ಆ್ಯಪ್ನಗರ

ಕುಡುಕ ಪತಿಯನ್ನು ಸಜೀವ ದಹಿಸಿ, ಶರಣಾದ ಪತ್ನಿ

ಮದುರಂಟಕಂ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿ ಮಹಿಳೆಯನ್ನು 45 ವರ್ಷದ ಮಲರ್ ಎಂದು ಗುರುತಿಸಲಾಗಿದೆ. ಆಕೆ ಅನೈಕುಂದರಂ ಗ್ರಾಮದ ನಿವಾಸಿಯಾಗಿದ್ದಾಳೆ.

TIMESOFINDIA.COM 2 Jun 2019, 4:03 pm
ಚೆನ್ನೈ: ಕುಡುಕ ಪತಿಯ ಕಾಟದಿಂದ ಬೇಸತ್ತು ಹೋಗಿದ್ದ ಪತ್ನಿಯೋರ್ವಳು ಬೆಂಕಿ ಹಚ್ಚಿ ಆತನನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
Vijaya Karnataka Web Fire- Kill


ಕೃತ್ಯದ ಬಳಿಕ ಆಕೆ ಪೊಲೀಸರಿಗೆ ಶರಣಾಗಿದ್ದಾಳೆ.

ಮದುರಂಟಕಂ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿ ಮಹಿಳೆಯನ್ನು 45 ವರ್ಷದ ಮಲರ್ ಎಂದು ಗುರುತಿಸಲಾಗಿದೆ. ಆಕೆ ಅನೈಕುಂದರಂ ಗ್ರಾಮದ ನಿವಾಸಿಯಾಗಿದ್ದಾಳೆ.

ಮದುವೆಯಾದಾಗಿನಿಂದ ಪತಿ ಕನ್ನಿಯಪ್ಪನ ಹಿಂಸೆ ಸಹಿಸಿಕೊಳ್ಳುತ್ತಲೇ ಬಂದಿದ್ದೆ. ಶುಕ್ರವಾರ ದಿನ ನನಗೆ ಮನ ಬಂದಂತೆ ಥಳಿಸಿ, ಮನೆ ಮುಂದಿದ್ದ ಹೊಲದಲ್ಲಿ ಮಲಗಿದ್ದ. ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ. ನಿದ್ದೆಯಿಂದ ಎಚ್ಚೆತ್ತ ಆತ ಸಹಾಯಕ್ಕಾಗಿ ಕೂಗಿಕೊಂಡ. ಆದರೆ ನಾನು ಸಹಾಯ ಮಾಡಲಿಲ್ಲ. ಆತ ಸಾವನ್ನಪ್ಪಿದ ಮೇಲೆ ಪೊಲೀಸ್ ಠಾಣೆಗೆ ಬಂದು ಶರಣಾದೆ ಎಂದಾಕೆ ಹೇಳಿದ್ದಾಳೆ.

ಆಕೆ ತನ್ನ ಕೃತ್ಯಕ್ಕಾಗಿ ಪಶ್ಚಾತಾಪವನ್ನು ವ್ಯಕ್ತ ಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ