿಕ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ ಪ್ರಮುಖರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಆರ್ಟಿಕಲ್‌ ಜಾರಿಯಾಗುವ ವೇಳೆ ಅದನ್ನ ಸಮರ್ಥವಾಗಿ ನಿಲ್ಲಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎನ್ನುವ ನೋವು ಇತ್ತಂತೆ. ಹೀಗಾಗಿ ಈ ವಿಚಾರ ಅಧ್ಯಕ್ಷರ ಬದಲಾವಣೆಗೆ ಬಂಡಾಯವಾಗಿ ಬಂದಿದೆ ಎನ್ನಲಾಗಿದೆ. ಅಲ್ಲದೇ 23 ಜನರ ಪೈಕಿ ಹಿರಿಯರಲ್ಲಿ ಗುಲಾಂ ನಬಿ ಅಜಾದ್‌ ಅವರ ಮಾತು ಕೊಂಚ ಖಾರವಾಗೇ ತಟ್ಟಬಹುದು ಹಾಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದುಕೊಂಡೆ ಅವರನ್ನ ಮುಂದೆ ಬಿಡಲಾಯಿತು ಎನ್ನಲಾಗಿದೆ.

ಸೋನಿಯಾ, ಮಮತಾರಿಂದ ವರ್ಚುವಲ್ ಸಭೆಗೆ ಕರೆ: ವಿಪಕ್ಷ ಒಗ್ಗೂಡಿಕೆಗೆ ದಿಗ್ಗಜರ ಪ್ರಯತ್ನ!

ಪಕ್ಷ ಬಲಪಡಿಸುವ ಉದ್ದೇಶ?

ಇನ್ನೊಂದೆಡೆ ಪತ್ರ ಬರೆದಿರುವ ಗುಂಪಿನ ಪೈಕಿ ಪ್ರಮುಖರೆನಿಸುವ ಗುಲಾಂ ನಬಿ ಅಜಾದ್‌ ಹಿಂದೆ ಪಕ್ಷ ಬಲಿಪಡಿಸುವ ಉದ್ದೇಶವು ಇತ್ತು ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಾರಿ ಈ ಪತ್ರ ಇಲ್ಲದಿದ್ದರೆ ಸಾಮಾನ್ಯವಾಗಿ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ನಡೆದಂತೆ ಇದು ಕೂಡ ನಡೆಯುತ್ತಿತ್ತು. ಆದರೆ ಪ್ರಬಲವಾದ ಹಾಗೂ ಪೂರ್ತಿ ಸಮಯ ಪಕ್ಷಕ್ಕಾಗಿ ದುಡಿಯುವ ಅಧ್ಯಕ್ಷನ ಬೇಡಿಕೆಯ ಪತ್ರ ಬರೆಯುವ ಮೂಲಕ ಗಾಂಧಿ ಕುಟುಂಬಕ್ಕೆ ಅಧ್ಯಕ್ಷರ ಅಗತ್ಯತೆಯನ್ನ ಬಹಿರಂಗವಾಗೇ ತಿಳಿಸಿಕೊಡುವ ಪ್ರಯತ್ನ ಮಾಡಿದರು ಎನ್ನುವ ಮಾತುಗಳು ಕೂಡ ಇದೆ.

ಬಂಡಾಯದ ಮೂಲಕ ಪದವಿ ಉಳಿಸುವ ಯತ್ನ?

ಸದ್ಯ ರಾಜ್ಯಸಭಾ ವಿರೋಧ ಪಕ್ಷದ ನಾಯಕನಾಗಿರುವ ಗುಲಾಂ ನಬಿ ಅಜಾದ್‌ ಅವರ ಅವಧಿ ಮುಂದಿನ ವರ್ಷ ಫೆಬ್ರವರಿ‌ನಲ್ಲಿ ಅಂತ್ಯವಾಗಲಿದೆ. ಸದ್ಯ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಪ್ರಬಲ ನಾಯಕರಿದ್ದು ಅವರಿಗೆ ಆ ಸ್ಥಾನ ಹೋಗುವ ಸಾಧ್ಯತೆ ಇದೆ. ಅಲ್ಲದೆ ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಮೇಲ್ಮನೆಯ ಅಖಾಡಕ್ಕೆ ಎಂಟ್ರಿಕೊಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಹೇಳಲಾಗುವುದು ಇದೇ ಕಾರಣಕ್ಕೆ ಬಂಡಾಯದ ಬಾವುಟ ಹಾರಿಸಲು ನಮಗೂ ಗೊತ್ತಿದೆ ಎನ್ನುವುದನ್ನ ತೋರಿಸಿಕೊಡುವುದಕ್ಕೆ ಹೈಡ್ರಾಮ ಸೃಷ್ಟಿಸಿದರಾ? ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ.

ರಷ್ಯಾದಲ್ಲಿ ಚೀನಾ-ಪಾಕ್ ಜೊತೆ ಯುದ್ಧ ತಾಲೀಮು ಪ್ರದರ್ಶನದಲ್ಲಿ ಭಾಗವಹಿಸಲಿರುವ ಭಾರತ!

ಬಿಜೆಪಿ ಜೊತೆ ಸೇರಿ ಬಂಡಾಯ?

ಈ ರೀತಿಯ ವಿಚಾರ ಅಸಾಧ್ಯವಾದರು ಕೂಡ ಇಂತಹದೊಂದು ಚರ್ಚೆ ಸದ್ಯ ನಡೆಯುತ್ತಿದೆ. ಅದಕ್ಕೆ ಕಾರಣ ಆರ್ಟಿಕಲ್‌ 370 ವೇಳೆ ಜಮ್ಮು-ಕಾಶ್ಮೀರದ ಪ್ರಮುಖ ನಾಯಕರನ್ನ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಂಧನ ಮಾಡಿದರು. ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಮುಖ ನಾಯಕ ಅಜಾದ್‌ ಅವರ ಬಂಧನವಾಗಿರಲಿಲ್ಲ. ಅವರನ್ನ ಯಾವುದೇ ಸೆರೆಮನೆ ವಾಸದಲ್ಲಿ ಇಟ್ಟಿರಲಿಲ್ಲ. ಹೀಗಾಗಿ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡ್ರಾ? ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಅಲ್ಲದೇ ಇತರ ನಾಯಕರಂತೆ ರಾಹುಲ್‌ ಗಾಂಧಿ ಬಗ್ಗೆ ಅಜಾದ್‌ ಕೂಡ ಅಸಮಾಧಾನ ಹೊಂದಿರುವುದರಿಂದ ಬಂಡಾಯದ ಬಾವುಟ ಹಾರಿಸಿರುಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ