ಆ್ಯಪ್ನಗರ

ಹುತಾತ್ಮ ಪತಿಗೆ ಶ್ರದ್ಧಾಂಜಲಿ: ಸೇನೆ ಸೇರ ಬಯಸುವ ಪತ್ನಿ

ಸೇನೆಗೆ ಸೇರಿ ಸೇವೆ ಸಲ್ಲಿಸಬೇಕೆಂದು ಬಯಸುತ್ತಿದ್ದಾರೆ ಹುತಾತ್ಮ ಪತ್ನಿ ನೀತಾ.

ಏಜೆನ್ಸೀಸ್ 23 Jun 2016, 5:09 pm
ಚಂಡೀಗಢ್: ಇತ್ತೀಚೆಗೆ ನುಸುಳುಕೋರರನ್ನು ಸದೆ ಬಡಿಯುವಾಗ ಮೇ.ಅಮಿತ್ ದೇಸ್ವಾಲ್ ಹುತಾತ್ಮರಾಗಿದ್ದಾರೆ. ಪತಿ ಅಗಲಿಕಿಯಿಂದ ಪತ್ನಿ ನಿತಾ ದೇಸ್ವಾಲ್‌ ಅತೀವ ದುಃಖಿತರಾಗಿದ್ದಾರೆ. ಈ ನೋವಿನಲ್ಲಿಯೂ ಈಕೆಗೆ ಭಾರತೀಯ ಸೈನ್ಯ ಸೇರಿ, ಪತಿಗೆ ಶ್ರದ್ಧಾಂಜಲಿ ಸಲ್ಲಿಸುವ ಆಶಯವಿದೆ.
Vijaya Karnataka Web wifes tribute to martyred major a life in the army
ಹುತಾತ್ಮ ಪತಿಗೆ ಶ್ರದ್ಧಾಂಜಲಿ: ಸೇನೆ ಸೇರ ಬಯಸುವ ಪತ್ನಿ


ಭಾರತೀಯ ಸೇನೆ ಸೇರಲು ತಕ್ಕ ತಯಾರಿಯನ್ನೂ ಮಾಡಿ ಕೊಳ್ಳುತ್ತಿದ್ದಾರೆ ನೀತಾ. ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಸೇರಲು ಸೇನಾ ಸೇವಾ ಆಯ್ಕೆ ಮಂಡಳಿ (ಎಸ್ಎಸ್ಬಿ) ನಡೆಸುವ ಸಂದರ್ಶನಕ್ಕೆ ತಯಾರಾಗುತ್ತಿದ್ದಾರೆ.

ಹರಿಯಾಣ ಸರಕಾರ ನೀತಾಗೆ ಸೂಕ್ತ ಉದ್ಯೋಗ ನೀಡುವ ಭರವಸೆ ನೀಡಿದೆ. 'ಅಮಿತ್ ಮೃತರಾದ ನಂತರ ಜೀವನ ಹೇಗಪ್ಪಾ ಎಂದೆನಿಸಿತ್ತು. ನನ್ನ ಹಾಗೂ ನನ್ನ ಮಗನ ರಕ್ಷಣೆ ಹೊಣೆಯನ್ನು ಸೇನೆಯೇ ಹೊತ್ತಿದ್ದು, ಅಲ್ಲಿಯೇ ನಾನೂ ಸೇವೆ ಸಲ್ಲಿಸುವೆ. ಇದು ನನ್ನ ಪತಿಗೆ ಸಲ್ಲಿಸುವ ಶ್ರದ್ಧಾಂಜಲಿ,' ಎನ್ನುತ್ತಾರೆ ನೀತಾ.

ಮಣಿಪುರದಲ್ಲಿ ಹಿಫಾಜತ್-2 ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದ ಅಮಿತ್, ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುವಾಗ ಕಳೆದ ಏಪ್ರಿಲ್ 14ರಂದು ಹುತಾತ್ಮರಾದರು.

ನೀತಾ ಎಸ್‌ಎಸ್‌ಬಿ ಸಂದರ್ಶನವನ್ನು ಇದೇ ವರ್ಷ ಎದುರಿಸುತ್ತಾರಾ ಎಂಬ ಬಗ್ಗೆ ಸೇನೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಮೇ.ಅಮಿತ್ ತಂದೆ ಸುಬೇದಾರ್ ರಿಷಿ ರಾಮ್ (ನಿವೃತ್ತ), 'ನೀತಾ ಪ್ರಕರಣವನ್ನು ರಕ್ಷಣಾ ಪ್ರಾಧಿಕಾರಗಳ ಗಮನಕ್ಕೆ ತರುತ್ತೇವೆ. ಇದೇ ನವೆಂಬರ್‌ನಲ್ಲಿ ಅವಳನ್ನು ಸಂದರ್ಶನಕ್ಕೆ ಕರೆಯಬಹುದು,' ಎಂದು ಹೇಳಿದ್ದು, 'ಸೊಸೆಯ ನಿರ್ಧಾರಕ್ಕೆ ಸಂಪೂರ್ಣ ಬೆಂಬಲಿಸುವೆ,' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ