ಆ್ಯಪ್ನಗರ

ಪತ್ನಿಯಿಂದಲೇ ಹತ್ಯೆಯಾದನಾ ರೋಹಿತ್ ತಿವಾರಿ ?

ಎರಡು ಉದ್ದೇಶಗಳಿಗಾಗಿ ಈ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೊದಲನೆಯದಾಗಿ ಆಸ್ತಿ, ಎರಡನೆಯದಾಗಿ ಸಂಬಂಧಿ ಮಹಿಳೆಯ ಜತೆ ರೋಹಿತ್ ಸ್ನೇಹ.

TIMESOFINDIA.COM 22 Apr 2019, 5:56 pm
ಹೊಸದಿಲ್ಲಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ , ಆಂಧ್ರದ ಮಾಜಿ ರಾಜ್ಯಪಾಲ ಎನ್‌.ಡಿ.ತಿವಾರಿ ಪುತ್ರ , ರೋಹಿತ್‌ ಶೇಖರ್‌ ಕೊಲೆ ಪ್ರಕರಣದಲ್ಲಿ ಪೊಲೀಸರ ಅನುಮಾನ ರೋಹಿತ್ ಪತ್ನಿ ಅಪೂರ್ವಾ ಅವರ ಮೇಲೆಯೇ ಹೆಚ್ಚಿನ ಅನುಮಾನಗಳಿರುವುದಾಗಿ ಪೊಲೀಸರು ಹೇಳಿದ್ದಾರೆ.
Vijaya Karnataka Web 1555421891-rohit_0


ಎರಡು ಉದ್ದೇಶಗಳಿಗಾಗಿ ಈ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೊದಲನೆಯದಾಗಿ ಆಸ್ತಿ, ಎರಡನೆಯದಾಗಿ ಸಂಬಂಧಿ ಮಹಿಳೆಯ ಜತೆ ರೋಹಿತ್ ಸ್ನೇಹ.

ರೋಹಿತ್‌ ಪತ್ನಿ ಅಪೂರ್ವಾ ಹಾಗೂ ಅವರ ಪೋಷಕರಿಗೆ ರೋಹಿತ್‌ ಆಸ್ತಿಯ ಮೇಲೆ ಕಣ್ಣಿತ್ತು. ಈ ಕಾರಣಕ್ಕಾಗಿಯೇ ಹೇಯ ಕೃತ್ಯ ಎಸಗಿದ್ದಾರೆ ಎಂದು ರೋಹಿತ್‌ ತಾಯಿ ಉಜ್ವಾಲಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನ ಹಿಂದೆಯೇ ಹೆಚ್ಚುವರಿ ವಿಚಾರಣೆಗಾಗಿ ಭಾನುವಾರ ಅಪೂರ್ವಾ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ರೋಹಿತ್ ಮತ್ತು ಸಿದ್ದಾರ್ಥ್ ( ರೋಹಿತ್ ಹಿರಿಯ ಸಹೋದರ) ತಮ್ಮ ಸಂಬಂಧಿಕ ರಾಜೀವ್ ಮಗ, ಕಾರ್ತಿಕ್ ಎಂಬಾತನಿಗೆ ಆಸ್ತಿ ನೀಡುವ ನಿರ್ಧಾರ ಕೈಗೊಂಡಿದ್ದಕ್ಕೆ ಅಪೂರ್ಣ ವಿರೋಧ ವ್ಯಕ್ತ ಪಡಿಸಿದ್ದಳು. ರಾಜೀವ್ ಪತ್ನಿ ಜತೆ ರೋಹಿತ್ ಸಂಬಂಧವಿದೆ ಎಂದು ಆಕೆ ಮದುವೆಯಾದ ಮರುದಿನವೇ ಆರೋಪಿಸಿದ್ದಳು. ಇದೇ ಕಾರಣಕ್ಕೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಮೃತ ರೋಹಿತ್ ತಾಯಿ ಉಜ್ವಲಾ ದೂರಿದ್ದಾರೆ.

ಅವರ ಪತ್ನಿ ಮತ್ತು ಇಬ್ಬರು ಮನೆಗೆಲಸದ ಸಹಾಯಕರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ಬಾರಿ ಅವರನ್ನು ವಿಚಾರಿಸಲಾಗಿದೆ. ರೋಹಿತ್ ಸಾವಿನ ರಾತ್ರಿ ಅವರ ಕೋಣೆಗೆ ಹೋಗಿದ್ದಾಗಿ ಅವರು ಉತ್ತರಿಸಿದ್ದಾರೆ. ಆದರೆ ಹೋಗಿದ್ದು ಯಾಕೆ ಎನ್ನುವುದರ ಬಗ್ಗೆ ಗೊಂದಲಕಾರಿ ಉತ್ತರ ನೀಡಿದ್ದಾರೆ.

ರೋಹಿತ್ ಸಾವಿನ ಸಮಯದಲ್ಲಿ ಮನೆಯಲ್ಲಿದ್ದ ಇತರರ ಪಾತ್ರವನ್ನು ಸಹ ಅಲ್ಲಗೆಳೆಯಲಾಗದು. ಈ ದಿಶೆಯಲ್ಲಿ ಸಹ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರಂಭದಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣದ ದಾಖಲಿಸಲಾಗಿತ್ತು. ವೈದ್ಯಕೀಯ ವರದಿ ಬಳಿಕ ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಖಾತ್ರಿಯಾಗಿ ಪ್ರಕರಣ ಬದಲಾಯಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ