ಏಜೆನ್ಸೀಸ್ ಹೊಸದಿಲ್ಲಿ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಆಂತರಿಕ ತನಿಖಾ ಸಮಿತಿಯು ಕ್ಲೀನ್ಚಿಟ್ ನೀಡಿರುವುದನ್ನು ವಿರೋಧಿಸಿ ಮಹಿಳಾ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆಯರು ಸುಪ್ರೀಂ ಕೋರ್ಟ್ ಆವರಣದ ಹೊರಗೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಿಜೆಐ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಕುರಿತು ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ, ''ಮಹಿಳೆ ಮಾಡಿರುವ ಆರೋಪಕ್ಕೆ ಪೂರಕವಾಗಿ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗಿಲ್ಲ, ಈ ಆರೋಪದಲ್ಲಿ ಹುರುಳಿಲ್ಲ'' ಎಂದು ಸೋಮವಾರ ಸಿಜೆಐ ಅವರಿಗೆ ಕ್ಲೀನ್ಚಿಟ್ ನೀಡಿತ್ತು.
ಇದನ್ನು ಖಂಡಿಸಿ ಮಹಿಳಾ ವಕೀಲರು ಮತ್ತು ಸಾಮಾಜಿಕ ಹೋರಾಟಗಾರ್ತಿಯರು ಕೋರ್ಟ್ ಹೊರಗೆ ಪ್ರತಿಭಟನೆ ನಡೆಸಿದರು. 'ಕಾನೂನಿನ ಪರಮಾಧಿಕಾರ ಪಾಲನೆಯಾಗಲಿ', 'ನೀವು ಉನ್ನತ ಸ್ಥಾನದಲ್ಲಿರಬಹುದು, ಆದರೆ ನಿಮಗಿಂತಲೂ ಕಾನೂನು ದೊಡ್ಡದು' ಎನ್ನುವ ಸಂದೇಶ ಒಳಗೊಂಡ ಬಿತ್ತಿಫಲಗಳನ್ನು ಹಿಡಿದು ಘೋಷಣೆ ಕೂಗಿದರು. 55 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಮಂದಿರ್ ಮಾರ್ಗ್ ಠಾಣೆಗೆ ಕರೆದೊಯ್ದರು. ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.
ನಿಷೇಧಾಜ್ಞೆ: ಪ್ರತಿಭಟನೆಯ ಬಿಸಿ ತಟ್ಟಿದ ಬಳಿಕ ಎಚ್ಚೆತ್ತ ದಿಲ್ಲಿ ಆಡಳಿತ ಸುಪ್ರೀಂ ಕೋರ್ಟ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಆವರಣದ ಸುತ್ತಮುತ್ತ ಗುಂಪು ಸೇರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
......
14 ದಿನಗಳಲ್ಲಿ ವರದಿ
ಸಿಜೆಐ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಗಾಗಿ ಹಿರಿಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಏಪ್ರಿಲ್ 30ರಂದು ರಚಿಸಲಾಗಿತ್ತು. ಈ ಸಮಿತಿ 14 ದಿನಗಳ ವಿಚಾರಣೆ ಬಳಿಕ ವರದಿ ಸಲ್ಲಿಸಿತ್ತು. ದೂರುದಾರ ಮಹಿಳೆ ಮೂರು ದಿನ ವಿಚಾರಣೆಗೆ ಹಾಜರಾಗಿದ್ದರು.
.......
ವರದಿ ಪ್ರತಿ ಪಡೆಯುವುದು ನನ್ನ ಹಕ್ಕು
ಸುಪ್ರೀಂ ಕೋರ್ಟ್ಗೆ ಆಂತರಿಕ ವಿಚಾರಣಾ ಸಮಿತಿ ಸಲ್ಲಿಸಿರುವ ವರದಿಯ ಪ್ರತಿಯನ್ನು ತಮಗೆ ನೀಡುವಂತೆ ದೂರುದಾರ ಮಹಿಳೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ವಿಚಾರಣೆ ಹಂತದಲ್ಲಿಯೇ ಪ್ರತಿಗಾಗಿ ಒತ್ತಾಯಿಸಿದ್ದ ಮಹಿಳೆ ಈಗ ಅದಕ್ಕಾಗಿ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಸಮಿತಿ ಅಂತಿಮ ನಿರ್ಧಾರಕ್ಕೆ ಬರಲು ಪರಿಗಣಿಸಿದ ಸಮಗ್ರ ವಿವರಗಳ ಮಾಹಿತಿ ಒಳಗೊಂಡ ವರದಿ ಪ್ರತಿ ತಮಗೆ ನೀಡಬೇಕು. ಅದನ್ನು ಪಡೆಯುವ ಹಕ್ಕು ತಮಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ಗೆ ಮಂಗಳವಾರ ಬರೆದ ಪತ್ರದಲ್ಲಿ ಮಹಿಳೆ, ಸಮಿತಿಯ ತೀರ್ಮಾನದಿಂದ ತಾವು ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ.''ವಿವರವಾದ ಅಫಿಡವಿಟ್, ಸಾಕಷ್ಟು ದೃಢವಾದ ಪುರಾವೆಗಳು ಮತ್ತು ಸ್ಪಷ್ಟವಾದ ಮಾಹಿತಿಯ ಜತೆಗೆ ಸಮಿತಿಯ ಮುಂದೆ ಲೈಂಗಿಕ ಕಿರುಕುಳದ ನನ್ನ ಅನುಭವವನ್ನು ಪುನರುಚ್ಚರಿಸಿದ್ದೆ. ನಾನು ಅನುಭವಿಸಿದ ತೊಂದರೆಯನ್ನು ವಿವರವಾಗಿ ಹಂಚಿಕೊಂಡಿದ್ದೆ. ಆದರೂ ದೂರಿನಲ್ಲಿ ಹುರುಳಿಲ್ಲ ಎಂದು ಹೇಳಿರುವುದು ನನಗೆ ಅಚ್ಚರಿ ಹಾಗೂ ಆಘಾತ ಉಂಟು ಮಾಡಿದೆ,'' ಎಂದು ಮಹಿಳೆ ಹೇಳಿದ್ದಾರೆ. ''ಸಮಿತಿ ಕಾರ್ಯ ವಿಧಾನದಲ್ಲಿ ಪಾರದರ್ಶಕತೆ ಇರಲಿಲ್ಲ. ಅದರ ಪೂರ್ವಾಗ್ರಹ ಪೀಡಿತ ಧೋರಣೆಯಿಂದ ನನಗೆ ಅನ್ಯಾಯವಾಗಿದೆ,'' ಎಂದು ದೂರಿದ್ದಾರೆ.
''ದೂರು ನೀಡಿದವರಿಗೆ ವಿಚಾರಣೆ ವರದಿಯ ಪ್ರತಿ ನೀಡದೇ ಹೋದರೆ ನೈಸರ್ಗಿಕ ನ್ಯಾಯದಾನ ತತ್ವದ ಉಲ್ಲಂಘನೆ ಮಾಡಿದಂತಾಗುತ್ತದೆ. ನ್ಯಾಯದ ಸಂಪೂರ್ಣ ಅಪಹಾಸ್ಯ ಕೂಡ ಆಗುತ್ತದೆ,'' ಎಂದು ಹೇಳಿದ್ದಾರೆ.
.......
ಕ್ಲೀನ್ಚಿಟ್ ನೀಡಿದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಪ್ಲೆಕಾರ್ಡ್ ಹಿಡಿದು ಸುಪ್ರೀಂ ಕೋರ್ಟ್ ಹೊರಗಡೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅವರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಸುಪ್ರೀಂ ಕೋರ್ಟ್ಗೆ ಅನ್ವಯಿಸುವುದಿಲ್ಲವೇ?
-ಪ್ರಶಾಂತ್ ಭೂಷಣ್, ಹಿರಿಯ ವಕೀಲ
.........
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಆಂತರಿಕ ತನಿಖಾ ಸಮಿತಿಯು ಕ್ಲೀನ್ಚಿಟ್ ನೀಡಿರುವುದನ್ನು ವಿರೋಧಿಸಿ ಮಹಿಳಾ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆಯರು ಸುಪ್ರೀಂ ಕೋರ್ಟ್ ಆವರಣದ ಹೊರಗೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಿಜೆಐ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಕುರಿತು ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ, ''ಮಹಿಳೆ ಮಾಡಿರುವ ಆರೋಪಕ್ಕೆ ಪೂರಕವಾಗಿ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗಿಲ್ಲ, ಈ ಆರೋಪದಲ್ಲಿ ಹುರುಳಿಲ್ಲ'' ಎಂದು ಸೋಮವಾರ ಸಿಜೆಐ ಅವರಿಗೆ ಕ್ಲೀನ್ಚಿಟ್ ನೀಡಿತ್ತು.
ಇದನ್ನು ಖಂಡಿಸಿ ಮಹಿಳಾ ವಕೀಲರು ಮತ್ತು ಸಾಮಾಜಿಕ ಹೋರಾಟಗಾರ್ತಿಯರು ಕೋರ್ಟ್ ಹೊರಗೆ ಪ್ರತಿಭಟನೆ ನಡೆಸಿದರು. 'ಕಾನೂನಿನ ಪರಮಾಧಿಕಾರ ಪಾಲನೆಯಾಗಲಿ', 'ನೀವು ಉನ್ನತ ಸ್ಥಾನದಲ್ಲಿರಬಹುದು, ಆದರೆ ನಿಮಗಿಂತಲೂ ಕಾನೂನು ದೊಡ್ಡದು' ಎನ್ನುವ ಸಂದೇಶ ಒಳಗೊಂಡ ಬಿತ್ತಿಫಲಗಳನ್ನು ಹಿಡಿದು ಘೋಷಣೆ ಕೂಗಿದರು. 55 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಮಂದಿರ್ ಮಾರ್ಗ್ ಠಾಣೆಗೆ ಕರೆದೊಯ್ದರು. ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.
ನಿಷೇಧಾಜ್ಞೆ: ಪ್ರತಿಭಟನೆಯ ಬಿಸಿ ತಟ್ಟಿದ ಬಳಿಕ ಎಚ್ಚೆತ್ತ ದಿಲ್ಲಿ ಆಡಳಿತ ಸುಪ್ರೀಂ ಕೋರ್ಟ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಆವರಣದ ಸುತ್ತಮುತ್ತ ಗುಂಪು ಸೇರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
......
14 ದಿನಗಳಲ್ಲಿ ವರದಿ
ಸಿಜೆಐ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಗಾಗಿ ಹಿರಿಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಏಪ್ರಿಲ್ 30ರಂದು ರಚಿಸಲಾಗಿತ್ತು. ಈ ಸಮಿತಿ 14 ದಿನಗಳ ವಿಚಾರಣೆ ಬಳಿಕ ವರದಿ ಸಲ್ಲಿಸಿತ್ತು. ದೂರುದಾರ ಮಹಿಳೆ ಮೂರು ದಿನ ವಿಚಾರಣೆಗೆ ಹಾಜರಾಗಿದ್ದರು.
.......
ವರದಿ ಪ್ರತಿ ಪಡೆಯುವುದು ನನ್ನ ಹಕ್ಕು
ಸುಪ್ರೀಂ ಕೋರ್ಟ್ಗೆ ಆಂತರಿಕ ವಿಚಾರಣಾ ಸಮಿತಿ ಸಲ್ಲಿಸಿರುವ ವರದಿಯ ಪ್ರತಿಯನ್ನು ತಮಗೆ ನೀಡುವಂತೆ ದೂರುದಾರ ಮಹಿಳೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ವಿಚಾರಣೆ ಹಂತದಲ್ಲಿಯೇ ಪ್ರತಿಗಾಗಿ ಒತ್ತಾಯಿಸಿದ್ದ ಮಹಿಳೆ ಈಗ ಅದಕ್ಕಾಗಿ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಸಮಿತಿ ಅಂತಿಮ ನಿರ್ಧಾರಕ್ಕೆ ಬರಲು ಪರಿಗಣಿಸಿದ ಸಮಗ್ರ ವಿವರಗಳ ಮಾಹಿತಿ ಒಳಗೊಂಡ ವರದಿ ಪ್ರತಿ ತಮಗೆ ನೀಡಬೇಕು. ಅದನ್ನು ಪಡೆಯುವ ಹಕ್ಕು ತಮಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ಗೆ ಮಂಗಳವಾರ ಬರೆದ ಪತ್ರದಲ್ಲಿ ಮಹಿಳೆ, ಸಮಿತಿಯ ತೀರ್ಮಾನದಿಂದ ತಾವು ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ.''ವಿವರವಾದ ಅಫಿಡವಿಟ್, ಸಾಕಷ್ಟು ದೃಢವಾದ ಪುರಾವೆಗಳು ಮತ್ತು ಸ್ಪಷ್ಟವಾದ ಮಾಹಿತಿಯ ಜತೆಗೆ ಸಮಿತಿಯ ಮುಂದೆ ಲೈಂಗಿಕ ಕಿರುಕುಳದ ನನ್ನ ಅನುಭವವನ್ನು ಪುನರುಚ್ಚರಿಸಿದ್ದೆ. ನಾನು ಅನುಭವಿಸಿದ ತೊಂದರೆಯನ್ನು ವಿವರವಾಗಿ ಹಂಚಿಕೊಂಡಿದ್ದೆ. ಆದರೂ ದೂರಿನಲ್ಲಿ ಹುರುಳಿಲ್ಲ ಎಂದು ಹೇಳಿರುವುದು ನನಗೆ ಅಚ್ಚರಿ ಹಾಗೂ ಆಘಾತ ಉಂಟು ಮಾಡಿದೆ,'' ಎಂದು ಮಹಿಳೆ ಹೇಳಿದ್ದಾರೆ. ''ಸಮಿತಿ ಕಾರ್ಯ ವಿಧಾನದಲ್ಲಿ ಪಾರದರ್ಶಕತೆ ಇರಲಿಲ್ಲ. ಅದರ ಪೂರ್ವಾಗ್ರಹ ಪೀಡಿತ ಧೋರಣೆಯಿಂದ ನನಗೆ ಅನ್ಯಾಯವಾಗಿದೆ,'' ಎಂದು ದೂರಿದ್ದಾರೆ.
''ದೂರು ನೀಡಿದವರಿಗೆ ವಿಚಾರಣೆ ವರದಿಯ ಪ್ರತಿ ನೀಡದೇ ಹೋದರೆ ನೈಸರ್ಗಿಕ ನ್ಯಾಯದಾನ ತತ್ವದ ಉಲ್ಲಂಘನೆ ಮಾಡಿದಂತಾಗುತ್ತದೆ. ನ್ಯಾಯದ ಸಂಪೂರ್ಣ ಅಪಹಾಸ್ಯ ಕೂಡ ಆಗುತ್ತದೆ,'' ಎಂದು ಹೇಳಿದ್ದಾರೆ.
.......
ಕ್ಲೀನ್ಚಿಟ್ ನೀಡಿದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಪ್ಲೆಕಾರ್ಡ್ ಹಿಡಿದು ಸುಪ್ರೀಂ ಕೋರ್ಟ್ ಹೊರಗಡೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅವರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಸುಪ್ರೀಂ ಕೋರ್ಟ್ಗೆ ಅನ್ವಯಿಸುವುದಿಲ್ಲವೇ?
-ಪ್ರಶಾಂತ್ ಭೂಷಣ್, ಹಿರಿಯ ವಕೀಲ
.........