ಆ್ಯಪ್ನಗರ

ರೈಲಿನ ಸೀಟಿನಿಂದ ಜಾರಿ ಬಿದ್ದು ಬೆಂಗಳೂರು ಮಹಿಳೆ ಸಾವು

ಕಳೆದ ಜುಲೈ 22ರಂದು ಕೆಲಸದ ಮೇಲೆ ಮುಂಬಯಿಗೆ ತೆರಳಿದ್ದ ಇವರು, ಬೆಂಗಳೂರಿಗೆ ವಾಪಸ್‌ ಬಂದು ನಿಲ್ದಾಣದಲ್ಲಿ ಇಳಿಯುವ ತರಾತುರಿಯಲ್ಲಿ ಈ ಅವಘಡ ಘಟಿಸಿದೆ.

PTI 29 Jul 2019, 5:00 am
ಮುಂಬಯಿ: ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲಿನ ಹವಾ ನಿಯಂತ್ರಿತ ಬೋಗಿಯ ಮೇಲ್ಭಾಗದ ಸೀಟಿನಿಂದ ಜಾರಿ ಬಿದ್ದು ಮಹಿಳಾ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಜಯನಗರದ ಬ್ಯೂಟಿಪಾರ್ಲರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೋಲ್ಕೊತಾ ಮೂಲದ ಸರಸ್ವತಿ ಬನಿಸಾಲ್‌ (40) ಮೃತಪಟ್ಟ ಮಹಿಳೆ. ಕಳೆದ ಜುಲೈ 22ರಂದು ಕೆಲಸದ ಮೇಲೆ ಮುಂಬಯಿಗೆ ತೆರಳಿದ್ದ ಇವರು, ಬೆಂಗಳೂರಿಗೆ ವಾಪಸ್‌ ಬಂದು ನಿಲ್ದಾಣದಲ್ಲಿ ಇಳಿಯುವ ತರಾತುರಿಯಲ್ಲಿ ಈ ಅವಘಡ ಘಟಿಸಿದೆ. ಮೇಲ್ಭಾಗದ ಸೀಟಿನಿಂದ ಇಳಿಯುವಾಗ ಜಾರಿ ಬಿದ್ದರು. ಆಗ ನೆರವಿಗೆ ಧಾವಿಸಿದ ಸಹಪ್ರಯಾಣಿಕರು, ನಿಲ್ದಾಣದ ಅಧಿಕಾರಿಗಳಿಗೆ ವಿಷಯ ತಿಳಿಸಿ ವೈದ್ಯಕೀಯ ನೆರವು ಕೊಡಿಸಿದರು. ಅದಾಗಿ ತುಂಬ ಲವಲವಿಕೆಯಿಂದ ಮಾತಾಡಿದ ಸರಸ್ವತಿ, ಒಂದೆರಡು ತಾಸುಗಳ ಬಳಿಕ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. ''ಮೈ ಮೇಲೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ, ಒಳಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿರಬಹುದು,'' ಎಂದು ಶಂಕಿಸಲಾಗಿದೆ.
Vijaya Karnataka Web Indian_Railway

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ