ಆ್ಯಪ್ನಗರ

ಅತ್ಯಾಚಾರಕ್ಕೆ ಯತ್ನಿಸಿದವನನ್ನು ಕೊಂದು ಹೂತು ಹಾಕಿದಳು?

ಗಂಡ- ಹೆಂಡತಿ ಸೇರಿ ಸಂಬಂಧಿಯನ್ನು ಕೊಂದು ಬೇರೆಯದೇ ಕಥೆ ಕಟ್ಟಿದರೇ?

TIMESOFINDIA.COM 29 Jul 2019, 3:27 pm
ಕೋಲ್ಕತಾ: ತನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಕಾಮುಕನನ್ನು ಕೊಂದ ಮಹಿಳೆ, ಬಳಿಕ ಮೃತ ದೇಹವನ್ನು ಹೂತು ಹಾಕಿದ ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಆಕೆಯ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Vijaya Karnataka Web Police 1


ಶನಿವಾರ ಸಾಯಂಕಾಲ ಉಸ್ತಿ ಪೊಲೀಸ್ ಠಾಣೆಗೆ ಪೋನ್ ಕರೆ ಮಾಡಿದ ಮಹಿಳೆಯೊಬ್ಬಳು ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಮತ್ತು ನನ್ನ ಮಗಳನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ್ದಾಗಿ ಹೇಳಿದ್ದಳು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತನ್ನ ನೆರೆಮನೆ ನಿವಾಸಿ ತಪನ್ ಶಾ (35), ಗುರುವಾರ ಸಂಜೆ ನನ್ನನ್ನು ಪೊದೆಯೊಂದರ ಬಳಿ ಎಳೆದೊಯ್ದು ಅತ್ಯಾಚಾರ ಎಸಗಲು ಪ್ರಯತ್ನಿಸಿದ. ನನ್ನ ಕಿರುಚಾಟ ಕೇಳಿ 6 ವರ್ಷದ ಮಗಳು ಓಡಿ ಬಂದಾಗ ಆಕೆಯ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ. ತಕ್ಷಣ ಮನೆಗೆ ಓಡಿದ ನಾನು ಕಬ್ಬಿಣದ ರಾಡ್ ತಂದು ಆತನ ತಲೆಗೆ ಹೊಡೆದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ. ಮಗಳನ್ನು ಮನೆಗೆ ತಂದು ಬಿಟ್ಟು, ಬಳಿಕ ಮತ್ತೆ ಕೃತ್ಯ ನಡೆದ ಸ್ಥಳಕ್ಕೆ ಹೋಗಿ ಆತನ ದೇಹವನ್ನು ಬಾಳೆ ತೋಟದಲ್ಲಿ ಹೊಂಡ ತೆಗೆದು ಮುಚ್ಚಿದೆ. ಈ ವಿಷಯ ನನ್ನ ಗಂಡನಿಗೂ ಗೊತ್ತಿಲ್ಲ. ಬಳಿಕ ಪಶ್ಚಾತಾಪವಾಗಿ ನಿಮಗೆ ಫೋನ್ ಕರೆ ಮಾಡಿದೆ ಎಂದಾಕೆ ಹೇಳಿದ್ದಳು.

ಕಥೆಗೆ ಹೊಸ ತಿರುವು


ಆಕೆಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಆಕೆಯದು ಕಟ್ಟು ಕಥೆ ಎನಿಸಿತು. ಮೃತ ವ್ಯಕ್ತಿ ಮತ್ತು ಮಹಿಳೆ ಸಂಬಂಧಿಕರಾಗಿದ್ದು ಆಸ್ತಿ ವಿವಾದವೂ ಸಹ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಅನುಮಾನಗೊಂಡಿದ್ದು, ಅದಕ್ಕೆ ಪೂರಕವಾಗಿ ಆಕೆಯ ಪತಿ ಸಹ ನಾಪತ್ತೆಯಾಗಿದ್ದಾನೆ. ಇಬ್ಬರು ಸೇರಿ ಹತ್ಯೆ ಮಾಡಿರುವ ಶಂಕೆಯಿಂದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ