ಆ್ಯಪ್ನಗರ

ನನ್ನ ಕುಟುಂಬವೆಲ್ಲ ಪತ್ನಿ ಪರ, ಇನ್ನು ಅಪ್ಪನ ಮಾತು ಕೇಳಲ್ಲ: ಲಾಲು ಪುತ್ರ ತೇಜ್‌ ಪ್ರತಾಪ್‌

ನನ್ನ ಕುಟುಂಬದಲ್ಲೇ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಅಪ್ಪ, ಅಮ್ಮ, ಸಹೋದರ, ಸಹೋದರಿಯರೆಲ್ಲ ಐಶ್ವರ್ಯ ಪರವಿದ್ದಾರೆ. ಆದರೆ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.

Vijaya Karnataka 5 Nov 2018, 3:03 pm
ರಾಂಚಿ: ತಂದೆ ವಿರೋಧಿಸಿದರೂ, ನಾನು ವಿಚ್ಛೇದನದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
Vijaya Karnataka Web Lalu Son Marriage


ಶುಕ್ರವಾರ ಪಾಟ್ನಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿ ಐಶ್ವರ್ಯ ವಿರುದ್ಧ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತೇಜ್ ಪ್ರತಾಪ್, ಬಳಿಕ ರಾಂಚಿಯ ರಾಜೇಂದ್ರ ವೈದ್ಯಕೀಯ ವೈದ್ಯಕೀಯ ಸಂಸ್ಥೆ ಆಸ್ಪತ್ರೆಯಲ್ಲಿರುವ ತಂದೆಯನ್ನು ನೋಡಲು ಪ್ರಯಾಣ ಬೆಳೆಸಿದರು. ಎರಡುವರೆ ಗಂಟೆಗಳ ಕಾಲ ತಂದೆ - ಮಗ ಮಾತನಾಡಿದ್ದು, ತನ್ನ ನಿರ್ಧಾರದ ಬಗ್ಗೆ ತಂದೆಯ ಮನವೊಲಿಸಲು ತೇಜ್ ಪ್ರತಾಪ್ ವಿಫಲರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರದ ಮಾಜಿ ಸಚಿವ, ನನ್ನ ನಿರ್ಧಾರಕ್ಕೆ ತಂದೆಯ ಸಮ್ಮತಿ ಇಲ್ಲ. ಮತ್ಯಾಕೆ ನಾನು ಅವರ ಮಾತನ್ನು ಕೇಳಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ನಿಮ್ಮ ನಿರ್ಧಾರ ಕುಟುಂಬ ಮತ್ತು ರಾಜಕಾರಣದ ಮೇಲೆ ಪರಿಣಾಮ ಬೀರಲಿದೆಯೇ ಎಂದು ವರದಿಗಾರರು ಕೇಳಿದಾಗ, ಅದಕ್ಕೆ ನಾನೇನು ಮಾಡೋಕಾಗತ್ತೆ? ದಿನೇ ದಿನೇ ಇಂಚಿಂಚಾಗಿ ಸಾಯಬೇಕಾ ಅಥವಾ ನೇಣು ಬಿಗಿದುಕೊಳ್ಳಬೇಕಾ ಎಂದವರು ಪ್ರಶ್ನಿಸಿದ್ದಾರೆ.

ಕುಟುಂಬದ ವಿರುದ್ಧ ಆಕ್ರೋಶ


ನನ್ನ ಕುಟುಂಬದಲ್ಲೇ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಅಪ್ಪ, ಅಮ್ಮ, ಸಹೋದರ, ಸಹೋದರಿಯರೆಲ್ಲ ಐಶ್ವರ್ಯ ಪರವಿದ್ದಾರೆ. ಆದರೆ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ಒಂದುವರೆ ತಿಂಗಳಿಂದ ನನ್ನ ಜತೆ ಮಾತಾಡದಿದ್ದ ಹುಡುಗಿ ಅಚಾನಕ್ ಆಗಿ ಮನೆಗೆ ಬರಲು ಪ್ರಾರಂಭಿಸಿದ್ದಾಳೆ ಮತ್ತು ಮನೆಯವರೆಲ್ಲರೂ ಆಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದವರು ಆಕ್ರೋಶ ಹೊರಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ