ಆ್ಯಪ್ನಗರ

ಎನ್‌ಡಿಎಯಲ್ಲಿ ಮತ್ತಷ್ಟು ಬಿರುಕು? ವಾರಾಣಸಿ ಸೇರಿ ಯುಪಿಯ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿದ ಅಪ್ನಾದಳ

ಲೋಕಸಭೆ ಚುನಾವಣೆ ಹತ್ತಿರ ಬಂದಂತೆ ಎನ್‌ಡಿಎ ಮೈತ್ರಿಕೂಟ ಪಕ್ಷಗಳು ಒಂದೊಂದಾಗಿ ಹೊರ ಹೋಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಬಿಹಾರದಲ್ಲಿ ಉಪೇಂದ್ರ ಕುಶ್ವಾಹ ಮೈತ್ರಿಕೂಟ ತೊರೆದ ಬಳಿಕ ಈಗ ಯುಪಿಯಲ್ಲಿ ಅಪ್ನಾ ದಳ ( ಎಸ್‌ ) ಪಕ್ಷ ಸಹ ಬಿಜೆಪಿಯಿಂದ ದನೇ ದಿನೇ ದೂರವಾಗುತ್ತಿದೆ. ಈಗ ಪ್ರಧಾನಿ ಮೋದಿಯ ಸ್ವಕ್ಷೇತ್ರವಾಗಿರುವ ವಾರಾಣಸಿ ಮೇಲೆ ಅಪ್ನಾ ದಳ ಕಣ್ಣಿಟ್ಟಿರುವುದು ಅಚ್ಚರಿ ಮೂಡಿಸಿದೆ.

TIMESOFINDIA.COM 29 Dec 2018, 6:02 pm

ಹೈಲೈಟ್ಸ್‌:

  • ಉತ್ತರ ಪ್ರದೇಶದ 10 ಕ್ಷೇತ್ರಗಳಲ್ಲಿ ಸ್ಪರ್ಧೆ: ಅಪ್ನಾ ದಳ ( ಎಸ್‌ )
  • ಪ್ರಧಾನಿ ಮೋದಿ ಕ್ಷೇತ್ರವಾದ ವಾರಾಣಸಿ ಮೇಲೂ ಅಪ್ನಾ ದಳ ಕಣ್ಣು
  • ಎನ್‌ಡಿಎ ಸರಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ: ಅಪ್ನಾ ದಳ ಮುಖ್ಯಸ್ಥ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
[This story originally published in Times Of India on Dec 29, 2018]
ಲಖನೌ
: ಬಿಜೆಪಿ ಹಾಗೂ ಉತ್ತರ ಪ್ರದೇಶದ ಮೈತ್ರಿಕೂಟ ಪಕ್ಷವಾದ ಅಪ್ನಾ ದಳ ನಡುವೆ ಇತ್ತೀಚೆಗೆ ಆರಂಭವಾಗಿದ್ದ ಬಿರುಕು ಮತ್ತಷ್ಟು ಹೆಚ್ಚಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸ್ವಕ್ಷೇತ್ರವಾದ ವಾರಾಣಸಿ ಸೇರಿ ಉತ್ತರ ಪ್ರದೇಶದ 10 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಾಗುತ್ತಿರುವುದಾಗಿ ಅಪ್ನಾ ದಳ ತಿಳಿಸಿದೆ. ಮೋದಿ ಶನಿವಾರ ವಾರಾಣಸಿ ಹಾಗೂ ಘಾಜಿಪುರಕ್ಕೆ ಭೇಟಿ ನೀಡುವ ಹಿಂದಿನ ದಿನವೇ ಅಪ್ನಾ ದಳ ಈ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಇಂದು ಪ್ರಧಾನಿ ಜತೆಗೆ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ ಎಂದೂ ಅವರು ತಿಳಿಸಿದ್ದು, ಮೋದಿಯ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ.
''ನಮ್ಮ ಪಕ್ಷ 2014ಕ್ಕಿಂತ ಈಗ ಸಾಕಷ್ಟು ಬೆಳವಣಿಗೆಯಾಗಿದೆ. ಹೀಗಾಗಿ, ಸಹಜವಾಗಿಯೇ ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸಲು ಬಯಸಿದ್ದೇವೆ. ಈಗಾಗಲೇ ವಾರಾಣಸಿ ಸೇರಿ ಸುಮಾರು 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿ ಆರಂಭಿಸಿದ್ದೇವೆ'' ಎಂದು ಅಪ್ನಾ ದಳ ( ಸೋನೇಲಾಲ್‌ ) ಪಕ್ಷದ ಮುಖ್ಯಸ್ಥ ಆಶಿಶ್‌ ಸಿಂಗ್ ಪಟೇಲ್‌ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.


2014ರಲ್ಲಿ ನಮ್ಮ ಪಕ್ಷ ಬಿಜೆಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಎರಡು ಸೀಟುಗಳಲ್ಲಿ ಸ್ಪರ್ಧೆ ಮಾಡಿದ್ದೆವು. ಈ ಬಾರಿ ನಾವು ಉಪ ಚುನಾವಣೆಯಲ್ಲಿ ಬಿಜೆಪಿ ಸಮಾಜವಾದಿ ಪಕ್ಷದ ಎದುರು ಸೋಲನುಭವಿಸಿರುವ ಫುಲ್ಪುರ ಕ್ಷೇತ್ರದಲ್ಲಿ ಸಹ ಸ್ಪರ್ಧೆ ಮಾಡಲು ಬಯಸಿದ್ದೇವೆ ಎಂದು ಅಪ್ನಾ ದಳ ತಿಳಿಸಿದೆ.

ಜನವರಿ 11 - 12 ರಂದು ಬಿಜೆಪಿ ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಸಲಿದ್ದು, ಲೋಕಸಭೆ ಚುನಾವಣೆಗಾಗಿ ತನ್ನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದೆ. ಇದೇ ರೀತಿ, ಜನವರಿ 7 ರಂದು ರಾಜ್ಯ ಮಟ್ಟದ ಸಭೆ ನಡೆಸಲು ಅಪ್ನಾ ದಳ ನಿರ್ಧರಿಸಿದೆ. ಅಲ್ಲದೆ,'' ಸದ್ಯಕ್ಕೆ ಎನ್‌ಡಿಎ ಸರಕಾರ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ'' ಎಂದು ಅಪ್ನಾ ದಳ ( ಎಸ್‌ ) ಮುಖ್ಯಸ್ಥ ಆಶಿಶ್‌ ಪಟೇಲ್‌ ಹೇಳಿರುವುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ