ಆ್ಯಪ್ನಗರ

ರೋಹಿತ್ ತಿವಾರಿ ಕೊಲೆ ಪ್ರಕರಣ: ಪತ್ನಿ ಬಂಧನ

ರೋಹಿತ್ ಸಾವಿಗೆ ಸಂಬಂಧಿಸಿದಂತೆ ಅಪೂರ್ವ ಶುಕ್ಲಾ ತಿವಾರಿ ಅವರನ್ನು ಸತತ ಮೂರು ದಿನ ವಿಚಾರಣೆ ನಡೆಸಿದ ಪೊಲೀಸರು , ಮತ್ತೀಗ ವಶಕ್ಕೆ ಪಡೆದಿದ್ದಾರೆ.ಅಪೂರ್ವ ಅವರ ವಿರುದ್ಧ ಮಹತ್ವದ ಸಾಕ್ಷ್ಯ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Navbharat Times 24 Apr 2019, 11:44 am
ಹೊಸದಿಲ್ಲಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎನ್. ಡಿ ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಪತ್ನಿಯನ್ನು ಬಂಧಿಸಿದ್ದಾರೆ.
Vijaya Karnataka Web Tiwari


ರೋಹಿತ್ ಸಾವಿಗೆ ಸಂಬಂಧಿಸಿದಂತೆ ಅಪೂರ್ವ ಶುಕ್ಲಾ ತಿವಾರಿ ಅವರನ್ನು ಸತತ ಮೂರು ದಿನ ವಿಚಾರಣೆ ನಡೆಸಿದ ಪೊಲೀಸರು , ಮತ್ತೀಗ ವಶಕ್ಕೆ ಪಡೆದಿದ್ದಾರೆ. ಅಪೂರ್ವ ಅವರ ವಿರುದ್ಧ ಮಹತ್ವದ ಸಾಕ್ಷ್ಯ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 16ರ ಮಧ್ಯಾಹ್ನ ರೋಹಿತ್ ತಮ್ಮ ಕೋಣೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಹತ್ಯೆಯ ದಿನ ಪತಿ- ಪತ್ನಿ ನಡುವೆ ಜಗಳ ನಡೆದಿತ್ತು. ತಲೆತಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಸಾಕ್ಷ್ಯ ನಾಶ ಮಾಡಲು ಅಪೂರ್ವ ಪತಿಯ ಮೊಬೈಲ್‌ನ್ನು ಫಾರ್ಮೆಟ್ ಕೂಡ ಮಾಡಿರುವುದು ಬೆಳಕಿಗೆ ಬಂದಿದೆ.


ಶನಿವಾರ ಪೊಲೀಸರು ರೋಹಿತ್ ಪತ್ನಿಯನ್ನು ಬರೋಬ್ಬರಿ 8 ಗಂಟೆ ಕಾಲ ವಿಚಾರಣೆ ನಡೆಸಿದ್ದರು. ಆಕೆಯ ಹೇಳಿಕೆಯಲ್ಲಿ ತಾಳಮೇಳವಿರಲಿಲ್ಲ. ಗೊಂದಲಕಾರಿಯಾಗಿತ್ತು. ಆಕೆಗೆ ಸಹಕಾರ ನೀಡಿರುವ ಇತರ ಆರೋಪಿಗಳನ್ನು ಸಹ ಸದ್ಯದಲ್ಲೇ ಬಂಧಿಸುವ ಸಾಧ್ಯತೆಗಳಿವೆ.

ಅಪೂರ್ವ ಹೊರತು ಪಡಿಸಿ ಮನೆಯಲ್ಲಿದ್ದ ಇಬ್ಬರು ಕೆಲಸಗಾರರ ಮೇಲೆ ಕೂಡ ಪೊಲೀಸರಿಗೆ ಶಂಕೆ ಇದೆ. ದೃಶ್ಯ ಮರು ಸೃಷ್ಟಿ ಮಾಡಿದ ಪೊಲೀಸರಿಗೆ ಹತ್ಯೆಗೂ ಮೊದಲು ಹಾಲ್‌ನಲ್ಲಿದ್ದ ಎರಡು ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿದ್ದವು. ಬಳಿಕ ಕೆಟ್ಟಿವೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿ ಅಪೂರ್ವ ಮೊದಲ ಮಹಡಿ ಹತ್ತುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಮನೆಗೆಲಸದವರ ಹೇಳಿಕೆ ಪ್ರಕಾರ ರಾತ್ರಿ 2.30ರವರೆಗೆ ಅಪೂರ್ವ ಪ್ರೈಮ್ ಸೀರಿಯಲ್ ನೋಡುತ್ತಿದ್ದರು.

ಸಹಜ ಸಾವು ಎಂದಿದ್ದ ತಾಯಿ

ಮೊದಲು ತನ್ನ ಮಗನ ಸಾವು ಸಹಜ ಎಂದು ತಾಯಿ ಉಜ್ವಲಾ ಹೇಳಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಕೊಲೆ ಎಂದು ಸಾಬೀತಾಗಿತ್ತು. ರೋಹಿತ್‌ ಪತ್ನಿ ಅಪೂರ್ವಾ ಹಾಗೂ ಅವರ ಪೋಷಕರಿಗೆ ರೋಹಿತ್‌ ಆಸ್ತಿಯ ಮೇಲೆ ಕಣ್ಣಿತ್ತು. ಈ ಕಾರಣಕ್ಕಾಗಿಯೇ ಹೇಯ ಕೃತ್ಯ ಎಸಗಿದ್ದಾರೆ ಎಂದು ರೋಹಿತ್‌ ತಾಯಿ ಉಜ್ವಲಾ ಆಕ್ರೋಶ ವ್ಯಕ್ತಪಡಿಸಿದ್ದರು.

ಅದರ ಜತೆಗೆ ರೋಹಿತ್ ಮತ್ತು ಅಪೂರ್ವ ನಡುವೆ ಮದುವೆಯಾದ ದಿನದಿಂದಲೇ ಸಂಬಂಧ ಬಿಗಡಾಯಿಸಿತ್ತು. ಸಂಬಂಧಿ ಮಹಿಳೆಯೊಬ್ಬರ ಜತೆ ರೋಹಿತ್‌ಗೆ ಸಂಬಂಧವಿದೆ ಎಂದು ಅಪೂರ್ವ ಶಂಕೆ ಹೊಂದಿದ್ದಳು ಎಂದವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ