ಆ್ಯಪ್ನಗರ

ತಲೆ ಕತ್ತರಿಸುವೆ; ಕೊಡಲಿ ಹಿಡಿದು ಸ್ವಪಕ್ಷದ ನಾಯಕನ ವಿರುದ್ಧ ಅಬ್ಬರಿಸಿದ ಹರಿಯಾಣ ಸಿಎಂ ಖಟ್ಟರ್

ತಲೆಗೆ ಮುಕುಟ ತೊಡಿಸಲು ಮುಂದಾದ ಪಕ್ಷದ ನಾಯಕರ ತಲೆ ಕಡಿಯುವುದಾಗಿ ಖಟ್ಟರ್ ಹೇಳಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.

Times Now 13 Sep 2019, 2:05 pm
ಹೊಸದಿಲ್ಲಿ: ಹರಿಯಾಣ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಮನೋಹರಲಾಲ್ ಖಟ್ಟರ್ ತಮ್ಮದೇ ಪಕ್ಷದ ನಾಯಕನ ತಲೆ ಕತ್ತರಿಸುವುದಾಗಿ ಅಬ್ಬರಿಸಿದ್ದಾರೆ. ಅದು ಕೂಡ ಕೈಯಲ್ಲಿ ಕೊಡಲಿ ಹಿಡಿದು. ಇದು ನಡೆದಿದ್ದು ಸಾರ್ವಜನಿಕ ವೇದಿಕೆಯಲ್ಲಿ. ಅಷ್ಟೇ ಅಲ್ಲ ಈ ದೃಶ್ಯಾವಳಿಗಳುಳ್ಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Vijaya Karnataka Web Khattar


ತಮ್ಮ ಕೈಯಲ್ಲಿ ಕೊಡಲಿ ಹಿಡಿದು ಖಟ್ಟರ್, ಶತ್ರುಗಳ ಸಂಹಾರಕ್ಕೆ ಇದನ್ನು ಹೇಗೆ ಬಳಸಬಹುದು ಎಂದು ನೆರೆದಂತಹ ಜನರ ಬಳಿ ಹೇಳುತ್ತಿದ್ದರು. ಇದೇ ಸಂದರ್ಭದಲ್ಲಿ ಅವರ ಹಿಂದೆ ನಿಂತಿದ್ದ ಬಿಜೆಪಿ ನಾಯಕರು ಅವರ ತಲೆಗೆ ಮುಕುಟ ಹಾಕಿದರು. ಅದವರಿಗೆ ಇಷ್ಟವಾಗಲಿಲ್ಲ. ಸ್ಥಿಮಿತ ಕಳೆದುಕೊಂಡ ಅವರು ಕೈಯಲ್ಲಿ ಕೊಡಲಿ ಹಿಡಿದುಕೊಂಡೇ ತಿರುಗಿ ನೋಡಿ, '' ಏನು ಮಾಡುತ್ತಿರುವಿರಿ, ನಿಮ್ಮ ಕುತ್ತಿಗೆ ಕತ್ತರಿಸುತ್ತೇನೆ'', ಎಂದು ಅಬ್ಬರಿಸಿದ್ದಾರೆ.


ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಈ ವೀಡಿಯೋವನ್ನು ತಮ್ಮ ಟ್ವಿಟರ್‌ಲ್ಲಿ ಹಂಚಿಕೊಂಡಿದ್ದು, ''ಕೋಪ ಮತ್ತು ಅಹಂಕಾರ ಆರೋಗ್ಯಕ್ಕೆ ಹಾನಿಕಾರಕ. ಖಟ್ಟರ್ ಸಾಹೇಬರಿಗೆ ಏಕೆ ಕೋಪ ಬರುತ್ತದೆ. ಕೊಡಲಿ ಹಿಡಿದು ತಮ್ಮದೇ ಪಕ್ಷದ ನಾಯಕರಿಗೆ ಈ ರೀತಿಯಲ್ಲಿ ಧಮ್ಕಿ ಹಾಕುವ ಇವರು ಜನರ ಜತೆ ಏನು ಮಾಡಿಯಾರು?'', ಎಂದು ಆತಂಕ ವ್ಯಕ್ತಪಡಿಸುತ್ತ ವ್ಯಂಗ್ಯವಾಡಿದ್ದಾರೆ.


ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಖಟ್ಟರ್, ಯಾರಾದರೂ ನನ್ನ ತಲೆಗೆ ಬೆಳ್ಳಿ ಕಿರೀಟ ತೊಡಿಸಲು ಯತ್ನಿಸಿದರೆ ನನ್ನಿಂದ ಸಹಿಸಿಕೊಳ್ಳಲಾಗದು. ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಸಂಸ್ಕೃತಿಯನ್ನು ನಿಲ್ಲಿಸಿದ್ದೇನೆ. ಈ ಬಗ್ಗೆ ಕಾರ್ಯಕರ್ತರು ಬೇಸರ ಪಟ್ಟಕೊಳ್ಳಬಾರದು ಎಂದಿದ್ದಾರೆ.

ಖಟ್ಟರ್ ಮೈಮರೆತು ವರ್ತಿಸಿದ್ದು ಇದೇ ಮೊದಲಲ್ಲ. ಕಾರ್ಯಕ್ರಮವೊಂದರಲ್ಲಿ ತಮ್ಮ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ತಳ್ಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ