ಆ್ಯಪ್ನಗರ

ಕೋಳಿ ಜಗಳದಿಂದ ಸಿಟ್ಟಿಗೆದ್ದು ಮಹಿಳೆಗೆ ಗುಂಡಿಕ್ಕಿದ ಭೂಪ !

ಉತ್ತರ ಪ್ರದೇಶದ ಮುಜಫರನಗರ ಹಳ್ಳಿಯೊಂದರಲ್ಲಿ ನಡೆದ ಕೋಳಿ ಜಗಳ ಕೊನೆಗೆ ಗುಂಡು ಹಾರಾಟದಲ್ಲಿ ಅಂತ್ಯ ಕಂಡಿದೆ. ಕೋಳಿಗಳನ್ನು ಮನೆಯಂಗಳದಿಂದ ಓಡಿಸಿದಕ್ಕಾಗಿ ಕೋಪಗೊಂಡ ವ್ಯಕ್ತಿಯೊಬ್ಬ ಸಂಬಂಧಿ ಮಹಿಳೆಗೆ ಗುಂಡಿಕ್ಕಿದ್ದಾನೆ.

TOI-Online 18 Sep 2019, 5:25 pm
ಮುಜಫರನಗರ- ಹಳ್ಳಿಗಳಲ್ಲಿ ಮನೆಗಳಿದ್ದರೆ ಪಕ್ಕದ ಮನೆಯ ಕೋಳಿಗಳು ನಿಮ್ಮ ಮನೆಯಂಗಳಕ್ಕೆ ಬರುವುದು ಸಹಜ. ಕೋಳಿಗಳು ಬಂದು ಗಲೀಜು ಮಾಡಿದರೆ ಕೋಪಕೊಂಡ ಮಹಿಳೆಯರ ನಡುವೆ ಒಂದಿಷ್ಟು ಕೋಳಿ ಜಗಳಗಳು ನಡೆಯುವುದು ಕೂಡಾ ಅಷ್ಟೇ ಸಹಜ. ಆದರೆ ಉತ್ತರಪ್ರದೇಶದ ಗ್ರಾಮವೊಂದಲ್ಲಿ ನಡೆದ ಕೋಳಿ ಜಗಳ ಗುಂಡು ಹಾರಿಸುವ ಮಟ್ಟಕ್ಕೆ ಬಂದು ತಲುಪಿ ಅಂತ್ಯಕಂಡಿದೆ.
Vijaya Karnataka Web gun


ಹೌದು, ಮನೆಯ ಅಂಗಳದಲ್ಲಿದ್ದ ಕೋಳಿಗಳನ್ನು ಓಡಿಸಿದಕ್ಕೆ ಕೋಪಗೊಂಡು ಮಹಿಳೆಯೊಬ್ಬಳಿಗೆ ಪಿಸ್ತೂಲಿನಿಂದ ಗುಂಡಿಕ್ಕಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಮುಜಫರನಗರದಲ್ಲಿ ನಡೆದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಶಾಯಿಸ್ತಾ ಬೇಗಂ ಎಂಬುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಂಗಳದಲ್ಲಿ ಗಲೀಜು ಮಾಡುತ್ತಿದ್ದ ಕಾರಣಕ್ಕಾಗಿ ಕೋಳಿಗಳನ್ನು ಶಾಯಿಸ್ತಾ ಓಡಿಸಿದ್ದರು. ಇಷ್ಟಕ್ಕೇ ಕೋಪಗೊಂಡ ಆಕೆಯ ಸಹೋದರ ಸಂಬಂಧಿ ಫರ್ಹಾನ್ ತನ್ನಲ್ಲಿದ್ದ ನಾಡ ಪಿಸ್ತೂಲಿನಿಂದ ಶಾಯಿಸ್ತಾಗೆ ಗುಂಡಿಕ್ಕಿದ್ದಾನೆ.

ಗುಂಡು ಹೊಟ್ಟೆಗೆ ತಗುಲಿದ ಪರಿಣಾಮ ಶಾಯಿಸ್ತಾ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.

‘ಬಿಜೆಪಿ, ಭಜರಂಗದಳಕ್ಕೆ ಪಾಕಿಸ್ತಾನದ ಐಎಸ್‌ಐ ಹಣ’: ದಿಗ್ವಿಜಯ್ ಸಿಂಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಫರ್ಹಾನ್ ಸಾಕಿದ್ದ ಕೋಳಿಗಳು ಶಾಯಿಸ್ತಾ ಬೇಗಂ ಮನೆಯಂಗಳಕ್ಕೆ ನಿತ್ಯ ಬರುತ್ತಿದ್ದವು. ಮನೆಯೊಳಗೂ ಬರುತ್ತಿದ್ದರಿಂದ ಕಿರಿಕಿರಿಗೊಂಡ ಶಾಯಿಸ್ತಾ ತನ್ನ ಸಹೋದರ ಸಂಬಂಧಿ ಫರ್ಹಾನ್ ಜೊತೆ ಜಗಳ ಕಾದಿದ್ದಳು.

ನಿತ್ಯ ನಡೆಯುತ್ತಿದ್ದ ಸಣ್ಣಪುಟ್ಟ ಕೋಳಿ ಜಗಳ ತಾರಕಕ್ಕೇರಿ ಕೊನೆಗೆ ಗುಂಡು ಹಾರಾಟದ ಮಟ್ಟಕ್ಕೆ ಬಂದು ತಲುಪಿದೆ. ಆರೋಪಿ ವಿರುದ್ಧ ಪೊಲೀಸರು ಕೊಲೆಯತ್ನ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಫರ್ಹಾನ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ