ಆ್ಯಪ್ನಗರ

ಕಳೆದುಹೋದ ಲ್ಯಾಪ್‌ಟಾಪ್‌ ಹುಡುಕಲು ಡಿಟೆಕ್ಟೀವ್‌ ಆದ MNC ಉದ್ಯೋಗಿ ಪಲ್ಲವಿ

ನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ತನ್ನ ಕಳೆದು ಹೋದ ಲ್ಯಾಪ್‌ಟಾಪ್‌ ಕಂಡುಹಿಡಿಯಲು ಒಂದು ದಿನದ ಮಟ್ಟಿಗೆ ಡಿಟೆಕ್ಟೀವ್‌ ಆದ ಘಟನೆ ನಡೆದಿದೆ.

Mumbai Mirror 25 Jan 2018, 6:14 pm
ಮುಂಬಯಿ: ನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಕಳೆದು ಹೋದ ಲ್ಯಾಪ್‌ಟಾಪ್‌ ಕಂಡುಹಿಡಿಯಲು ಒಂದು ದಿನದ ಮಟ್ಟಿಗೆ ಡಿಟೆಕ್ಟೀವ್‌ ಆದ ಘಟನೆ ನಡೆದಿದೆ.
Vijaya Karnataka Web woman turns detective to trace stolen laptop in 24 hrs
ಕಳೆದುಹೋದ ಲ್ಯಾಪ್‌ಟಾಪ್‌ ಹುಡುಕಲು ಡಿಟೆಕ್ಟೀವ್‌ ಆದ MNC ಉದ್ಯೋಗಿ ಪಲ್ಲವಿ


ಹೌದು! ಇದ್ಯಾವುದೋ ಕ್ರೈಂ ಶೋ ಕಥೆಯಲ್ಲ ಮಲ್ಟಿ ನ್ಯಾಷನಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುವ ಪಲ್ಲವಿ ಪ್ರಸಾದ್‌ ಅವರ ಲ್ಯಾಪ್‌ಟಾಪ್‌ನ್ನು ಗೋರೆಗಾಂನ ಆಟೋ ಚಾಲಕ ಕಳ್ಳತನ ಮಾಡಿದ್ದ, ಈತನ ಹಿಂದೆ ಬಿದ್ದ ಪಲ್ಲವಿ ಅಂತಿಮವಾಗಿ ಕೇವಲ 24 ಗಂಟೆಯೊಳಗೆ ತನ್ನ ಲ್ಯಾಪ್‌ಟಾಪ್‌ ಪಡೆದುಕೊಂಡ ಕಥೆ.

ಕಳೆದ ಶುಕ್ರವಾರದಂದು ರಿಕ್ಷಾವೊಂದರಲ್ಲಿ ಮನೆಗೆ ಹೊರಟಿದ್ದ ಪಲ್ಲವಿ ದಾರಿ ಮಧ್ಯೆ ರೆಸ್ಟೋರೆಂಟ್‌ವೊಂದರ ಮುಂದೆ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ, ಅಲ್ಲದೇ ತನ್ನ ಸಾಮಗ್ರಿಗಳ ಮೇಲೆ ನಿಗಾಯಿಡುವಂತೆ ಆಟೋದವನ ಮುಂದೆ ಕೇಳಿಕೊಂಡಿದ್ದರು. ಫಿಲ್ಮ್‌ಸಿಟಿ ಬಳಿ ಇರುವ ತನ್ನ ಮನೆಯ ಮುಂದೆ ಇಳಿದುಕೊಂಡ ಪಲ್ಲವಿಗೆ ಲ್ಯಾಪ್‌ಟಾಪ್‌ ಕಳ್ಳತನವಾಗಿರುವುದು ತಿಳಿದುಬರಲಿಲ್ಲ.

ಆದರೆ ಶನಿವಾರಂದು ಲ್ಯಾಪ್‌ಟಾಪ್‌ ಬ್ಯಾಗ್‌ ತೆರೆದು ನೋಡಿದ ಪಲ್ಲವಿಗೆ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌ ಇಲ್ಲದಿರುವುದು ಶಾಕ್ ನೀಡಿತ್ತು. ಕಂಪನಿಯಿಂದ ನೀಡಿರುವ ಈ ಲ್ಯಾಪ್‌ಟಾಪ್‌ಗೆ ತಾನೇ ದಂಢಕಟ್ಟಬೇಕು ಎಂದು ಭಯಗೊಂಡ ಪಲ್ಲಿವಿ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಇಲ್ಲಿ ಸರಿಯಾಗಿ ನೆರವು ಸಿಗದೇ ಇರುವುದರಿಂದ ಬೇಸತ್ತ ಪಲ್ಲವಿ ಪ್ರಕರಣವನ್ನು ತಾನೇ ಮುಗಿಸುತ್ತೇನೆ ಎಂದು ಪಣತೊಟ್ಟು ತಾನು ಬಂದಿದ್ದ ಆಟೋದ ಜಾಗದಲ್ಲಿ ಹುಡುಕಾಟ ಮಾಡಿದ್ದಾರೆ. ಬಳಿಕ ಅಲ್ಲೇ ಇದ್ದ ಕೆಲವು ಸಿಸಿ ಕ್ಯಾಮೆರಗಾಳನ್ನು ಗಮನಿಸಿದ ಪಲ್ಲವಿ ವಿಕ್ರೋಹೋಲಿ ಪೊಲೀಸ್‌ ಠಾಣೆಯವರ ಬಳಿಕ ತನಗೆ ಸಹಾಯ ಮಾಡುವಂತೆ ಕೋರಿಕೊಂಡಿದ್ದಾರೆ.

ಮೊದಲಿಗೆ ನೆರವು ನಿರಾಕರಿಸಿದ ಪೊಲೀಸರು ಬಳಿಕ ಕೇವಲ 5 ನಿಮಿಗಳನ್ನು ಅನುವು ಮಾಡಿಕೊಟ್ಟರು, ಆದರೆ ಎಷ್ಟೇ ಹುಡುಕಿದರು ಆತನ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ 5 ನಿಮಿಷ ಅವಕಾಶ ಕೇಳಿದೆ. ಈ ವೇಳೆ ತಾನು ಹತ್ತಿದ್ದ ರಿಕ್ಷಾ ಸ್ಟಾಪ್‌ ಕಂಡು ಹಿಡಿದೆ, ಆದರೆ ಆ ರಿಕ್ಷಾದ ನಂಬರ್‌ ಟ್ರೇಸ್‌ ಮಾಡಲು ಆಗಿರಲಿಲ್ಲ. ಹೀಗಾಗಿ ಐದು ನಂಬರ್‌ಗಳನ್ನು ಬರೆದುಕೊಂಡು ಆರ್‌ಟಿಒ ಅಧಿಕಾರಿ ಬಳಿ ತೆರಳಿದೆ. ಬಳಿಕ ಪಾರ್ಕ್‌ಸೈಟ್‌ ಪೊಲೀಸರ ಸಹಾಯದಿಂದ ಈತನ ರಿಕ್ಷಾ ಪತ್ತೆ ಹಚ್ಚಲಾಯಿತು' ಎಂದು ತನ್ನ ಕಥೆಯನ್ನು ಪಲ್ಲವಿ ಹೇಳಿಕೊಂಡಿದ್ದಾರೆ.

'ಮೊದಲಿಗೆ ಆಟೋ ಚಾಲಕ ತಾನು ಕದ್ದಿಲ್ಲ ಎಂದು ವಾದಿಸಿದರೂ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ, ಪಲ್ಲವಿಯವರು ರೆಸ್ಟೋರೆಂಟ್‌ಗೆ ತೆರಳಿದ್ದ ಸಂದರ್ಭದಲ್ಲಿ ಲ್ಯಾಪ್‌ಟಾಪನ್ನು ಸೀಟಿನ ಕೆಳಗಡೆ ಇಟ್ಟಿದ್ದ ಎಂದು ಆತ ಹೇಳಿದ್ದಾನೆ' ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ