ಆ್ಯಪ್ನಗರ

ಹತ್ರಾಸ್‌ಗೆ ‘ಪಿಕ್‌ನಿಕ್’ ಹಮ್ಮಿಕೊಂಡಿದ್ದ ರಾಹುಲ್‌ ಗಾಂಧಿ ಪಂಜಾಬ್ ವಿಷಯದಲ್ಲಿ ಮೌನವೇಕೆ?; ನಿರ್ಮಲಾ ಸೀತಾರಾಮನ್

ಬಿಜೆಪಿ ಆಡಳಿತ ನಡೆಸುವ ರಾಜ್ಯಗಳಲ್ಲಿ ಘಟನೆ ನಡೆದರೆ 'ರಾಜಕೀಯ ಪ್ರವಾಸ' ಕೈಗೊಳ್ಳುವ ಗಾಂಧಿ ಕುಟುಂಬದ ಕುಡಿಗಳಿಗೆ ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ನಡೆಯುವ ಹೇಯ ಕೃತ್ಯಗಳು ಯಾಕೆ ಕೆಟ್ಟದ್ದಾಗಿ ಕಾಣಿಸುತ್ತಿಲ್ಲ? ಈ ಬಗ್ಗೆ ಕಾಂಗ್ರೆಸ್‌ ಸೂಕ್ತ ಉತ್ತರ ನೀಡಬೇಕಿದೆ ಎಂದು ಸಚಿವೆ ಆಗ್ರಹಿಸಿದರು.

Vijaya Karnataka Web 25 Oct 2020, 6:26 am
ಹೊಸದಿಲ್ಲಿ: ಕಾಂಗ್ರೆಸ್‌ ಆಡಳಿತ ಇರುವ ಪಂಜಾಬ್‌ನಲ್ಲಿಆರು ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣ ನಡೆದಿದ್ದರೂ ಇದರ ವಿರುದ್ಧ ಕಾಂಗ್ರೆಸ್‌ ನಾಯಕ­ರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಉಸಿರೆತ್ತದೇ ಮೌನ ವಹಿಸಿರುವುದು ಯಾಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
Vijaya Karnataka Web Nirmala Sitharaman


ಹತ್ರಾಸ್ ಪ್ರಕರಣ: ಪಂಜಾಬ್‌, ರಾಜಸ್ಥಾನದಲ್ಲಿ ಹೀಗಾಗಿದ್ದರೆ ಹೋಗಿ ಹೋರಾಡುತ್ತಿದ್ದೆ- ರಾಹುಲ್‌ ಗಾಂಧಿ

ಅತ್ಯಾಚಾರ, ಕೊಲೆ ರೀತಿಯ ಹೇಯ ಕೃತ್ಯ­ಗಳು ಎಲ್ಲೇ ನಡೆದರೂ ಖಂಡನೀಯ. ಅಂತಹ ಪ್ರಕರಣಗಳ ವಿರುದ್ಧ ಪ್ರಜ್ಞಾವಂತ­ರೆಲ್ಲರೂ ದನಿ ಎತ್ತಬೇಕು. ತಾರತಮ್ಯ ತೋರದೇ ಖಂಡಿಸಬೇಕಾ­ದದ್ದು ಮಾನವೀ­ಯತೆ. ಆದರೆ ಪಂಜಾಬ್‌ ಪ್ರಕರಣದಲ್ಲಿ ಕಾಂಗ್ರೆಸ್‌ ತೋರುತ್ತಿರುವುದು ದ್ವಂದ್ವ ನೀತಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದರು.

ಅಕ್ರಮ ವಿದೇಶಿ ಹೂಡಿಕೆ ಪ್ರಕರಣ, ಅಮರಿಂದರ್‌ ಪುತ್ರನಿಗೆ ಸಮನ್ಸ್‌

ಉತ್ತರ ಪ್ರದೇಶದ ಹತ್ರಾಸ್‌ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿರೋಧದ ಬೊಬ್ಬೆ ಹಾಕಿ, ಪಾದಯಾತ್ರೆಯ 'ಪಿಕ್‌ನಿಕ್‌' ನಡೆಸಿದ್ದ ರಾಹುಲ್‌ ಗಾಂಧಿ ಈಗ ಮೌನ ವಹಿಸಿರುವುದು ಯಾಕೆ? ಇವರಿಗೆ ಪಂಜಾಬ್‌ನಲ್ಲಿ ನಡೆದಿರು­ವುದು ಅಮಾನವೀಯ ಕೃತ್ಯ ಅನಿಸುತ್ತಿಲ್ಲವೇ? ಹೇಳಿಕೆ ನೀಡುವುದು ಬೇಡ, ಕನಿಷ್ಠ ಪಕ್ಷ ಟ್ವೀಟ್‌ ಮಾಡಿಯಾದರೂ ಆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಬಹುದಿತ್ತಲ್ಲವೇ? ಬಿಜೆಪಿ ಆಡಳಿತ ನಡೆಸುವ ರಾಜ್ಯಗಳಲ್ಲಿ ಘಟನೆ ನಡೆದರೆ 'ರಾಜಕೀಯ ಪ್ರವಾಸ' ಕೈಗೊಳ್ಳುವ ಗಾಂಧಿ ಕುಟುಂಬದ ಕುಡಿಗಳಿಗೆ ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ನಡೆಯುವ ಹೇಯ ಕೃತ್ಯಗಳು ಯಾಕೆ ಕೆಟ್ಟದ್ದಾಗಿ ಕಾಣಿಸುತ್ತಿಲ್ಲ? ಈ ಬಗ್ಗೆ ಕಾಂಗ್ರೆಸ್‌ ಸೂಕ್ತ ಉತ್ತರ ನೀಡಬೇಕಿದೆ ಎಂದು ಸಚಿವೆ ಆಗ್ರಹಿಸಿದರು.

ನಿತೀಶ್ ಅವರನ್ನು ಹೊರ ಹಾಕಲು ಮೋದಿ ಬಂದಂತಿದೆ: ಪ್ರಧಾನಿ ಭಾಷಣದ ಮೇಲೆ ಒವೈಸಿಗೇಕೆ ಅನುಮಾನ?
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಿಹಾರದ ವಲಸೆ ಕುಟುಂಬದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿ­ಗಳ ವಿರುದ್ಧ ಇದುವರೆಗೂ ಅಮರಿಂದರ್‌ ಸಿಂಗ್‌ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ