ಆ್ಯಪ್ನಗರ

ಕಿಡ್ನಿ ನೀಡಿ ಸೌಹಾರ್ದತೆ ಮೆರೆದರು

ಇದೊಂದು ಅಪರೂಪದ ಪ್ರಕರಣ.. ಎರಡು ಭಿನ್ನ ಕೋಮಿನ ಕುಟುಂಬಗಳು ಪರಸ್ಪರ ಕಿಡ್ನಿ ದಾನ ಮಾಡಿ ತಮ್ಮ ಪತಿಯನ್ನು ಉಳಿಸಿಕೊಂಡು ಕೋಮು ಸೌಹಾರ್ದತೆ ಮೆರೆದ ಪ್ರಸಂಗ ನೋಯ್ಡಾದಲ್ಲಿ ವರದಿಯಾಗಿದೆ.

Navbharat Times 15 Jun 2018, 6:16 pm
ನೋಯ್ಡಾ: ಇದೊಂದು ಅಪರೂಪದ ಪ್ರಕರಣ.. ಎರಡು ಭಿನ್ನ ಕೋಮಿನ ಕುಟುಂಬಗಳು ಪರಸ್ಪರ ಕಿಡ್ನಿ ದಾನ ಮಾಡಿ ತಮ್ಮ ಪತಿಯನ್ನು ಉಳಿಸಿಕೊಂಡು ಕೋಮು ಸೌಹಾರ್ದತೆ ಮೆರೆದ ಪ್ರಸಂಗ ನೋಯ್ಡಾದಲ್ಲಿ ವರದಿಯಾಗಿದೆ.
Vijaya Karnataka Web kidney story


53 ವರ್ಷದ ಇಕ್ರಾಂ ಮತ್ತು 43 ವರ್ಷದ ಅನಿಲ್ ಕುಮಾರ್ ಇಬ್ಬರೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇಬ್ಬರಿಗೂ ಅಧಿಕ ರಕ್ತದೊತ್ತಡ ಇದ್ದಿದ್ದರಿಂದ ಕಿಡ್ನಿ ಸಮಸ್ಯೆಯಾಗಿದ್ದು, ಬದಲಿಸಬೇಕಾಗಿತ್ತು. ಆದರೆ ಸೂಕ್ತ ದಾನಿಗಳು ದೊರೆತಿರಲಿಲ್ಲ. ಹೀಗಾಗಿ ಇಬ್ಬರೂ ದಾನಿಗಳ ಹುಡುಕಾಟದಲ್ಲಿದ್ದರು.

ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂದಿದ್ದ ಅನಿಲ್ ಕುಮಾರ್ ಮತ್ತು ಮುಜಾಫರ್‌ಪುರದಿಂದ ಬಂದಿದ್ದ ಇಕ್ರಾಂ ನೋಯ್ಡಾದ ಜೇಪೀ ಆಸ್ಪತ್ರೆಗೆ ದಾಖಲಾಗಿದ್ದರು. ಇಕ್ರಾಂಗೆ ಬಿ ಪಾಸಿಟಿವ್ ರಕ್ತದ ಗುಂಪಿನ ಕಿಡ್ನಿ ಅವಶ್ಯಕತೆಯಿತ್ತು. ಆದರೆ ಅವರ ಪತ್ನಿ ಎ ನೆಗೆಟಿವ್ ರಕ್ತದ ಗುಂಪು ಹೊಂದಿದ್ದರು. ಮತ್ತೊಂದೆಡೆ ಅನಿಲ್ ಅವರ ಪತ್ನಿಯ ರಕ್ತದ ಗುಂಪು ಬಿ ಪಾಸಿಟಿವ್ ಆಗಿದ್ದು, ಅನಿಲ್‌ಗೆ ಎ ನೆಗೆಟಿವ್ ಗುಂಪಿನ ಕಿಡ್ನಿ ಅವಶ್ಯಕತೆಯಿತ್ತು.

ಇಬ್ಬರ ಕುಟುಂಬದವರಿಗೆ ವೈದ್ಯರು ಮನವರಿಕೆ ಮಾಡಿಕೊಟ್ಟು, ರಕ್ತದ ಗುಂಪು ಹೊಂದಾಣಿಕೆಯಾಗುತ್ತಿರುವ ಮತ್ತು ಎರಡೂ ಕುಟುಂಬಗಳು ಪರಸ್ಪರ ಕಿಡ್ನಿ ಬದಲಾಯಿಸಿಕೊಂಡರೆ, ಅದರಿಂದ ಇಬ್ಬರಿಗೂ ಪ್ರಯೋಜನವಾಗುತ್ತದೆ ಎಂದು ತಿಳಿವಳಿಕೆ ಹೇಳಿದರು. ಇದಕ್ಕೆ ಎರಡೂ ಕುಟುಂಬಗಳು ಒಪ್ಪಿದ್ದು, ಅನಿಲ್ ಪತ್ನಿ ಕಿಡ್ನಿ ಇಕ್ರಾಂಗೆ ನೀಡಿದರೆ, ಇಕ್ರಾಂ ಪತ್ನಿ ಅನಿಲ್‌ಗೆ ಕಿಡ್ನಿ ನೀಡಿದರು.

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಬಳಿಕ ಎರಡೂ ಕುಟುಂಬಗಳು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿವೆ. ಈ ವಿಶೇಷ ಪ್ರಕರಣ ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಸಾರಿದೆ.
ಮೂಲ ವರದಿ: ನವಭಾರತ್ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ