ಆ್ಯಪ್ನಗರ

ಆನೆ ದಾಳಿಗೆ ಐವರು ಬಲಿ

ಕಾಡಿನ ಬದಿಯಲ್ಲಿರುವ ಸಂಧಾ ಗ್ರಾಮಕ್ಕೆ ಗುರುವಾರ ರಾತ್ರಿ ನುಗ್ಗಿದ ಆನೆ, ಮನೆಯ ಮುಂದೆ ವರಂಡಾದಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರನ್ನು ತುಳಿದು ಕೊಂದಿದೆ.

Vijaya Karnataka 20 Apr 2019, 5:00 am
ಭುವನೇಶ್ವರ: ಒಡಿಶಾದ ಅಂಗುಲ್‌ ಜಿಲ್ಲೆಯಲ್ಲಿ ಕಾಡಾನೆಯೊಂದು ಹಲವು ಗ್ರಾಮಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದು, ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಐವರನ್ನು ಬಲಿ ಪಡೆದಿದೆ.
Vijaya Karnataka Web wild elephant tramples 5 people to death in odisha
ಆನೆ ದಾಳಿಗೆ ಐವರು ಬಲಿ


ಕಾಡಿನ ಬದಿಯಲ್ಲಿರುವ ಸಂಧಾ ಗ್ರಾಮಕ್ಕೆ ಗುರುವಾರ ರಾತ್ರಿ ನುಗ್ಗಿದ ಆನೆ, ಮನೆಯ ಮುಂದೆ ವರಂಡಾದಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರನ್ನು ತುಳಿದು ಕೊಂದಿದೆ.

ಮನೆಯ ಯಜಮಾನ, ಎರಡು ವರ್ಷದ ಮಗಳು ಹಾಗೂ ಪತ್ನಿಯನ್ನು ತುಳಿದುಹಾಕಿದೆ. ಬಳಿಕ ಅದೇ ಗ್ರಾಮದಲ್ಲಿ ಮನೆಯ ಮುಂದೆ ಮಲಗಿದ್ದ ಮತ್ತೊಬ್ಬ ಮಹಿಳೆಯನ್ನೂ ಆನೆ ಇದೇ ರೀತಿ ತುಳಿದು ಬಲಿ ಪಡೆದಿದೆ.

ಅದೇ ದಿನ ರಾತ್ರಿ ಪಕ್ಕದ ಸಂತಪಾದಾ ಎಂಬ ಗ್ರಾಮಕ್ಕೆ ನುಗ್ಗಿರುವ ಸಲಗ, 70 ವರ್ಷದ ವೃದ್ಧರೊಬ್ಬರನ್ನು ಕೊಂದು ಹಾಕಿದೆ.

ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಸೂಕ್ತ ಪರಿಹಾರ ಕೋರಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪರಿಹಾರದ ಒದಗಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಪುಂಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ