ಆ್ಯಪ್ನಗರ

ಈರುಳ್ಳಿ, ಬೆಳ್ಳುಳ್ಳಿ ತಿನ್ನಿಸಿದ್ದಕ್ಕೆ ಪ್ರಕರಣ ದಾಖಲು

ಗಂಡ ಹಾಗೂ ಅತ್ತೆ ಸೇರಿ ತನಗೆ ಬಲವಂತವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಿಸಿದ್ದಾರೆಂದು 25 ವರ್ಷದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಲಕ್ಷಣ ಘಟನೆ ಮೆಹ್ಸಾನಾದಲ್ಲಿ ನಡೆದಿದೆ.

TIMESOFINDIA.COM 14 Jul 2018, 11:43 am
ಅಹಮದಾಬಾದ್: ಗಂಡ ಹಾಗೂ ಅತ್ತೆ ಸೇರಿ ತನಗೆ ಬಲವಂತವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಿಸಿದ್ದಾರೆಂದು 25 ವರ್ಷದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಲಕ್ಷಣ ಘಟನೆ ಮೆಹ್ಸಾನಾದಲ್ಲಿ ನಡೆದಿದೆ.
Vijaya Karnataka Web Onion


ಈ ರೀತಿ ಆಹಾರದ ಹೇರುವಿಕೆಯ ಮೂಲಕ ನನ್ನ ನಂಬಿಕೆಗೆ ಭಂಗ ತರುತ್ತಿದ್ದಾರೆ ಎಂದು ಸ್ವಾಮಿನಾರಾಯಣ ಪಂಥದ ಅನುಯಾಯಿಯಾಗಿರುವ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ನನ್ನ ಅಣ್ಣನ ಗೆಳೆಯನ ಜತೆ ಪ್ರೀತಿಯಲ್ಲಿ ಬಿದ್ದು ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾದೆ. ನನ್ನ ಗಂಡ ಚಹಾ ಮತ್ತು ಪಾನ್ ಶಾಪ್ ನಡೆಸುತ್ತಿದ್ದು, ನಾನು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತೇನೆ. ನಾನು ಪಟೇಲ್ ಸಮುದಾಯಕ್ಕೆ ಸೇರಿದ್ದು, ಸ್ವಾಮಿ ನಾರಾಯಣ ಪಂಥದ ಅನುಯಾಯಿಯಾಗಿದ್ದೇನೆ. ನಾವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಅತ್ತೆ ಮತ್ತು ಪತಿ ಜತೆ ಸೇರಿ ಈರುಳ್ಳಿ, ಬೆಳ್ಳುಳ್ಳಿ ಮಿಶ್ರಿತ ಆಹಾರವನ್ನು ಬಲವಂತವಾಗಿ ತಿನ್ನಿಸಿದ್ದಾರೆ. ನಾನು ತಿನ್ನಲು ನಿರಾಕರಿಸಿದಾಗ ಅವರಿಬ್ಬರು ಸೇರಿ ನನಗೆ ಥಳಿಸಿದ್ದಾರೆ. ಬಳಿಕ ನನ್ನ ತಾಯಿ ಜತೆ ಮಾತನಾಡದಂತೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ ನಾನು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ