ಆ್ಯಪ್ನಗರ

ವೇಶ್ಯಾವಾಟಿಕೆ ಮಾಡಲೊಪ್ಪದ ಪತ್ನಿಯ ಕೇಶಮುಂಡನ

ಹಣಕ್ಕಾಗಿ ಪರಪುರುಷನ ಜತೆ ಮಲಗೆಂದು ಪತ್ನಿಯನ್ನು ಪೀಡಿಸಿದ ಧೂರ್ತ ಪತಿ, ನಿರಾಕರಿಸಿದ್ದಕ್ಕೆ ಪ್ರತಿಯಾಗಿ ಆಕೆಯ ತಲೆ ಕೂದಲನ್ನು ಬೋಳಿಸಿದ ಅಮಾನವೀಯ ಘಟನೆ ನಿಗೋಹಿ ಬ್ಲ್ಯಾಕ್‌ಗೆ ಸೇರಿದ ಗ್ರಾಮವೊಂದರಲ್ಲಿ ಸೋಮವಾರ ನಡೆದಿದೆ.

Vijaya Karnataka 4 Jul 2018, 3:08 pm
ಶಹಜಾನ್ಪುರ: ಹಣಕ್ಕಾಗಿ ಪರಪುರುಷನ ಜತೆ ಮಲಗೆಂದು ಪತ್ನಿಯನ್ನು ಪೀಡಿಸಿದ ಧೂರ್ತ ಪತಿ, ನಿರಾಕರಿಸಿದ್ದಕ್ಕೆ ಪ್ರತಿಯಾಗಿ ಆಕೆಯ ತಲೆ ಕೂದಲನ್ನು ಬೋಳಿಸಿದ ಅಮಾನವೀಯ ಘಟನೆ ನಿಗೋಹಿ ಬ್ಲ್ಯಾಕ್‌ಗೆ ಸೇರಿದ ಗ್ರಾಮವೊಂದರಲ್ಲಿ ಸೋಮವಾರ ನಡೆದಿದೆ.
Vijaya Karnataka Web 62467777


ಸಂತ್ರಸ್ತ ಮಹಿಳೆ ಖುಷ್ಬು ದೇವಿ ಸೋಮವಾರ ದಿನ ಠಾಣೆಗೆ ಬಂದು ತನ್ನ ಪತಿ ಮತ್ತು, ಬಾವನ ವಿರುದ್ಧ ದೂರು ದಾಖಲಿಸಿದ್ದಾಳೆ. ಊಟದಲ್ಲಿ ಮಾದಕ ದ್ರವ್ಯ ಬೆರೆಸಿ ಪ್ರಜ್ಞೆ ಕಳೆದುಕೊಂಡ ಬಳಿಕ ನನ್ನ ತಲೆಯನ್ನು ಬೋಳಿಸಲಾಗಿದೆ ಎಂದಾಕೆ ಆರೋಪಿಸಿದ್ದಾಳೆ.

ಭಾನುವಾರ ಸಂಜೆ ಸಹೋದರಿ ಮನೆಯಿಂದ ಹಿಂತಿರುಗಿದ ನನ್ನ ಬಳಿ ಪತಿ ದೇಹ ಮಾರಿ ಹಣ ತೆಗೆದುಕೊಂಡು ಬಾ ಎಂದಿದ್ದಾನೆ. ಆದರೆ ನಾನದಕ್ಕೆ ಒಪ್ಪಲಿಲ್ಲ. ಸ್ವಲ್ಪ ಸಮಯದ ನಂತರ ಊಟ ಮಾಡಿದ್ದಷ್ಟೇ ನೆನಪಿದೆ. ಮರುದಿನ ಬೆಳಿಗ್ಗೆದ್ದು ನೋಡಿದಾಗ ನನ್ನ ತಲೆಯನ್ನು ಬೋಳಿಸಲಾಗಿತ್ತು. ಊಟ ಮಾಡುತ್ತಿದ್ದ ನಾನು ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಮತ್ತು ಬಳಿಕ ಪತಿ ಮತ್ತವನ ಸಹೋದರ ಸೇರಿ ನನ್ನ ಕೂದಲನ್ನು ಕತ್ತರಿಸಿದ್ದಾಗಿ ಮಕ್ಕಳು ಹೇಳಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿದ ಆಧಾರದ ಮೇಲೆ ಅಶೋಕ್ ಕುಮಾರ್ (32) ಮತ್ತವನ ಸಹೋದರ ಮನೋಜ್ ಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ.

9 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ 2 ಮಕ್ಕಳಿದ್ದಾರೆ. ಆರೋಪಿ ಅಕ್ರಮ ಮದ್ಯ ತಯಾರಕೆ ವ್ಯವಹಾರ ಮಾಡುತ್ತಿದ್ದು, ಈ ಹಿಂದೆ ಕೂಡ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ