ಆ್ಯಪ್ನಗರ

ಸೋನಿಯಾ ಸಭೆಗೆ ರಾಹುಲ್‌ ಗೈರು, ಕ್ಷುಲ್ಲಕ ಕಾರಣ ನೀಡಿದ ಕಾಂಗ್ರೆಸ್‌!

2017ರಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಕಳೆದ ಮೇನಲ್ಲಿ ಲೋಕಸಭಾ ಚುನಾವಣೆ ನಂತರ ಪಕ್ಷದ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಪಕ್ಷದ ಹೆಚ್ಚು ಕಡಿಮೆ ಎಲ್ಲಾ ಕೆಲಸಗಳಿಂದ ಅವರು ದೂರ ಉಳಿದಿದ್ದಾರೆ.

Vijaya Karnataka Web 13 Sep 2019, 7:16 pm
ಹೊಸದಿಲ್ಲಿ: ಹಲವು ವರ್ಷಗಳ ನಂತರ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ಉನ್ನತ ಮಟ್ಟದ ಸಭೆಗೆ ಮಾಜಿ ಅಧ್ಯಕ್ಷ, ಅವರ ಪುತ್ರ ರಾಹುಲ್‌ ಗಾಂಧಿ ಗೈರು ಹಾಜರಾಗಿದ್ದರು. ಇದಕ್ಕೆ ಕೇಳಿ ಬರುತ್ತಿರುವ ಕಾರಣ, ಅವರಿಗೆ ಆಹ್ವಾನ ಇರಲಿಲ್ಲವಂತೆ!
Vijaya Karnataka Web Congress leader Rahul Gandhi


2017ರಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಕಳೆದ ಮೇನಲ್ಲಿ ಲೋಕಸಭಾ ಚುನಾವಣೆ ನಂತರ ಪಕ್ಷದ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಪಕ್ಷದ ಹೆಚ್ಚು ಕಡಿಮೆ ಎಲ್ಲಾ ಕೆಲಸಗಳಿಂದ ಅವರು ದೂರ ಉಳಿದಿದ್ದಾರೆ. ಎಲ್ಲಿಯವರೆಗೆ ಎಂದರೆ ಗುರುವಾರ ಸೋನಿಯಾ ಕರೆದಿದ್ದ ಸಭೆಯಲ್ಲಿ ಅವರ ನೇಮ್‌ ಪ್ಲೇಟ್‌ ಕೂಡ ಇರಲಿಲ್ಲ. ಕಳೆದ 12 ವರ್ಷಗಳಲ್ಲಿ ಕಂಡು ಬಂದ ಮೊದಲ ಬೆಳವಣಿಗೆ ಇದು.

ವಿಕಾಸವಿಲ್ಲದ 100 ದಿನಗಳ ಮೋದಿ ಸರಕಾರಕ್ಕೆ ಅಭಿನಂದನೆಗಳು: ಕಾಲೆಳೆದ ರಾಹುಲ್‌

ಸೋನಿಯಾ ಕರೆದಿದ್ದ ಈ ಸಭೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಶಾಸಕಾಂಗ ಸಭೆಯ ಮುಖ್ಯಸ್ಥರನ್ನು ಆಹ್ವಾನಿಸಲಾಗಿತ್ತು. ಈ ಯಾವುದೇ ಹುದ್ದೆಗಳ ಅಡಿಯಲ್ಲಿ ಬರದ ಮನಮೋಹನ್‌ ಸಿಂಗ್‌ರನ್ನು ಆರ್ಥಿಕ ವಿಚಾರಗಳ ಚರ್ಚೆ ಹಿನ್ನೆಲೆಯಲ್ಲಿ ಸಭೆಗೆ ಆಹ್ವಾನಿಸಲಾಗಿತ್ತು. ಇನ್ನು ಹಿರಿಯ ಕಾಂಗ್ರೆಸ್ ನಾಯಕರಾಗಿರುವುದು ಎ.ಕೆ. ಆಂಟನಿ ಈ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಿದ್ದೂ ರಾಹುಲ್‌ ಗಾಂಧಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಸಭೆಕೆ ಕರೆದಿದ್ದ ಹುದ್ದೆಗಳಲ್ಲಿ ಯಾವುದನ್ನೂ ಹೊಂದಿಲ್ಲದ ಕಾರಣ ರಾಹುಲ್‌ ಗಾಂಧಿ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂಬ ಕ್ಷುಲ್ಲಕ ಕಾರಣವನ್ನು ಕಾಂಗ್ರೆಸ್‌ ನೀಡಿದೆ!

“ಸಭೆಗೆ ಕರೆದಿರುವ ನಾಯಕರ ವ್ಯಾಪ್ತಿಗೆ ಅವರು ಬರುವುದಿಲ್ಲವಾದ್ದರಿಂದ ಅವರನ್ನು ಸಭೆಗೆ ಕರೆದಿರಲಿಲ್ಲ,” ಎಂಬುದಾಗಿ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದೆ. ಮುಖ್ಯವಾಗಿ ಸಭೆಯಲ್ಲಿ ಮಹಾತ್ಮಾ ಗಾಂಧಿ 150ನೇ ಜನ್ಮ ದಿನಾಚರಣೆಯ ಸಿದ್ಧತೆ, ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಆರ್‌ಎಸ್‌ಎಸ್ 'ಪ್ರಚಾರಕ್'ಗೆ ಸಡ್ಡು ಹೊಡೆಯಲಿದ್ದಾರೆ ಕಾಂಗ್ರೆಸ್ ‘ಪ್ರೇರಕ್’!

ಸದ್ಯ ತಾಂತ್ರಿಕವಾಗಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯತ್ವ ಬಿಟ್ಟರೆ ರಾಹುಲ್‌ ಗಾಂಧಿಗೆ ಬೇರೆ ಯಾವುದೇ ಹುದ್ದೆ ಇಲ್ಲ. ಇನ್ನು ಈ ಸಮಿತಿಗೆ ಸದಸ್ಯರ ನೇಮಕ ಕೂಡ ಇನ್ನಷ್ಟೇ ಆಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ