ಆ್ಯಪ್ನಗರ

ಹಾಲು ಕುಡಿದು ರಂಜಾನ್ ಉಪವಾಸ ಮೊಟಕುಗೊಳಿಸಲಿರುವ ಉ. ಪ್ರ ಮುಸ್ಲಿಮರು

ಉತ್ತರ ಪ್ರದೇಶದ ಆರ್‌ಎಸ್‌ಎಸ್‌ನ ಮುಸ್ಲಿಂ ಶಾಖೆಯು ಪವಿತ್ರ ರಂಜಾನ್‌ ಇಫ್ತಾರ್‌ ಕೂಟಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ವಿತರಿಸಲು ತೀರ್ಮಾನಿಸದೆ.

ಟೈಮ್ಸ್ ಆಫ್ ಇಂಡಿಯಾ 21 May 2017, 12:57 pm
ಲಕ್ನೋ: ಉತ್ತರ ಪ್ರದೇಶದ ಆರ್‌ಎಸ್‌ಎಸ್‌ನ ಮುಸ್ಲಿಂ ಶಾಖೆಯು ಪವಿತ್ರ ರಂಜಾನ್‌ ಇಫ್ತಾರ್‌ ಕೂಟಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ವಿತರಿಸಲು ತೀರ್ಮಾನಿಸಿದೆ.
Vijaya Karnataka Web will serve milk to break fast during ramzanup muslim
ಹಾಲು ಕುಡಿದು ರಂಜಾನ್ ಉಪವಾಸ ಮೊಟಕುಗೊಳಿಸಲಿರುವ ಉ. ಪ್ರ ಮುಸ್ಲಿಮರು


ಗೋ ರಕ್ಷಣೆಯ ಸಂದೇಶ ಸಾರಲು ಹಾಗೂ ಗೋ ಮಾಂಸ ತಿನ್ನುವುದರಿಂದ ಬರುವ ಕಾಯಿಲೆಗಳ ಬಗ್ಗೆ ಜಾಗ್ರತೆಯನ್ನು ಮೂಡಿಸಲು ಈ ಯೋಜನೆ ರೂಪಿಸಲಾಗಿದೆ.

ರಂಜಾನ್‌ ಉಪವಾಸ ಮಾಡುವಾಗ ಸಾಮಾನ್ಯವಾಗಿ ಖರ್ಜೂರ ಅಥವಾ ಮತ್ಯಾವುದೋ ಫಲಾಹಾರ ತಿಂದು ಉಪವಾಸ ಮೊಟಕುಗೊಳಿಸುತ್ತಿದ್ದರು. ಇದೇ ಮೊದಲ ಬಾರಿಗೆ ರಂಜಾನ್‌ ಉಪವಾಸ ಒಂದು ಗ್ಲಾಸ್‌ ಹಾಲಿನಲ್ಲಿ ಮೊಟಕುಗೊಳ್ಳಲಿದೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸಹಚಂಚಾಲಕ ಮಹಿರಾಜ್ ಧವಾಜ್ ಸಿಂಗ್‌ ಹೇಳಿದ್ದಾರೆ.

ರಂಜಾನ್‌ನಲ್ಲಿ ಸಲ್ಲಿಸುವ ವಿಶೇಷ ಪ್ರಾರ್ಥನೆ ವೇಳೆ ಗೋ ರಕ್ಷಣೆ ಬಗ್ಗೆ ಕೂಡ ಪ್ರಾರ್ಥನೆ ಸಲ್ಲಿಸಲಾಗುವುದು.

ದ್ವೇಷ ಮರೆತು ಸಹೋದರತ್ವ ಭಾವನೆಯನ್ನು ಮೂಡಿಸಲು ಹಾಗೂ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ರಂಜಾನ್‌ ಪ್ರಾರ್ಥನೆಯನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ