ಆ್ಯಪ್ನಗರ

ವಿಂಗ್‌ ಕಮಾಂಡರ್ ಅಭಿನಂದನ್‌ ವರ್ಧಮಾನ್‌ಗೆ ವೀರಚಕ್ರ

ಪಾಕಿಸ್ತಾನದ ಯುದ್ಧ ವಿಮಾನ ಎಫ್‌-16ನನ್ನು ಹೊಡೆದುರುಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ಗೆ ಭಾರತದ ಯುದ್ಧ ಕಾಲದ ಮೂರನೇ ಶ್ರೇಷ್ಠ ಪುರಸ್ಕಾರವಾದ ವೀರಚಕ್ರ ನೀಡಿ ಗೌರವಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಪದಕ ಪ್ರದಾನ ಮಾಡಲಾಗುತ್ತದೆ..

TIMESOFINDIA.COM 14 Aug 2019, 12:15 pm
ಹೊಸದಿಲ್ಲಿ: ಭಾರತದ ವೀರಪುತ್ರ ಎಂದೇ ಪ್ರಸಿದ್ಧರಾದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Vijaya Karnataka Web abhinandan


ಯುದ್ಧಕಾಲದಲ್ಲಿ ಅಪ್ರತಿಮ ಸಾಹಸ ಪ್ರದರ್ಶನಕ್ಕೆ ನೀಡಲಾಗುವ ಮೂರು ಶ್ರೇಷ್ಠ ಪುರಸ್ಕಾರಗಳ ಪೈಕಿ ವೀರಚಕ್ರವೂ ಒಂದಾಗಿದ್ದು, 73ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಅವರಿ ಪುರಸ್ಕಾರ ನೀಡಲಾಗುತ್ತದೆ.

ಫೆಬ್ರವರಿಯಲ್ಲಿ ಪಾಕ್‌ ವಿರುದ್ಧ ಬಾಲಕೋಟ್‌ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ವಿಂಗ್‌ ಕಮಾಂಡ್‌ ಅಭಿನಂದನ್‌ ಪಾಕಿಸ್ತಾನದ ಎಫ್‌-16 ವಿಮಾನವನ್ನು ಹೊಡೆದುರುಳಿಸಿದ್ದರು.


2018ರಲ್ಲಿ ಕುಲ್ಗಾಮ್‌ನಲ್ಲಿ ನಡೆದ ಉಗ್ರರೊಂದಿಗೆ ಕಾಳಗದಲ್ಲಿ ಹುತಾತ್ಮರಾದ ಸಪ್ಪರ್‌ ಪ್ರಕಾಶ್‌ ಜಾಧವ್‌, ಸಿಆರ್‌ಪಿಎಫ್‌ ಡೆಪ್ಯುಟಿ ಕಮಾಂಡೆಂಟ್‌ ಹರ್ಷಪಾಲ್‌ ಸಿಂಗ್‌ ಸಿಂಗ್‌ ಕೀರ್ತಿ ಚಕ್ರ ಪದಕ ಪುರಸ್ಕಾರ(ಮರಣೋತ್ತರ) ಘೋಷಣೆ ಮಾಡಲಾಗಿದೆ. ಇದಲ್ಲದೆ 14 ಮಂದಿಗೆ ಶೌರ್ಯ ಚಕ್ರ ಪದಕ ನೀಡಲಾಗುತ್ತದೆ.

ಪಾಕ್‌ ಎಫ್‌-16 ಜತೆ ಕಾದಾಟ: ಅಭಿನಂದನ್‌ ಕೊನೆಯ ರೇಡಿಯೋ ಸಂದೇಶದಿಂದ ಖಚಿತ
ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್‌ ಲೀಡರ್‌ ಮಿಂಟಿ ಅಗರ್ವಾಲ್‌ ಯುದ್ಧ ಸೇವಾ ಪದಕಕ್ಕೆ ಭಾಜನರಾಗಿದ್ದು, ಬಾಲಕೋಟ್‌ನಲ್ಲಿ ವಾಯುದಾಳಿ ನಡೆಸಿ, ಜೈಷ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುದಾಣಗಳಿಗೆ ಬಾಂಬ್‌ ದಾಳಿ ನಡೆಸಿದ ಮಿಗ್‌2000 ಪೈಲಟ್‌ಗಳಿಗೆ ವಾಯುಸೇನಾ ಪದಕಗಳನ್ನು ಘೋಷಣೆ ಮಾಡಲಾಗಿದೆ.

ಬಾಲಾಕೋಟ್‌ನಲ್ಲಿ 170 ಉಗ್ರರು ಔಟ್‌

ಪುಲ್ವಾಮಾ ದಾಳಿ ಬಳಿಕ ಪಾಕ್‌ ಆಕ್ರಮಿತ ಪ್ರದೇಶದ ಭಾಗದಲ್ಲಿದ್ದ ಬಾಲಕೋಟ್‌ನಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುದಾಣಗಳ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಪಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಫೆ.27ರಂದು ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನ ವಾಯುಗಡಿ ಉಲ್ಲಂಘಿಸಿತ್ತು. ಈ ವೇಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌, ಮಿಗ್‌-21 ಯುದ್ಧ ವಿಮಾನದ ಮೂಲಕ ಹಿಮ್ಮೆಟ್ಟಿಸಿದರಲ್ಲದೆ, ಎಫ್‌-16 ಹೊಡೆದುರುಳಿಸಿ, ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. ಈ ವೇಳೆ ಪಾಕ್‌ ದಾಳಿಗೆ ತುತ್ತಾದ ಅಭಿನಂದನ್‌ ಅವರ ಫೈಟರ್‌ ಜೆಟ್‌ ಪತನಗೊಂಡು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು. 60 ಗಂಟೆಗಳ ಕಾಲ ಪಾಕ್‌ ವಶದಲ್ಲಿದ್ದರು.

ನೆತ್ತರು ಹೀರುವ ಉಗ್ರರ ಸ್ವರ್ಗಕ್ಕೇ ಬಿತ್ತು ಬಾಂಬ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ