ಆ್ಯಪ್ನಗರ

ಚಿರತೆ ಬೇಟೆಗೆ ಗನ್‌ ಹಿಡಿದು ಕಾರ್ಯಾಚರಣೆ ನಡೆಸಿದ ಸಚಿವ!

ಇಲ್ಲಿನ ಜಲಗಾವ್‌ ಜಿಲ್ಲೆಯಲ್ಲಿ ಮಹಿಳೆಯನ್ನು ಸಾಯಿಸಿರುವ ನರಹಂತಕ ಚಿರತೆಯ ಶೋಧ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ತೆರಳಿದ್ದ ಮಹಾರಾಷ್ಟ್ರ ಸಚಿವ ಗಿರೀಶ್‌ ಮಹಾಜನ್‌, ಪಿಸ್ತೂಲ್‌ ಬಳಸಿದ ವಿವಾದಕ್ಕೆ ಗುರಿಯಾಗಿದ್ದಾರೆ.

Vijaya Karnataka 29 Nov 2017, 8:10 am

ಮುಂಬಯಿ: ಇಲ್ಲಿನ ಜಲಗಾವ್‌ ಜಿಲ್ಲೆಯಲ್ಲಿ ಮಹಿಳೆಯನ್ನು ಸಾಯಿಸಿರುವ ನರಹಂತಕ ಚಿರತೆಯ ಶೋಧ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ತೆರಳಿದ್ದ ಮಹಾರಾಷ್ಟ್ರ ಸಚಿವ ಗಿರೀಶ್‌ ಮಹಾಜನ್‌, ಪಿಸ್ತೂಲ್‌ ಬಳಸಿದ ವಿವಾದಕ್ಕೆ ಗುರಿಯಾಗಿದ್ದಾರೆ.

ಬಿಜೆಪಿ ಸಚಿವರ ಗನ್‌ಪೌರುಷದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ಚಿರತೆಯನ್ನು ಕೊಲ್ಲುವುದು ತನ್ನ ಉದ್ದೇಶ ಆಗಿರಲಿಲ್ಲ, ಅಗತ್ಯ ಬಿದ್ದರೆ ಹೆದರಿಸಲು ಪಿಸ್ತೂಲ್‌ ಹಿಡಿದಿದ್ದೆ. ಅದಕ್ಕಾಗಿ ನನ್ನ ಬಳಿ ಪರವಾನಗಿ ಇದೆ, 20 ವರ್ಷಗಳಿಂದ ನಾನದನ್ನು ಇಟ್ಟುಕೊಂಡಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

ಸೋಮವಾರವಷ್ಟೇ ಚಿರತೆ ದಾಳಿಗೆ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ್ದ ಮಹಾಜನ್‌ ಹಿಂತಿರುಗಿ ಬರುವಾಗ ವಾರಖೇಡ್‌ ಗ್ರಾಮದ ಬಳಿ ಚಿರತೆ ಕಂಡಿದ್ದಾಗಿ ಮಾಹಿತಿ ಸಿಕ್ಕಿದೆ. ತಕ್ಷ ಣ ಅರಣ್ಯ ಸಿಬ್ಬಂದಿಯೊಂದಿಗೆ ತಮ್ಮ ಪಿಸ್ತೂಲ್‌ ಹಿಡಿದು ಶೋಧ ಕಾರ್ಯಾಚರಣೆಗೆ ತೆರಳಿದ್ದಾರೆ ರಾಜ್ಯ ವೈದ್ಯಕೀಯ ಶಿಕ್ಷ ಣ ಸಚಿವ. ಆದರೆ, ತಂಡಕ್ಕೆ ಚಿರತೆ ಕಂಡುಬಂದಿಲ್ಲ.

'ಇದುವರೆಗೆ ಐವರನ್ನು ಬಲಿ ಪಡೆದಿರುವ ಚಿರತೆ ಕಂಡಲ್ಲಿ ಗುಂಡು ಹಾರಿಸುವಂತೆ ಅರಣ್ಯ ಸಚಿವರು ಅನುಮತಿ ನೀಡಿದ್ದಾಗಿ ನಮಗೆ ತಿಳಿಯಿತು. ಇದುವರೆಗೂ ನಾನೊಂದು ಗುಬ್ಬಚ್ಚಿಯನ್ನೂ ಕೊಂದಿಲ್ಲ' ಎಂದು ಮಹಾಜನ್‌ ಹೇಳಿದ್ದಾರೆ.

Vijaya Karnataka Web with gun in hand maharashtra bjp leader girish dattatray mahajan joins hunt for leopard
ಚಿರತೆ ಬೇಟೆಗೆ ಗನ್‌ ಹಿಡಿದು ಕಾರ್ಯಾಚರಣೆ ನಡೆಸಿದ ಸಚಿವ!


ಅರಣ್ಯ ಕಾನೂನನ್ನು ಮೀರಿದ್ದಕ್ಕಾಗಿ ಸಚಿವರನ್ನು ವಜಾಗೊಳಿಸಬೇಕೆಂದು ಪ್ರತಿಪಕ್ಷ ಗಳು ಆಗ್ರಹಿಸಿವೆ.

ಮಾರಾಟ ಹೆಚ್ಚಿಸಲು ಮದ್ಯಕ್ಕೆ ಮಹಿಳೆ ಹೆಸರಿಡಿ ಎಂದ ಸಚಿವ

2015ರಲ್ಲಿ ಕೂಡಾ ಸಚಿವರು ಶಾಲಾ ಕಾರ್ಯಕ್ರಮವೊಂದಕ್ಕೆ 'ಆತ್ಮರಕ್ಷ ಣೆಗಾಗಿ'(?) ಬೆಲ್ಟ್‌ನಲ್ಲಿ ಪಿಸ್ತೂಲ್‌ ಧರಿಸಿ ಬಂದು ವಿವಾದ ಮೈಮೇಲೆಳೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ