ಆ್ಯಪ್ನಗರ

ಅಕ್ಬರ್‌ ಜೆಂಟಲ್‌ಮೆನ್‌: ಸಾಕ್ಷಿ ನುಡಿದ ಮಾಜಿ ಸಹೋದ್ಯೋಗಿ

ಮಾಜಿ ಸಚಿವರ ವಿರುದ್ಧ ಅತ್ಯಾಚಾರ ಆರೋಪ | ಕೋರ್ಟ್‌ನಲ್ಲಿ ಸಾಕ್ಷಿಯ ಹೇಳಿಕೆ ದಾಖಲು

Vijaya Karnataka 13 Nov 2018, 10:08 am
ಹೊಸದಿಲ್ಲಿ: ಮಿ ಟೂ ಅಭಿಯಾನದ ಭಾಗವಾಗಿ ಮಾಜಿ ಕೇಂದ್ರ ಸಚಿವ ಎಂ.ಜೆ ಅಕ್ಬರ್‌ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಮಾಡಿರುವ ಲೈಂಗಿಕ ಕಿರುಕುಳ ಆರೋಪದಿಂದ ಅಕ್ಬರ್‌ ಅವರ ಮಾನಹಾನಿಯಾಗಿದೆ ಎಂದು ಮಾಜಿ ಸಹೋದ್ಯೋಗಿ, ಸಂಡೇ ಗಾರ್ಡಿಯನ್‌ ಪತ್ರಿಕೆ ಸಂಪಾದಕಿ ಜೊಯಿತಾ ಬಸು ಹೇಳಿದ್ದಾರೆ.
Vijaya Karnataka Web M J Akbar


ಪ್ರಿಯಾ ರಮಣಿ ವಿರುದ್ಧ ಅಕ್ಬರ್‌ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಇಲ್ಲಿನ ಹೆಚ್ಚುವರಿ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿರುವ ಅವರು, ''ಅಕ್ಬರ್‌ ಸಜ್ಜನ, ಘನತೆಯುಳ್ಳವ್ಯಕ್ತಿ. ಉದ್ದೇಶಪೂರ್ವಕವಾಗಿಯೇ, ಗೌರವ ಹಾಳು ಮಾಡಲೆಂದೇ ಅಕ್ಬರ್‌ ವಿರುದ್ಧ ರಮಣಿ ಆರೋಪ ಮಾಡಿದ್ದಾರೆ,'' ಎಂದು ಪ್ರತಿಪಾದಿಸಿದ್ದಾರೆ.

''ನಾನು ಕಳೆದ ಅ.10 ಮತ್ತು ಅ.13ರಂದು ರಮಣಿ ಅವರು ಮಾಡಿದ ಟ್ವೀಟ್‌ಗಳನ್ನು ನೋಡಿದ್ದೇನೆ. ನನಗೆ ಅವರ ಆರೋಪಗಳ ಬಗ್ಗೆ ಅನುಮಾನವಿತ್ತು. ಈ ಆಪಾದನೆಗಳ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಜನರು ಎತ್ತಿದ ಪ್ರಶ್ನೆಗಳನ್ನು ಗಮನಿಸಿದಾಗ ಅಕ್ಬರ್‌ ಅವರ ಹೆಸರಿಗೆ ದೊಡ್ಡ ಕಳಂಕ ಬಂದಿದೆ. ಅವರ ಗೌರವ, ಘನತೆಗೆ ಇದರಿಂದ ತುಂಬಲಾರದ ಹಾನಿಯಾಗಿದೆ ಎನಿಸಿತು,'' ಎಂದು ನ್ಯಾಯಾಧೀಶ ಸಮರ್‌ ವಿಷಾಲ್‌ ಮುಂದೆ ಬಸು ಹೇಳಿದ್ದಾರೆ.

''ಪತ್ರಕರ್ತೆಯಾಗಿ ನಾನು ಸುಮಾರು 20 ವರ್ಷಗಳ ಕಾಲ ಅಕ್ಬರ್‌ ಜತೆಗೆ ಕೆಲಸ ಮಾಡಿದ್ದೇನೆ. ಪ್ರಿಯಾ ರಮಣಿ ಆರೋಪಿಸಿರುವಂತಹ ಯಾವುದೇ ಬಗೆಯ ಅಹಿತಕರ ಅನುಭವಗಳು ಅಕ್ಬರ್‌ ಅವರಿಂದ ನನಗೆ ಆಗಿಲ್ಲ. ಅವರೊಬ್ಬ ಸಾರ್ವಜನಿಕ ವ್ಯಕ್ತಿ ಮತ್ತು ಸಮಾಜದಲ್ಲಿ ಉನ್ನತ ಘನತೆ, ಗೌರವ ಹೊಂದಿರುವ ವ್ಯಕ್ತಿ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ