ಆ್ಯಪ್ನಗರ

ಜಮ್ಮುವಿನಲ್ಲಿ ಭಾರೀ ಹಿಮಪಾತ: ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದಾಗಿ ರಸ್ತೆಗಳು ಬಂದಾಗಿವೆ. ಈ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ನೆರವಿಗೆ ಸೇನೆ ಧಾವಿಸಿದೆ. ಮಹಿಳೆ ಸೇನಾ ವಾಹನದಲ್ಲೇ ಹೆಣ್ಣ ಮಗುವಿಗೆ ಜನ್ಮ ನೀಡಿದ್ದಾರೆ.

Vijaya Karnataka Web 2 Feb 2021, 5:09 pm

ಹೈಲೈಟ್ಸ್‌:

  • ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
  • ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದಿಂದ ರಸ್ತೆ ಬಂದ್
  • ಗರ್ಣಿಣಿಯ ನೆರವಿಗೆ ದಾವಿಸಿದ ಸೇನಾ ವಾಹನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Woman tortured by husband for giving birth to girl child
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದಾಗಿ ರಸ್ತೆಗಳು ಬಂದಾಗಿವೆ. ಈ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಈ ಸಂದರ್ಭದಲ್ಲಿ ಸೇನಾ ವಾಹನವು ಮಹಿಳೆಯ ನೆರವಿಗೆ ಧಾವಿಸಿತು. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ, ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ.
ಮಂಗಳವಾರ ಬೆಳಗಿನ ಜಾವ ನಾಲ್ಕು ಗಂಟೆಯಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆಗಾಗಲೇ ಭಾರೀ ಹಿಮಪಾತದಿಂದಾಗಿ ರಸ್ತೆಗಳೆಲ್ಲವೂ ಬಂದ್‌ ಆಗಿ ಸಂಚಾರ ಸ್ಥಗಿತವಾಗಿತ್ತು. ಈ ವೇಳೆ ಸ್ಥಳೀಯ ಆಶಾ ಕರ್ಯಕರ್ತೆಯು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಹಿಮಾವೃತವಾಗಿದ್ದ ರಸ್ತೆಯಲ್ಲಿ ಆಂಬುಲೆನ್ಸ್‌ ಕೂಡ ತಲುಪಲಾಗಲಿಲ್ಲ. ಕಡೇ ಪ್ರಯತ್ನ ಎಂಬಂತೆ ಸೇನೆಗೆ ಕರೆ ಮಾಡಿದ್ದಾರೆ. ಕಲಾರೋಸ್‌ ಕಂಪನಿಯ ಕಮಾಂಡರ್‌ ಒಬ್ಬರು ಮಹಿಳೆಯ ನೆರವಿಗಾಗಿ ಸೇನಾ ವಾಹನ ಕಳುಹಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಳಿ ಸೇನಾ ಹೆಲಿಕಾಪ್ಟರ್‌ ಅಪಘಾತ: ಇಬ್ಬರು ಪೈಲಟ್‌ಗಳಿಗೆ ಗಾಯ

ವಾಹನದಲ್ಲಿ ವೈದ್ಯರ ತಂಡವನ್ನೂ ಕಳಿಹಿಸಲಾಗಿತ್ತು. ಹೀಗಾಗಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಕುಟುಂಬಕ್ಕೆ ಕಮಾಂಡರ್‌ ಅಭಿನಂದಿಸಿದ್ದಾರೆ. ಸಕಾಲದಲ್ಲಿ ಗರ್ಬಿಣಿಗೆ ಸಹಾಯಕ್ಕೆ ಸಂಪರ್ಕಿಸಿದ ಆಶಾ ಕಾರ್ಯಕರ್ತೆ ಸಾದಿಯಾ ಬೇಗಂ ಅವರ ಕರ್ತವ್ಯವನ್ನೂ ಶ್ಲಾಘಿಸಿದ್ದಾರೆ.

ಶ್ರೀನಗರದಲ್ಲಿ ಭಾರಿ ಹಿಮಪಾತವಾಹನ ಸಂಚಾರ ಸ್ಥಗಿತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ