ಆ್ಯಪ್ನಗರ

ಸ್ವಂತ ವ್ಯಾಪಾರ ಆರಂಭಿಸಲು ಈ ಮಹಿಳೆ ಮಾಡಿದ್ದೇನು ಗೊತ್ತೆ?

ಸ್ವಂತ ವ್ಯಾಪಾರ ಪ್ರಾರಂಭಿಸಲು ಹಣದ ಕೊರತೆ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಅತ್ತೆಯ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಲು ಸಂಚು ರೂಪಿಸಿದ್ದಳು.

ಟೈಮ್ಸ್ ಆಫ್ ಇಂಡಿಯಾ 19 Jun 2017, 3:20 pm
ಹೊಸದಿಲ್ಲಿ: ಸ್ವಂತ ವ್ಯಾಪಾರ ಪ್ರಾರಂಭಿಸಲು ಹಣದ ಕೊರತೆಯ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಅತ್ತೆ (ಗಂಡ) ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಲು ಸಂಚು ರೂಪಿಸಿ ಸಿಕ್ಕಿಹಾಕಿಕೊಂಡಿರುವ ಪ್ರಕರಣ ದಿಲ್ಲಿಯಲ್ಲಿ ನಡೆದಿದೆ.
Vijaya Karnataka Web woman plots to rob in laws for setting up business
ಸ್ವಂತ ವ್ಯಾಪಾರ ಆರಂಭಿಸಲು ಈ ಮಹಿಳೆ ಮಾಡಿದ್ದೇನು ಗೊತ್ತೆ?


ದರೋಡೆಗೆ ಸಂಚು ರೂಪಿಸಿದ್ದ ಮಹಿಳೆಯನ್ನು ಆರತಿ ಅಗರವಾಲ್ ಎಂದು ಗುರುತಿಸಲಾಗಿದೆ. ಈಶಾನ್ಯ ದಿಲ್ಲಿಯ ದರೋಡೆಕೋರರ ಸಹಾಯ ಪಡೆದ ಆರತಿ, ಶಾಲಿಮಾರ್ ಬಾಗ್‌ನ ಎಸಿ ಬ್ಲಾಕ್‌ನಲ್ಲಿರುವ ತಮ್ಮ ಮನೆಯನ್ನೇ ದೋಚಲು ಸಂಚು ರೂಪಿಸಿದ್ದಳು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಆರತಿ ಅಗರವಾಲ್ ರೂಪಿಸಿದ ಸಂಚಿನಂತೆ ದರೋಡೆಕೋರರು 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ. ದರೋಡೆಕೋರು ಮನೆಗೆ ನುಗ್ಗಿದ್ದ ಸಂದರ್ಭದಲ್ಲಿ ಆರತಿಯ ಸೋದರಳಿಯ (5) ಹಾಗೂ ಅತ್ತಿಗೆಯನ್ನು ಮಾತ್ರ ಟಾರ್ಗೆಟ್ ಮಾಡಿದ್ದರು. ಈ ವೇಳೆ ಆರತಿ ಮೂಖ ಪ್ರೇಕ್ಷಕಳಂತೆ ನೋಡುತ್ತ ನಿಂತಿದ್ದಳು. ಹೀಗಾಗಿ ಈಕೆಯ ಮೇಲೆ ಸಂಶಯ ಪ್ರಾರಂಭವಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಆರತಿ ನಾದಿನಿ ರೋಹಿಣಿ ಅಗರವಾಲ್ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ತಾವು ರೂಪಿಸಿದ ಸಂಚಿನ ಕುರಿತು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ