ಚೆನ್ನೈ: ''ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳೂ ಮೈತ್ರಿ ಇಲ್ಲದೇ ಚುನಾವಣೆ ಎದುರಿಸಲಿ,'' ಎಂದು ಎಐಎಡಿಎಂಕೆ ಬುಧವಾರ ಸವಾಲು ಹಾಕಿದೆ. ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರ್.ರಾಮಸ್ವಾಮಿ ಅವರು, ''2016ರಲ್ಲಿ ಜಯಲಲಿತಾ ನಿಧನರಾದ ಬಳಿಕ ಪಕ್ಷದ ಸ್ಥಿತಿ ಏನಾಗಿದೆ ಎನ್ನುವುದನ್ನು ಎಐಎಡಿಎಂಕೆ ಅರ್ಥ ಮಾಡಿಕೊಳ್ಳಲಿ,'' ಎಂದು ಟಾಂಗ್ ನೀಡಿದರು. ಅದಕ್ಕೆ ಉತ್ತರ ನೀಡಿದ ಉಪ ಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಅವರು, ''ಪಕ್ಷ ಮತ್ತು ಸರಕಾರ ಎರಡೂ ಸದೃಢವಾಗಿವೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ತೀರ್ಮಾನಿಸಿದರೆ, ನಾವು ಸಹ ಏಕಾಂಗಿಯಾಗಿ ಹೋರಾಡಲು ಸಿದ್ಧರಿದ್ದೇವೆ,'' ಎಂದು ಘೋಷಿಸಿದರು.
ಏಕಾಂಗಿಯಾಗಿ ಚುನಾವಣೆ ಎದುರಿಸಿ: ಕಾಂಗ್ರೆಸ್ಗೆ ಎಐಎಡಿಎಂಕೆ ಸವಾಲು
ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರ್.ರಾಮಸ್ವಾಮಿ ಅವರು, ''2016ರಲ್ಲಿ ಜಯಲಲಿತಾ ನಿಧನರಾದ ಬಳಿಕ ಪಕ್ಷದ ಸ್ಥಿತಿ ಏನಾಗಿದೆ ಎನ್ನುವುದನ್ನು ಎಐಎಡಿಎಂಕೆ ಅರ್ಥ ಮಾಡಿಕೊಳ್ಳಲಿ,'' ಎಂದು ಟಾಂಗ್ ನೀಡಿದರು.
Vijaya Karnataka 14 Feb 2019, 5:00 am